
ಸಿಎಎ ಕಾಯ್ದೆ ಅಧಿಕೃತವಾಗಿ ಜಾರಿ: ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ವಿರೋಧ ಯಾಕೆ ?
ಲೋಕಸಭಾ ಚುನಾವಣೆ ಹೊತ್ತಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ.
ದೇಶದಲ್ಲಿ ಸಿಎಎ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಇದು ಲೋಕಸಭಾ ಚುನಾವಣೆಗೆ(Loksabha) ಹೊಸ ಅಸ್ತ್ರವಾಗಲಿದೆ. 2019ರಲ್ಲಿ ತಿದ್ದುಪಡಿಯಾಗಿದ್ದ ಈ ಕಾಯ್ದೆ ಅಂಗೀಕಾರವಾಗಿತ್ತು. ಜಾರಿಯಾಗಿದ್ದ ಪೌರತ್ವ ಕಾಯ್ದೆಗೆ(Citizenship Amendment Act) ದೇಶದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದು ಮುಸ್ಲಿಮರಿಗೆ(Muslims) ಅನ್ಯಾಯವೆಸಗುವ ಕಾನೂನೆಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಅಲ್ಲದೇ ಇದು ಜಾರಿಯಾಗದಂತೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನಡೆಸಲಾಗಿತ್ತು. ತೀವ್ರ ವಿರೋಧ ಕೇಳಿ ಬಂದಿದ್ದರಿಂದ ಕಾಯ್ದೆ ಜಾರಿಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಇದನ್ನೇ ಕೇಂದ್ರ ಸರ್ಕಾರ(Central Government) ಅಸ್ತ್ರವನ್ನಾಗಿಸಿಕೊಂಡಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಶಿವರಾತ್ರಿಯಂದೇ ಕಾಟನ್ಪೇಟೆ ಶಿವ ಮಟಾಷ್..! ಅವನ ಹೆಣ ಹಾಕಿದ್ದು ಮಾಜಿ ಗೆಳೆಯರು..!