- Home
- News
- State
- Karnataka News Live: ₹314 ಕೋಟಿ ಮೊತ್ತದ 18 ಹೊಸ ಹೋಟೆಲ್ಗಳ ಯೋಜನೆಗಳಿಗೆ 47.23 ಕೋಟಿ ಸಹಾಯಧನ ಅನುಮೋದನೆ
LIVE NOW
Karnataka News Live: ₹314 ಕೋಟಿ ಮೊತ್ತದ 18 ಹೊಸ ಹೋಟೆಲ್ಗಳ ಯೋಜನೆಗಳಿಗೆ 47.23 ಕೋಟಿ ಸಹಾಯಧನ ಅನುಮೋದನೆ

ಸಾರಾಂಶ
ಕೊಪ್ಪಳ: ಇಸ್ಲಾಂ ಧರ್ಮದ ಕುರಿತ ತಮ್ಮ ಹೇಳಿಕೆಗೆ ಎರಡು ದಿನಗಳಿಂದ ವ್ಯಾಪಕ ಪ್ರಚಾರ ಕೊಟ್ಟಿರುವುದಕ್ಕೆ ಧನ್ಯವಾದ, ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಸೌದಿ ಅರೇಬಿಯಾ, ಇರಾನ್ನಲ್ಲೆಲ್ಲ ಪ್ರಚಾರ ಸಿಕ್ಕಿದೆ ಎಂದು ಮುಖ್ಯಮಂತ್ರಿ ಅವರೂ ಹೇಳಿದ್ದಾರೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, 2 ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಧರ್ಮದ ವಿಚಾರವಾಗಿ ನನ್ನ ಹೇಳಿಕೆಯಿಂದ ನನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿದೆ. ದೇಶದ ಬೇರೆ ಬೇರೆ ನಾಯಕರು ಮಾತನಾಡುತ್ತಾರೆ. ನನ್ನ ಹೇಳಿಕೆಯನ್ನು ಅರ್ಧ ಬಳಸಿದ್ದರಿಂದ ಖ್ಯಾತಿ, ಅಪಖ್ಯಾತಿ ಉಂಟಾಗಿದೆ. ದಯವಿಟ್ಟು ಮಾಧ್ಯಮದವರು ಹೇಳಿಕೆಯನ್ನು ಪೂರ್ಣವಾಗಿ ಪ್ರಸಾರ ಮಾಡುವಂತೆ ಮನವಿ ಮಾಡಿದರು.
06:06 AM (IST) Sep 03
Karnataka News Live 3 September 2026₹314 ಕೋಟಿ ಮೊತ್ತದ 18 ಹೊಸ ಹೋಟೆಲ್ಗಳ ಯೋಜನೆಗಳಿಗೆ 47.23 ಕೋಟಿ ಸಹಾಯಧನ ಅನುಮೋದನೆ
ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸಲು, ₹314 ಕೋಟಿ ಮೊತ್ತದ 18 ಹೊಸ ಹೋಟೆಲ್ ಯೋಜನೆಗಳಿಗೆ ಸರ್ಕಾರ ₹47.23 ಕೋಟಿ ಸಹಾಯಧನ ಅನುಮೋದಿಸಿದೆ. ಇದರೊಂದಿಗೆ, 2024-29ರ ನೀತಿಯಡಿ ₹1,080.97 ಕೋಟಿ ಹೂಡಿಕೆಯ 78 ಹೊಸ ಯೋಜನೆಗಳಿಗೂ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಇದು ರಾಜ್ಯದಲ್ಲಿ ವಸತಿ ಸೌಲಭ್ಯ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ.
Read Full Story