- Home
- News
- India News
- India Latest News Live: ಎವರೆಸ್ಟ್ ಎಗ್ ಕರಿ, ಚಿಕನ್, ಗರಂ ಮಸಾಲಾ & ಲಾಲ್ಜೀ ಇಂಗು ಮಾರಾಟದ ಮೇಲೆ ನಿರ್ಬಂಧ
India Latest News Live: ಎವರೆಸ್ಟ್ ಎಗ್ ಕರಿ, ಚಿಕನ್, ಗರಂ ಮಸಾಲಾ & ಲಾಲ್ಜೀ ಇಂಗು ಮಾರಾಟದ ಮೇಲೆ ನಿರ್ಬಂಧ

ಈ ವರ್ಷ 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆಯಲಿರುವ ಬಿಹಾರದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಪಾಸ್ ಆದರೂ ಅವರ ಅಂಕಪಟ್ಟಿಯಲ್ಲಿ ‘ಫೇಲ್’ ಎಂದು ಬರೆಯುವುದಿಲ್ಲ. ಅದರ ಬದಲು ‘ಕೌಶಲ್ಯ ತರಬೇತಿಗೆ ಅರ್ಹ’ ಎಂದು ಬರೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಕಾರಾತ್ಮಕ ರೀತಿಯಲ್ಲಿ ನೈತಿಕ ಬಲ ತುಂಬಲು ಈ ಕ್ರಮ ಅನುಸರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, ‘ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲು ವಿಫಲರಾದ ಮಾತ್ರಕ್ಕೆ ವಿದ್ಯಾರ್ಥಿಗಳ ಪ್ರತಿಭೆ ಮಾಯವಾಗುವುದಿಲ್ಲ. 10ನೇ ತರಗತಿಯ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 1 ತಿಂಗಳ ಕಾಲ ವಿಶೇಷ ತರಗತಿ ನಡೆಸಲಾಗುವುದು. ಅನುತ್ತೀರ್ಣರಾದವರ ಪ್ರಮಾಣಪತ್ರಗಳಲ್ಲಿ ‘ಕೌಶಲ್ಯ ಅಭಿವೃದ್ಧಿಗೆ ಅರ್ಹ’ ಎಂದು ನಮೂದಿಸುವ ಬಗ್ಗೆ ಶೀಘ್ರ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಲಾಗುವುದು’ ಎಂದು ತಿಳಿಸಿದರು.
ಪಠ್ಯವನ್ನು ಹೊರತುಪಡಿಸಿದ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಈಗಾಗಲೇ 1 ದಿನ ಪಾಟಿಚೀಲ ಇಲ್ಲದೆ ಶಾಲೆಗೆ ಬರುವ ಪರಿಪಾಠ ಆರಂಭಿಸಿದೆ.