ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸಿದ್ದ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ತನ್ನ ವಿಶೇಷಾಧಿಕಾರ ಬಳಸಿ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ 'ದೆಹಲಿ ಚಲೋ' ಪ್ರತಿಭಟನೆಯನ್ನು ಹಿಂಪಡೆದಿದೆ. ಆತ್ಮ*ಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
- Home
- News
- India News
- India Latest News Live: ಜಿರಳೆಗಳ ವಿರುದ್ಧದ ಕೇಸ್ ದೇಶಾದ್ಯಂತ ವಾಪಸ್; ವಿಶೇಷಾಧಿಕಾರ ಬಳಸಿ ಸುಪ್ರೀಂಕೋರ್ಟ್ ಆದೇಶ
LIVE NOW
India Latest News Live: ಜಿರಳೆಗಳ ವಿರುದ್ಧದ ಕೇಸ್ ದೇಶಾದ್ಯಂತ ವಾಪಸ್; ವಿಶೇಷಾಧಿಕಾರ ಬಳಸಿ ಸುಪ್ರೀಂಕೋರ್ಟ್ ಆದೇಶ

ಸಾರಾಂಶ
ಅಯೋಧ್ಯಾ: ಅಯೋಧ್ಯೆಯ ರಾಮಮಂದಿರದ ಸಿಇಒ ಆಯ್ಕೆ ಸಮಿತಿಯು 3 ಹೆಸರುಗಳನ್ನು ಅಂತಿಮಗೊಳಿಸಿದ್ದು, ಅವುಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಸಲ್ಲಿಸುವ ಸಾಧ್ಯತೆಯಿದೆ. ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ನಿವಾಸದಲ್ಲಿ ಬುಧವಾರ ನಡೆಯಲಿರುವ ಸಭೆಯಲ್ಲಿ ಸಿಇಒ ಆಯ್ಕೆ ಮಾಡಲಾಗುತ್ತದೆ. ಟ್ರಸ್ಟ್ನ ಖಾಲಿಯಿರುವ 2 ಸದಸ್ಯ ಸ್ಥಾನ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಹೆಸರುಗಳು ಬುಧವಾರ ಘೋಷಣೆಯಾಗುವ ಸಾಧ್ಯತೆಯಿದೆ. ಮಂದಿರದ ಹುಂಡಿ ಕಳವು ಆರೋಪದ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟ್ನ ಸದಸ್ಯ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದರು. ಇನ್ನೋರ್ವ ಸದಸ್ಯೆ ನಿಧನರಾಗಿದ್ದರು. ಹೀಗಾಗಿ 3 ಹುದ್ದೆಗಳು ಖಾಲಿಯಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
05:19 AM (IST) Sep 02
India Latest News Live 2 September 2026ಜಿರಳೆಗಳ ವಿರುದ್ಧದ ಕೇಸ್ ದೇಶಾದ್ಯಂತ ವಾಪಸ್; ವಿಶೇಷಾಧಿಕಾರ ಬಳಸಿ ಸುಪ್ರೀಂಕೋರ್ಟ್ ಆದೇಶ
Read Full Story