ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?

‘ಮಂತ್ರಿ ಆಗ್ಬೇಕು ಅಷ್ಟೇ..’ ಕೃಷ್ಣಪ್ಪ ಖಂಡತುಂಡ.! ‘ಕೃಷ್ಣ’ ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.?

Share this Video
  • FB
  • Linkdin
  • Whatsapp

‘ಮಂತ್ರಿ ಆಗ್ಬೇಕು ಅಷ್ಟೇ..’ ಕೃಷ್ಣಪ್ಪ ಖಂಡತುಂಡ.! ‘ಕೃಷ್ಣ’ ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅದಲು-ಬದಲು ಆಟ. ಸಂಪುಟ ವಿಸ್ತರಣೆಯಾಗಿ ಸಚಿವರ ಪ್ರಮಾಣವಚನವೂ ಆಗಿದೆ.. ಖಾತೆ ಹಂಚಿಕೆ ಕಗ್ಗಂಟು ಇನ್ನೂ ಹಾಗೇ ಇದೆ. ಈ ಹಂತದಲ್ಲಿ ಸಂಪುಟದಲ್ಲೇನಾದ್ರೂ ಅದಲು-ಬದಲಾಗುತ್ತಾ.? ಯಾರಾದ್ರೂ ರಾಜೀನಾಮೆ ಕೊಡ್ತಾರಾ..? ಅಥವಾ ಹೈಕಮಾಂಡೇ ಕೊಡಿಸ್ತಾರಾ..? ಅವರ ಬದಲಾಗಿ ಹೊಸಬರು ಸಂಪುಟ ಸೇರ್ತಾರಾ..?

ಈ ರೀತಿಯ ಚರ್ಚೆ ಕೈ ಕೋಟೆಯಲ್ಲಿ ಜೋರಾಗಿದೆ. ಹಾಗಿದ್ರೆ ಇಂಥಹ ಚರ್ಚೆಗಳು ಶುರುವಾಗಿರೋದು ಯಾಕೆ..? ಅದಕ್ಕೆ ಕಾರಣಗಳೇನು..? ಇದಿಷ್ಟು ಎರಡು ಅದಲು-ಬದಲಿನ ಸಾಧ್ಯತೆಯ ಕುರಿತಾದ ಚರ್ಚೆಯಾಯ್ತು. ಇಷ್ಟೇ ಅಲ್ಲದೇ ಮತ್ತೆರಡು ಸಾಧ್ಯತೆಗಳು ಇವೆ. ಹಾಗಿದ್ರೆ ಆ ಸಾಧ್ಯತೆಗಳೇನು..? ಅವು ಕಾರ್ಯಸಾಧುವಾಗುವಂತಹ ಸಾಧ್ಯತೆಗಳೇ..? ಹೊಸತಾಗಿ ರಚನೆಯಾಗಿರೋ ಸಂಪುಟದಲ್ಲಿ ಮತ್ತೆ ಏನಾದ್ರೂ ಬದಲಾವಣೆ ಆಗುತ್ತಾ..? ಅಂತಹ ಸಾಧ್ಯಾಸಾಧ್ಯತೆಗಳೇನಾದ್ರೂ ಇವ್ಯಾ..? ಮಹಿಳಾ ಕೋಟವೂ ಫಿಲ್ ಆಗ್ಬೇಕು.

ಸಿದ್ದರಾಮಯ್ಯನವರ ಅಸಮಾಧಾನ ಕೂಡ ತಣ್ಣಗಾಗಬೇಕು ಅಂದ್ರೆ, ಅದ್ಯಕ್ಕಿನ್ಯಾವ ದಾರಿಗಳು ಉಳಿದುಕೊಂಡಿವೆ. ಇಷ್ಟೆಲ್ಲಾ ನೋಡಿದ್ಮೇಲೆ ನಿಮಗೊಂದು ಪ್ರಶ್ನೆ ಕಾಡುತ್ತೆ.. ಸಂಪುಟದಲ್ಲಿ ಬದಲಾವಣೆ ಮಾಡಲೇ ಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಸಂಪುಟ ವಿಸ್ತರಣೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ.. ಖಾತೆ ಹಂಚಿಕೆಯೂ ಆಗಿಲ್ಲ ಅಷ್ಟರಲ್ಲಿಯೇ ಸಂಪುಟದಲ್ಲಿ ಬದಲಾವಣೆ ಮಾಡಲೇಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಒಂದು ವೇಳೆ ಸಿಲುಕಿದ್ದೇ ಆದಲ್ಲಿ ಅದಕ್ಕೆ ಕಾರಣಗಳು ಏನೇನು..?

Related Video