- Home
- News
- State
- Karnataka Latest News Live: Mahadayi protest farmer case - 28 ಮಹದಾಯಿ ರೈತ ಹೋರಾಟಗಾರರ ಮೇಲೆ ಕೇಸ್! ಏನಿದು ಪ್ರಕರಣ?
Karnataka Latest News Live: Mahadayi protest farmer case - 28 ಮಹದಾಯಿ ರೈತ ಹೋರಾಟಗಾರರ ಮೇಲೆ ಕೇಸ್! ಏನಿದು ಪ್ರಕರಣ?

ಹುಬ್ಬಳ್ಳಿ-ಧಾರವಾಡ: ನಗರದಲ್ಲಿ ಆ. 26ರಂದು ನಡೆಯುವ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್ ಸಿಸ್ಟಮ್ ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.
Karnataka Latest News Live 19 August 2026Mahadayi protest farmer case - 28 ಮಹದಾಯಿ ರೈತ ಹೋರಾಟಗಾರರ ಮೇಲೆ ಕೇಸ್! ಏನಿದು ಪ್ರಕರಣ?
Karnataka Latest News Live 19 August 2026Tailoring - ಖಾಸಗಿ ಶಾಲೆಗಳೇ ಸಮವಸ್ತ್ರ ಪೂರೈಕೆ - ಟೈಲರ್ಗಳ ಬದುಕು ಅಯೋಮಯ! ಆದಾಯ ಕುಸಿತ
ಖಾಸಗಿ ಶಾಲೆಗಳು ನೇರವಾಗಿ ಸಮವಸ್ತ್ರಗಳನ್ನು ಮಾರಾಟ ಮಾಡುತ್ತಿರುವುದರಿಂದ, ಸಾಂಪ್ರದಾಯಿಕ ಟೈಲರ್ಗಳ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕಳೆದ ಐದು ವರ್ಷಗಳಿಂದ ಈ ಪದ್ಧತಿಯು ಜಾರಿಯಲ್ಲಿದ್ದು, ಶಾಲಾ ಸಮವಸ್ತ್ರ ಹೊಲಿಗೆಯನ್ನೇ ನಂಬಿದ್ದ ನೂರಾರು ಟೈಲರ್ಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಹಿನ್ನಡೆ ಮತ್ತು ಸಿದ್ಧ ಉಡುಪುಗಳ ಹೆಚ್ಚಳವು ಅವರ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.