MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Yellapur: ರಂಜಿತಾಳನ್ನು ಕೊಂದು ಎಸ್ಕೇಪ್ ಆಗಿದ್ದ ರಫೀಕ್ ನೇಣಿಗೆ ಶರಣು; ಕಾಡಿನಲ್ಲಿ ಶವ ಪತ್ತೆ

Yellapur: ರಂಜಿತಾಳನ್ನು ಕೊಂದು ಎಸ್ಕೇಪ್ ಆಗಿದ್ದ ರಫೀಕ್ ನೇಣಿಗೆ ಶರಣು; ಕಾಡಿನಲ್ಲಿ ಶವ ಪತ್ತೆ

ಯಲ್ಲಾಪುರದಲ್ಲಿ ರಂಜಿತಾ ಬನ್ಸೊಡೆ ಎಂಬ ಹಿಂದೂ ಮಹಿಳೆಯನ್ನು ಮದುವೆ ನಿರಾಕರಿಸಿದ್ದಕ್ಕೆ ಮಹಮ್ಮದ್ ರಫೀಕ್ ಎಂಬಾತ ಹ*ತ್ಯೆ ಮಾಡಿದ್ದ. ಕೊಲೆಯ ನಂತರ ಪರಾರಿಯಾಗಿದ್ದ ಆರೋಪಿ ರಫೀಕ್, ರಾಮಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

1 Min read
Author : Mahmad Rafik
Published : Jan 04 2026, 09:33 AM IST
Share this Photo Gallery
  • FB
  • TW
  • Linkdin
  • Whatsapp
15
ರಫೀಕ್ (30) ಆತ್ಮ*ಹತ್ಯೆ
Image Credit : Asianet News

ರಫೀಕ್ (30) ಆತ್ಮ*ಹತ್ಯೆ

ಯಲ್ಲಾಪುರದಲ್ಲಿ ಹಿಂದೂ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ರಫೀಕ್ ಇಮಾಮಸಾಬ್ (30) ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರದ ರಾಮಪುರ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ.

25
ಎಸ್ಕೇಪ್ ಆಗಿದ್ದ ರಫೀಕ್
Image Credit : Asianet News

ಎಸ್ಕೇಪ್ ಆಗಿದ್ದ ರಫೀಕ್

ಮೃತ ರಫೀಲ್ ಕಾಳಮ್ಮನಗರದ ನಿವಾಸಿಯಾಗಿದ್ದನು. ಶನಿವಾರದಿಂದ ಆರೋಪಿ ರಫೀಕ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ರಫೀಕ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊ*ಲೆಯಾಗಿತ್ತು. ರಂಜಿತಾ ಕೊ*ಲೆ ಬಳಿಕ ಮಹಮ್ಮದ್ ರಫೀಕ್ ಎಸ್ಕೇಪ್ ಆಗಿದ್ದನು.

Related Articles

Related image1
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Related image2
ಬೆಂಗಳೂರಲ್ಲಿ ಲವ್ ಜಿಹಾದ್; ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು
35
ಅಡುಗೆ ಸಹಾಯಕಿಯಾಗಿದ್ದ ರಂಜಿತಾ
Image Credit : Asianet News

ಅಡುಗೆ ಸಹಾಯಕಿಯಾಗಿದ್ದ ರಂಜಿತಾ

ಕೊ*ಲೆಯಾದ ರಂಜಿತಾ ರಾಮಾಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಗಂಡನಿಂದ ವಿಚ್ಛೇದನ ಪಡೆದು ತವರು ಮನೆಯಲ್ಲಿ ನೆಲೆಸಿದ್ದ ರಂಜಿತಾಗೆ ತನ್ನನ್ನು ಮದುವೆಯಾಗುವಂತೆ ರಫೀಕ್ ಪೀಡಿಸುತ್ತಿದ್ದನು. ಮದುವೆಯಾಗುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

45
ಮದುವೆಗೆ ಒಪ್ಪದ ರಂಜಿತಾ
Image Credit : Asianet News

ಮದುವೆಗೆ ಒಪ್ಪದ ರಂಜಿತಾ

ಆದ್ರೆ ಮದುವೆಯಾಗಲು ರಂಜಿತಾ ಒಪ್ಪಿರಲಿಲ್ಲ. ಮದುವೆಗೆ ನಿರಾಕರಿಸಿದ್ದ ಕೋಪಗೊಂಡಿದ್ದ ರಫೀಕ್, ಶನಿವಾರ ಶಾಲೆಯಿಂದ ಹಿಂದಿರುಗುತ್ತಿದ್ದ ರಂಜಿತಾ ಅವರನ್ನು ದಾರಿಯಲ್ಲಿ ಅಡ್ಡಗಟ್ಟಿದ್ದನು. ಈ ವೇಳೆ ರಂಜಿತಾ ಕುತ್ತಿಗೆಗೆ ಚಾಕು ಇರಿದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಕುತ್ತಿಗೆಯ ಮೂರು ನರಗಳು ತುಂಡಾಗಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ಒಯ್ಯುವಾಗ ಮಾರ್ಗಮಧ್ಯೆ ಸಾವಾಗಿತ್ತು.

ಇದನ್ನೂ ಓದಿ: ದ್ವೇಷ ಭಾಷಣ ನಿಷೇಧ ಕಾಯ್ದೆ ವಿರುದ್ಧ ಕೋರ್ಟ್‌ ಮೆಟ್ಟಿಲೇರುತ್ತೇವೆ: ಪ್ರಮೋದ್ ಮುತಾಲಿಕ್

55
ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ
Image Credit : Getty

ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ

ರಂಜಿತಾ ಸಾವಿನ ಸಂಬಂಧ ಮೃತಳ ಸಹೋದರಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಯಲ್ಲಾಪುರ ಪೊಲೀಸರಿಂದ ಕಾಡು ಹಾಗೂ ಇತರೆಡೆ ನಾಕಾಬಂಧಿ ಹಾಕಿ ಹುಡುಕಾಟ ನಡೆಸಿದ್ರು. ಹ*ತ್ಯೆ ಪ್ರಕರಣದ ಬಳಿಕ ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇಂದು ಯಲ್ಲಾಪುರ ಬಂದ್ ಮಾಡಲು ಜನರಿಂದ ನಿರ್ಧಾರ ಮಾಡಿದ್ದರು. ಆದ್ರೆ, ಇಂದು ಆರೋಪಿ ರಫೀಕ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ

ಇದನ್ನೂ ಓದಿ: ನಮ್ಮ ಮೇಲೆ ದಬ್ಬಾಳಿಕೆ ಆದಾಗಲೆಲ್ಲಾ ಜಿಹಾದ್ ಇದ್ದೇ ಇರುತ್ತದೆ: ಮೌಲಾನಾ ಮಹಮೂದ್ ಮದನಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಉತ್ತರ ಕನ್ನಡ
ಪ್ರೀತಿ
ಕೊಲೆ
ಮದುವೆ
ಹಿಂದೂ

Latest Videos
Recommended Stories
Recommended image1
ಕೆಎಸ್ಸಾರ್ಟಿಸಿ : ಬೆಂಗಳೂರು ಬಸ್ ಪ್ರಯಾಣದರ ಕಡಿತ
Recommended image2
ಬೆಂಗಳೂರಿನ ಸರ್ಕಾರಿ ಸ್ವಾಮ್ಯದ 65 ಎಕರೆಯಲ್ಲಿ ವೃಕ್ಷೋದ್ಯಾನ ಅಭಿವೃದ್ಧಿ: ಎಂ.ಬಿ. ಪಾಟೀಲ್‌
Recommended image3
ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ : ಛಲವಾದಿ ನಾರಾಯಣಸ್ವಾಮಿ
Related Stories
Recommended image1
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Recommended image2
ಬೆಂಗಳೂರಲ್ಲಿ ಲವ್ ಜಿಹಾದ್; ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved