Karnataka News Live 2nd April: 'Best Homecoming Ever' ಸುನೀತಾ ವಿಲಿಯಮ್ಸ್ಗೆ ಪ್ರೀತಿಯ ಸ್ವಾಗತ ನೀಡಿದ ಮುದ್ದಿನ ನಾಯಿಗಳು!
ಬೆಂಗಳೂರು (ಮಾ.11): ಗ್ಯಾರಂಟಿ ಬಿಸಿಯನ್ನು ರಾಜ್ಯ ಸರ್ಕಾರ ಈಗ ನೇರವಾಗಿ ಜನರಿಗೆ ವರ್ಗಾವಣೆ ಮಾಡಿದೆ. ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ಜನರಿಂದಲೇ ತುಂಬಿಸುವ ನಿಟ್ಟಿನಲ್ಲಿ ಹಾಲು, ವಿದ್ಯುತ್, ಬಸ್ ದರ ಏರಿಕೆಯ ಬಳಿಕ ಈಗ ಮತ್ತೊಂದು ಸುತ್ತಿನಲ್ಲಿ ಡೀಸೆಲ್ ದರವನ್ನು ಏರಿಕೆ ಮಾಡಿದೆ. ಖಜಾನೆಗೆ 2 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆಯಲ್ಲಿ ಡೀಸೆಲ್ ದರವನ್ನು ಇಂದಿನಿಂದಲೇ ಜಾರಿಗೆ ಬರುವಂತೆ 2 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅದರೊಂದಗೆ ಎಂದಿನಂತೆ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಅಗ್ಗ ಎನ್ನುವ ಹಳೇ ಹೇಳಿಕೆಯನ್ನೇ ಸಮರ್ಥನೆಗೆ ಬಳಸಿಕೊಂಡಿದೆ.