
Today Horoscope: ಈ ರಾಶಿಯವರಿಗೆ ಇಂದು ಪ್ರೇಮ-ಪ್ರೀತಿ ವಿಚಾರದಲ್ಲಿ ಮನಸ್ತಾಪ ಬರಲಿದ್ದು, ಎಚ್ಚರವಾಗಿರಿ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ,ಶನಿವಾರ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶನಿವಾರ ಆಗಿರುವುದರಿಂದ ಇಂದು ಶನೈಶ್ವರನಿಗೆ ಹೆಚ್ಚಿನ ಬಲವಿದೆ. ಈ ದಿನ ಶನಿದೇವನಿಗೆ ಅಭಿಷೇಕ, ಕಪ್ಪು ವಸ್ತ್ರ, ಕಬ್ಬಿಣವನ್ನು ದಾನ ಮಾಡಿ. ಇಂದು ಮಿಥುನ ರಾಶಿಯವರಿಗೆ ಕುಟುಂಬ ಸೌಖ್ಯವಿದ್ದು, ಹಣಬಲವಿರಲಿದೆ. ಮೃದು ಮಾತಿನಿಂದ ಸಾಧನೆ ಮಾಡುವಿರಿ. ಉದರಬಾಧೆ ಇರಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ. ಇಂದು ಈ ರಾಶಿಯವರು ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. ಕರ್ಕಟಕ ರಾಶಿಯವರಿಗೆ ಸ್ನೇಹಿತರೊಂದಿಗೆ ಮನಸ್ತಾಪ ಬರಲಿದೆ. ವಿಷಜಂತುಗಳ ಭಯವಿದ್ದು, ಗ್ರಾಮ ದೇವತಾದರ್ಶನ ಮಾಡಿ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ನಲ್ಲಿ 'ನಾನೇ ಸಿಎಂ' ಫೈಟ್, ಅಭಿವೃದ್ಧಿ ವಿಚಾರಕ್ಕೆ ಇಲ್ಲ ಇಂಟ್ರಸ್ಟ್!