
ಕ್ಯಾಮೆರಾ ಮುಂದೆ ಗೋಳಾಡಿದ್ದ ಹೆಂಡತಿನೇ ಗಂಡನ ಹೆಣ ಹಾಕಿಸಿದ್ಳು; ಅಮಾಯಕ ಪತಿಯ ಕೊಲೆ ರಹಸ್ಯ
ಆತ ಸತ್ತು 15 ದಿನಗಳ ನಂತರ ಆ ಕೊಲೆಯ ಮೊದಲ ಕ್ಲೂ ಸಿಕ್ಕಿತ್ತು. ಅಷ್ಟೇ ಅಲ್ಲ ಅದು ವಾಮಾಚಾರದ ಕೊಲೆಯಲ್ಲ ಬದಲಿಗೆ ಪ್ರೀ ಪ್ಲಾನ್ಡ್ ಮರ್ಡರ್ ಅನ್ನೋದು ಗೊತ್ತಾಗಿತ್ತು. ಹಾಗಾದ್ರೆ ಆತನನ್ನ ಕೊಂದಿದ್ಯಾರು? ಯಾಕಾಗಿ ಕೊಂದರು..? ಒಬ್ಬ ಅಮಾಯಕ ಕೊಲೆಯ ಹಿಂದಿನ ರಹಸ್ಯವೇ ಇವತ್ತಿನ ಎಫ್.ಐ.ಆರ್.
ಅದೊಂದು ಬಡ ಕುಟುಂಬ, ಗಂಡ ಗಾರೆ ಕೆಲಸ ಮಾಡ್ತಿದ್ರೆ ಹೆಂಡತಿ ಬೇರೆಯವರ ಹೊಲದಲ್ಲಿ ಕೆಲಸ ಮಾಡ್ತಿದ್ಲು. ಈ ದಂಪತಿಗೆ ಇಬ್ಬರು ಮಕ್ಕಳೂ ಕೂಡ ಇದ್ವು. ಅದ್ರೆ ಆವತ್ತೊಂದು ದಿನ ಗಂಡ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದ. ಹೆಂಡತಿ ತನ್ನ ಪಾಡಿಗೆ ಕೆಲಸಕ್ಕೆ ಹೋಗಿದ್ಲು. ಆದ್ರೆ ವಾಪಸ್ ಬಂದ್ರೆ ಗಂಡ ಎಲ್ಲೂ ಕಾಣೋದಿಲ್ಲ. ಮರು ದಿನ ಅತ ಹೆಣವಾಗಿ ಸಿಕ್ಕಿದ್ದ. ಆತ ಸಿಕ್ಕ ಸ್ಥಳವನ್ನ ಗಮನಿಸಿದಾಗ ಆತನನ್ನ ವಾಮಚಾರ ಮಾಡಿ ಬಲಿ ಕೊಟ್ಟಿದ್ದಾರೆ ಅನ್ನುವಂತಿತ್ತು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೂ ಕೂಡ ಯಾವುದೇ ಸುಳಿವು ಸಿಕ್ಕಿರಲಿಲ್ಲ.
Add Asianetnews Kannada as a Preferred Source
