ವಿದೇಶಿ ಸಾಲದ ನೆರವಿನಿಂದಲೇ ಸರ್ಕಾರ ನಡೆಸುತ್ತಿರುವ ಪಾಕಿಸ್ತಾನ ಇದೀಗ ಕಾಂಡೋಮ್ ಸೇರಿದಂತೆ ಗರ್ಭನಿರೋಧಕಗಳ ಮೇಲಿನ ತೆರಿಗೆ ಕಡಿತ ಮಾಡಲಾಗದ ಪರಿಸ್ಥಿತಿ ತಲುಪಿದೆ. ನಿಜ. ಐಎಂಎಫ್ನಿಂದ ಸಾಲ ಪಡೆದಿರುವ ಪಾಕಿಸ್ತಾನ, ಇದೀಗ ಆ ಹಣಕಾಸು ಸಂಸ್ಥೆಯ ಸೂಚನೆ ಅನ್ವಯವೇ ನಡೆದುಕೊಳ್ಳಬೇಕಾಗಿ ಬಂದಿದೆ.
ಗೃಹ ಸಚಿವ ಡಾ. ಜಿ.ಪರಮೇಶ್ವರ್ರಾ ಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ತುಮಕೂರು ಜಿಲ್ಲೆಯ 25 ಮಠಾಧೀಶರು ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ. ಪರಮೇಶ್ವರ್ ಅವರ ಸ್ವಚ್ಛ ರಾಜಕೀಯ ಕೆಪಿಸಿಸಿ ಅಧ್ಯಕ್ಷರಾಗಿ ಗೃಹ ಸಚಿವರಾಗಿ ಅವರ ಸೇವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶ್ಲಾಘಿಸಿದ್ದಾರೆ.
ಕೇರಳ ಸರ್ಕಾರದ ಆರ್ಥಿಕ ನಿರ್ವಹಣೆ ಹಳಿ ತಪ್ಪಿದ ಕಾರಣ ನೀಡಿ, 2025-26ನೇ ಆರ್ಥಿಕ ವರ್ಷದ ಕೊನೆಯ 3 ತಿಂಗಳಲ್ಲಿ ರಾಜ್ಯ ಸಾಲ ಪಡೆಯಬಹುದಾದ ಮೊತ್ತದ ಮಿತಿಯಲ್ಲಿ ಕೇಂದ್ರ ಸರ್ಕಾರ ಸುಮಾರು 6,000 ಕೋಟಿ ರು.ಗಳಷ್ಟು ಕಡಿತ ಮಾಡಿದೆ. ಇದು ಕೇರಳ ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಭಾರತ ಮತ್ತು ಒಮಾನ್ ದೇಶಗಳು ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗುರುವಾರ ಇಲ್ಲಿ ಸಹಿಹಾಕಿವೆ. ಇದರನ್ವಯ ಇನ್ನುಮುಂದೆ ಭಾರತದಿಂದ ಆಮದಾಗುವ ಶೇ.98 ವಿಧದ ವಸ್ತುಗಳ ಮೇಲಿನ ತೆರಿಗೆಯನ್ನು ಒಮಾನ್ ಶೂನ್ಯಕ್ಕೆ ಇಳಿಸಿದೆ.
ಉತ್ತರ ಕರ್ನಾಟಕ ಭಾಗಕ್ಕೆ 1945 ಕೋಟಿ ರು. ಮೊತ್ತದ ವಿವಿಧ ಹೊಸ ಯೋಜನೆ ಹಾಗೂ 1503 ಕೋಟಿ ರು. ವೆಚ್ಚದ ಕೆರೂರು ಏತ ನೀರಾವರಿ ಯೋಜನೆಯ ಪರಿಷ್ಕೃತ ಅಂದಾಜಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ- ಮಾರ್ಚ್ ತಿಂಗಳ ಬಾಕಿಯನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಹಾಗೂ ಮಹಿಳೆಯರು ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಲಕ್ಷ್ಮೀ ಅನ್ನೋದು ಚುನಾವಣಾ ಲಕ್ಷ್ಮೀ ಆಗಿದೆ ಎಂದು ಆರೋಪಿಸಿದ್ದಾರೆ
ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆಯುವ ‘ಶಾಂತಿ’ ಮಸೂದೆಗೆ ಸಂಸತ್ತಿನ ಅನುಮೋದನೆ ಲಭಿಸಿದೆ. ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಈ ಬಿಲ್ಗೆ ಗುರುವಾರ ರಾಜ್ಯಸಭೆಯಲ್ಲೂ ಧ್ವನಿಮತದ ಮೂಲಕ ಹಸಿರುನಿಶಾನೆ ತೋರಲಾಗಿದೆ. ರಾಷ್ಟ್ರಪತಿಯ ಅಂಕಿತದಿಂದಿಗೆ ಅದು ಕಾಯ್ದೆಯಾಗುವುದಷ್ಟೇ ಬಾಕಿ ಇದೆ.
ಶಬರಿಮಲೆ ಚಿನ್ನ ಕಳವು ಪ್ರಕರಣದಿಂದಾಗಿ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನಗಾದ ಹಿನ್ನಡೆಯಿಂದ ಹತಾಶೆಗೊಂಡಿರುವ ಕೇರಳದ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರ, ಚುನಾವಣೆ ವೇಳೆ ವೈರಲ್ ಆಗಿದ್ದ ಅಯ್ಯಪ್ಪನ ಭಕ್ತಿಗೀತೆ ಹೋಲುವ ವೈರಲ್ ಗೀತೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
15 ಅಮಾಯಕ ಯಹೂದಿಗಳನ್ನು ಬಲಿ ಪಡೆದ ಬೋಂಡಿ ಬೀಚ್ ಉಗ್ರ ದಾಳಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಮುನ್ನವೇ ಆಸ್ಟ್ರೇಲಿಯಾ ಪೊಲೀಸರು ಮತ್ತೊಂದು ಸಂಭವನೀಯ ದಾಳಿಯ ಸಂಚು ವಿಫಲಗೊಳಿಸಿದ್ದಾರೆ.
ಮರುಭೂಮಿ ದೇಶ ಸೌದಿ ಅರೇಬಿಯಾದಲ್ಲಿ ಅಪರೂಪದ ಹಿಮಪಾತ ಮತ್ತು ಗುಡುಗುಸಹಿತ ಮಳೆಯಾಗಿದೆ. ಉತ್ತರದ ತಬೂಕ್ ಪ್ರದೇಶದ ಜಬಲ್ ಅಲ್ ಲಾವ್ಜ್ ಬೆಟ್ಟ ಮತ್ತು ಇತರ ಬೆಟ್ಟಗಳು ಹಿಮದಿಂದ ಆವೃತವಾದ ಅದ್ಭುತ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.