09:52 PM (IST) Jan 05

Karnataka News Live 5 January 2026Viral Video - ಬ್ಯಾಂಕಾಕ್‌ನಲ್ಲಿ 'ಕೆಲಸ' ಮುಗಿಸಿ ಹಣ ಕೊಡದ ಭಾರತೀಯ ವ್ಯಕ್ತಿ, ಟ್ರಾನ್ಸ್‌ವುಮೆನ್ಸ್‌ಗಳಿಂದ ಹಲ್ಲೆ!

ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಎಸ್ಕಾರ್ಟ್‌ ಸೇವೆಗಳ ಹಣ ಪಾವತಿ ವಿವಾದದ ಹಿನ್ನೆಲೆಯಲ್ಲಿ, ಟ್ರಾನ್ಸ್‌ಜೆಂಡರ್ ಮಹಿಳೆಯರ ಗುಂಪು 52 ವರ್ಷದ ಭಾರತೀಯ ಪ್ರಜೆ ರಾಜ್ ಜಸುಜಾ ಅವರ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story
08:58 PM (IST) Jan 05

Karnataka News Live 5 January 2026ಕುಂದಾಪುರದಲ್ಲಿ KSRTC ಬಸ್‌ಗೆ ಢಿಕ್ಕಿ ಹೊಡೆದ ಟಿಪ್ಪರ್‌, 15 ಪ್ರಯಾಣಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ!

ಕುಂದಾಪುರ ತಾಲೂಕಿನ ತಲ್ಲೂರು-ನೇರಳಕಟ್ಟೆ ರಸ್ತೆಯ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಏಳು ವಿದ್ಯಾರ್ಥಿಗಳು ಸೇರಿದಂತೆ ಹದಿನೈದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

Read Full Story
08:57 PM (IST) Jan 05

Karnataka News Live 5 January 2026Bigg Boss Spandana Eviction - ಈ ವಾರವೂ ಸ್ಪಂದನಾ ಹೊರಬರದಿದ್ರೆ ನಡೆದೇ ಹೋಗ್ತಿದ್ದು ದೊಡ್ಡ ಯುದ್ಧ?

ಫಿನಾಲೆಗೆ ಕೆಲವೇ ದಿನಗಳಿರುವಾಗ ಸ್ಪಂದನಾ ಸೋಮಣ್ಣ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ವಾಹಿನಿ ಕಡೆಯವರೆಂಬ ಕಾರಣಕ್ಕೆ ಅರ್ಹತೆ ಇಲ್ಲದಿದ್ದರೂ ಮನೆಯಲ್ಲಿದ್ದಾರೆ ಎಂದು ಜಾಹ್ನವಿ, ಮಾಳು ಸೇರಿದಂತೆ ಹಲವರು ಆರೋಪಿಸಿದ್ದರು. ಇದೀಗ ಅವರ ಎಲಿಮಿನೇಷನ್‌ನಿಂದಾಗಿ ಈ ಚರ್ಚೆಗೆ ತೆರೆಬಿದ್ದಿದೆ.
Read Full Story
08:20 PM (IST) Jan 05

Karnataka News Live 5 January 2026Century Gowda Death - ಗಡ್ಡಪ್ಪ ನಂತರ ತಿಥಿ ಸಿನಿಮಾದ ಸೆಂಚುರಿ ಗೌಡ ನಿಧನ!

'ತಿಥಿ' ಸಿನಿಮಾದ ಸೆಂಚುರಿ ಗೌಡ ಖ್ಯಾತಿಯ ಸಿಂಗ್ರಿ ಗೌಡ ಅವರು ನೂರಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದಕ್ಕೂ ಒಂದೂವರೆ ತಿಂಗಳ ಹಿಂದೆ ಅದೇ ಚಿತ್ರದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಕೂಡ ನಿಧನರಾಗಿದ್ದರು. 

Read Full Story
07:57 PM (IST) Jan 05

Karnataka News Live 5 January 2026ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲೇ ಧಾರವಾಡ ಜಿಲ್ಲೆ ಪ್ರಥಮ - ಹೆಚ್.ಎಂ.ರೇವಣ್ಣ

ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಘೋಷಿಸಿದ್ದಾರೆ.

Read Full Story
07:17 PM (IST) Jan 05

Karnataka News Live 5 January 2026ಕನ್ನಡ ಮನೆಯಲ್ಲಿ ಮಾತಾಡಿ ಎಂದ ವಾರ್ಡನ್‌ನ ಮನೆಗೆ ಕಳುಹಿಸಿದ ಬೆಂಗಳೂರಿನ ಕಾಲೇಜು

ಕನ್ನಡ ಭಾಷೆ ಮಾತನಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ಕಾಲೇಜೊಂದರ ಹಾಸ್ಟೆಲ್ ವಾರ್ಡನ್‌ ಒಬ್ಬರನ್ನು ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ.

Read Full Story
06:46 PM (IST) Jan 05

Karnataka News Live 5 January 2026ಬೆಂಗಳೂರು - ಸಿನೆಮಾ ಟಾಕೀಸ್‌ ವಾಶ್‌ರೂಂನಲ್ಲಿ ಕ್ಯಾಮಾರಾ ಪತ್ತೆ, ಅಪ್ರಾಪ್ತನ ಬಳಕೆ ಆರೋಪ, ದೂರು ಕೊಟ್ಟ ಮಹಿಳಾ ಟೆಕ್ಕಿ

ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನ ಲೇಡಿಸ್ ವಾಶ್ ರೂಮ್‌ನಲ್ಲಿ ಗುಪ್ತ ಕ್ಯಾಮೆರಾ ಪತ್ತೆಯಾಗಿದೆ. ಸಿನಿಮಾ ನೋಡಲು ಬಂದಿದ್ದ ಮಹಿಳಾ ಟೆಕ್ಕಿಯೊಬ್ಬರು ನೀಡಿದ ದೂರಿನ ಮೇರೆಗೆ, ಥಿಯೇಟರ್ ಸಿಬ್ಬಂದಿ ಮತ್ತು ವಿಡಿಯೋ ಚಿತ್ರೀಕರಿಸುತ್ತಿದ್ದ ಅಪ್ರಾಪ್ತ ಬಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Read Full Story
05:20 PM (IST) Jan 05

Karnataka News Live 5 January 2026ಕೋಗಿಲು ನಿರಾಶ್ರಿತರಿಗೆ ವಸತಿ ನೀಡುವ ಬಗ್ಗೆ ಮಹತ್ವದ ಸಭೆ, ಕನ್ನಡಿಗರಿಗೆ ಮೊದಲ ಆದ್ಯತೆ, ಇನ್ನೂ ಹಲವು ವಿಚಾರ ಚರ್ಚೆ

ಕೋಗಿಲು ಕ್ರಾಸ್ ನಿರಾಶ್ರಿತರಿಗೆ ಮನೆ ನೀಡುವ ಕುರಿತು ರಾಜ್ಯ ಸರ್ಕಾರವು ಕಾನೂನುಬದ್ಧ ಹಾಗೂ ಮಾನವೀಯ ಕ್ರಮಗಳನ್ನು ಅನುಸರಿಸಲು ನಿರ್ಧರಿಸಿದೆ. ಸಚಿವ ಸಭೆಯಲ್ಲಿ, ಅರ್ಹತೆ ಪರಿಶೀಲಿಸಿ, ಐದು ವರ್ಷಕ್ಕೂ ಹೆಚ್ಚು ಕಾಲ ವಾಸವಿರುವ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

Read Full Story
04:30 PM (IST) Jan 05

Karnataka News Live 5 January 2026ಕೊಪ್ಪಳ ರೈಲ್ವೆ ಮೇಲ್ಸೇತುವೆ ಬಂದ ಸಚಿವ ಸೋಮಣ್ಣಗೆ ಮುಖಭಂಗ, ಹೊಡೆದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು!

ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಪ್ರೋಟೋಕಾಲ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ನಡೆಯಿತು. ಈ ಗದ್ದಲದಿಂದಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ನಿರ್ಗಮಿಸಿದರು. 

Read Full Story
04:03 PM (IST) Jan 05

Karnataka News Live 5 January 2026ಫ್ರಿಡ್ಜ್ ಇಲ್ಲದೆ ತರಕಾರಿ , ಸೊಪ್ಪು‌, ಹಣ್ಣುಗಳು ಹಾಳಾಗದಂತೆ ಇಡೋದು ಹೇಗೆ? ಅಜ್ಜಿಯಂದಿರ ಟಿಪ್ಸ್‌ಗಳಿವು!

Vegetable And Fruits Store: ಫ್ರಿಡ್ಜ್ ಇಲ್ಲದೆಯೂ‌ ಕೂಡ ಹಣ್ಣುಗಳು, ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಹಿರಿಯರು ಅನುಸರಿಸುತ್ತಿದ್ದ ಅದ್ಭುತವಾದ ಮತ್ತು ಸುಲಭವಾದ ವಿಧಾನಗಳು ಇಲ್ಲಿವೆ.

Read Full Story
03:57 PM (IST) Jan 05

Karnataka News Live 5 January 2026ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಸಂಗ್ರವಾದ ಟೋಲ್ ಎಷ್ಟು?

ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಸಂಗ್ರವಾದ ಟೋಲ್ ಎಷ್ಟು?, ನೀವು ಎಕ್ಸ್‌ಪ್ರೆವೇ ಮೂಲಕ ಸಂಚಾರ ಮಾಡುವಾಗ ಕಟ್ಟಿದ ಟೋಲ್ ಒಟ್ಟು ಮೊತ್ತ ಹೊಸ ದಾಖಲೆ ಬರೆದಿದೆ.

Read Full Story
03:30 PM (IST) Jan 05

Karnataka News Live 5 January 2026ಬಳ್ಳಾರಿ ಗಲಾಟೆಗೆ ಬಿಗ್ ಟ್ವಸ್ಟ್, ರಸ್ತೆ ಬದಿ ಸಿಕ್ತು ಬುಲೆಟ್‌, ರಾಜಶೇಖರ್ ಮರಣೋತ್ತರ ಪರೀಕ್ಷೆ 2 ಸಲ ಮಾಡಿದ್ಯಾಕೆ?

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಫೈರಿಂಗ್ ಪ್ರಕರಣವು ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಘಟನಾ ಸ್ಥಳದಲ್ಲಿ ಬುಲೆಟ್ ಪತ್ತೆಯಾಗಿದ್ದು, ರಾಜಶೇಖರ ಎಂಬುವವರ ಸಾವಿನ ಕುರಿತು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Read Full Story
03:23 PM (IST) Jan 05

Karnataka News Live 5 January 2026ಅದೊಂದು ತಪ್ಪು ಮಾಡಿ Bigg Boss ಟ್ರೋಫಿಯಿಂದ ದೂರ ಆಗ್ತಿದ್ದಾರಾ Ashwini Gowda? ಕಂಪೆನಿ HR ಏನಂತಾರೆ?

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಅಶ್ವಿನಿ ಗೌಡ ಅವರು ಕೆಲವೊಮ್ಮೆ ಜನರ ಹೃದಯ ಗೆದ್ದರೆ, ಇನ್ನೂ ಕೆಲವೊಮ್ಮೆ ಹೃದಯವನ್ನು ಕಳೆದುಕೊಳ್ತಾರೆ. ಹೀಗೆ ಆಗುತ್ತಿರೋಕೆ ಕಾರಣ ಏನು? ನಿಜಕ್ಕೂ ಅವರ ಆಟ ಹೇಗಿದೆ? ಕಂಪೆನಿ HR ಹೇಳಿದ್ದೇನು?

Read Full Story
02:57 PM (IST) Jan 05

Karnataka News Live 5 January 2026BBK 12 - ರಾಶಿಕಾ ಶೆಟ್ಟಿಗೆ ಒರಗಿಕೊಳ್ಳೋಕೆ ರಘು ತೊಡೆ, ಎದೆ ಬೇಕು - ಎಡವಟ್ಟು ಮಾಡ್ಕೊಂಡ Ashwini Gowda

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರನ್ನು ವೀಕ್ಷಕರು ಹೊಗಳೋಕೆ ಆರಂಭಿಸಿದರು ಎನ್ನುವಷ್ಟರಲ್ಲಿ, ರಾಶಿಕಾ ಶೆಟ್ಟಿ ಬಗ್ಗೆ ಮಾತನಾಡಿರೋದು ದೊಡ್ಡ ಅಲೆ ಎಬ್ಬಿಸಿದೆ. ಹಾಗಾದರೆ ಏನಾಯ್ತು?

Read Full Story
02:56 PM (IST) Jan 05

Karnataka News Live 5 January 2026BBK 12 ರಘು ಹಾಕಿದ ಚಾಲೆಂಜ್ ಸ್ವೀಕಾರ ಮಾಡ್ತಾರಾ ಧ್ರುವಂತ್? ಚೆಂಡಾಟದಲ್ಲಿ ಸಿಡಿಗುಂಡು ಸ್ಪೋಟ

ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ಧ್ರುವಂತ್ ನೀಡಿದ ಕಾರಣಗಳಿಂದ ರಘು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ತನ್ನ ಅಡುಗೆಯನ್ನು ಟೀಕಿಸಿದ್ದಕ್ಕೆ ಕೆಂಡಾಮಂಡಲರಾದ ರಘು, ಮನೆಯಿಂದ ಹೊರಗೆ ಒಬ್ಬನೇ ಬಾ ಎಂದು ಧ್ರುವಂತ್‌ಗೆ ನೇರ ಸವಾಲು ಹಾಕಿದ್ದಾರೆ.
Read Full Story
02:36 PM (IST) Jan 05

Karnataka News Live 5 January 2026ನನಗೂ ದೇವರಾಜ ಅರಸ್ ಅವರಿಗೂ ಹೋಲಿಕೆ ಇಲ್ಲ, ದಾಖಲೆಗಳಿರುವುದೇ ಮುರಿಯಲು - ಸಿದ್ದರಾಮಯ್ಯ

ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವರಾಜ ಅರಸ್ ಅವರ ದೀರ್ಘಾವಧಿ ಆಡಳಿತದ ದಾಖಲೆಯನ್ನು ಮುರಿಯುತ್ತಿರುವ ಬಗ್ಗೆ, ತಮ್ಮ ರಾಜಕೀಯ ಪಯಣ, ಬಳ್ಳಾರಿ ಗಲಾಟೆ ಮತ್ತು ಮೈಸೂರು ಭಾಗದ ಹುಲಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು.

Read Full Story
02:23 PM (IST) Jan 05

Karnataka News Live 5 January 2026ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಉಸಿರುಗಟ್ಟಿ ಮಂಗಳೂರಿನ ಟೆಕ್ಕಿ ಶರ್ಮಿಳಾ ಸಾವು

ಬೆಂಗಳೂರಿನ ರಾಮ ಮೂರ್ತಿನಗರದ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿದೆ. ಈ ದುರ್ಘಟನೆಯಲ್ಲಿ ಉಸಿರುಗಟ್ಟಿ ಮಂಗಳೂರು ಮೂಲದ 34 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಮೃತಪಟ್ಟಿದ್ದಾರೆ.
Read Full Story
01:26 PM (IST) Jan 05

Karnataka News Live 5 January 2026ವೈದ್ಯನ ಮೊಬೈಲ್ ಪ್ರೀತಿ, ಸ್ಟ್ರೇಚ್ಚರ್ ಮೇಲೆ‌ ರೋಗಿಯ ನರಳಾಟ! ಸರ್ಕಾರಿ ಜಿಲ್ಲಾಸ್ಪತ್ರೆಯ ವಿಡಿಯೋ ವೈರಲ್

ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ. ರೋಗಿ ಸ್ಟ್ರೇಚ್ಚರ್ ಮೇಲೆ ನರಳುತ್ತಿದ್ದರೂ, ವೈದ್ಯರು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ನಂತರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
01:06 PM (IST) Jan 05

Karnataka News Live 5 January 2026ನಟಿ ರಮ್ಯಾಕೃಷ್ಣನ್ ಜೊತೆಗಿನ ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಕೃಷ್ಣವಂಶಿ

ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ವಿಚ್ಛೇದನದ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತದೆ. ಇದೀಗ ಸಂದರ್ಶನದಲ್ಲಿ ಡಿವೋರ್ಸ್ ಬಗ್ಗೆ ರಮ್ಯಾಕೃಷ್ಣನ್ ಪತಿ ಮೊದಲ ಬಾರಿಗೆ ಮಾತನಾಡಿದ್ದಾರೆ. 

Read Full Story
12:16 PM (IST) Jan 05

Karnataka News Live 5 January 2026BBK 12 - ಬಿಗ್‌ಬಾಸ್ ಸೀಸನ್ 12ರ ಟ್ರೋಫಿ ಯಾರಿಗೆ? ಅಚ್ಚರಿಯ ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಸ್ಪಂದನಾ ಸೋಮಣ್ಣ, ಸೀಸನ್ 12ರ ವಿನ್ನರ್ ಯಾರೆಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಧನುಷ್ ಗೆಲ್ಲಬೇಕಾದ ಸ್ಪರ್ಧಿಯಾದರೂ, ಗಿಲ್ಲಿ ನಟ ಈ ಬಾರಿಯ ಟ್ರೋಫಿ ಎತ್ತಲಿದ್ದಾರೆ. ಜೊತೆಗೆ ಟಾಪ್ 5 ಸ್ಪರ್ಧಿಗಳು ಯಾರೆಂಬುದನ್ನೂ ಬಹಿರಂಗಪಡಿಸಿದ್ದಾರೆ.
Read Full Story