ನಾನು ಹೋಸ್ಟ್ ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು ಎಂದು ಅನುಪಮಾ ಗೌಡ ಸಂದರ್ಶನದಲ್ಲಿ ಹೇಳಿದರು.
- Home
- News
- State
- Karnataka Latest News Live: ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್ ಖುಷಿ ಕೊಡಲಿಲ್ಲ - ಅನುಪಮಾ ಗೌಡ ವಿಶೇಷ ಸಂದರ್ಶನ
Karnataka Latest News Live: ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್ ಖುಷಿ ಕೊಡಲಿಲ್ಲ - ಅನುಪಮಾ ಗೌಡ ವಿಶೇಷ ಸಂದರ್ಶನ

ಹುಬ್ಬಳ್ಳಿ-ಧಾರವಾಡ: ನಗರದಲ್ಲಿ ಆ. 26ರಂದು ನಡೆಯುವ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್ ಸಿಸ್ಟಮ್ ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.
Karnataka Latest News Live 19 August 2026ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್ ಖುಷಿ ಕೊಡಲಿಲ್ಲ - ಅನುಪಮಾ ಗೌಡ ವಿಶೇಷ ಸಂದರ್ಶನ
Karnataka Latest News Live 19 August 2026ಶಿವರಾಜ್ಕುಮಾರ್ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್; ಈ ಪ್ಯಾನ್ ಇಂಡಿಯಾ ಸಿನಿಮಾದ ಸ್ಪೆಷಾಲಿಟಿ ಏನ್ ಗೊತ್ತಾ?
'ಕೂರ್ಮಾವತಾರ್' ಚಿತ್ರವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ಬೃಹತ್ ಬಜೆಟ್ನಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರ ದಂಡೇ ಇರಲಿದ್ದು, ಶಿವರಾಜ್ಕುಮಾರ್ ಜೊತೆ ತೆಲುಗು ನಟ ರಾಜ್ ತರುಣ್, ಶಿವಾಜಿ, ವರಲಕ್ಷ್ಮಿ ಶರತ್ಕುಮಾರ್, ಸಾಯಿ ಕುಮಾರ್ ಹೀಗೆ ದೊಡ್ಡ ತಾರಾಬಳಗ ಇದೆ.
Karnataka Latest News Live 19 August 2026ಐಪಿಎಲ್ ಫೈನಲ್ ಬಳಿಕ ಬೆಂಗಳೂರಿಗೆ ತಪ್ಪಿದ ಮತ್ತೊಂದು ಪ್ರಮುಖ ಟೂರ್ನಿಯ ಫೈನಲ್!
ಪ್ರತಿಷ್ಠಿತ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಲಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
Karnataka Latest News Live 19 August 2026Cars - 6 ಏರ್ಬ್ಯಾಗ್, ಭರ್ಜರಿ ಮೈಲೇಜ್, ಆಟೋಮ್ಯಾಟಿಕ್ ಗೇರ್ಬಾಕ್ಸ್! ಆದರೆ ಇದರ ಬೆಲೆ ಕೇಳಿದ್ರೆ ನೀವು ನಂಬಲ್ಲ!
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ, ಗೇರ್ ಬದಲಿಸುವ ಕಿರಿಕಿರಿಯಿಲ್ಲದ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ತೀವ್ರಗೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಾಹನ ತಯಾರಕ ಸಂಸ್ಥೆಗಳು ಭಾರತೀಯ ಕಾರು ಪ್ರಿಯರಿಗಾಗಿಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ಪರಿಚಯಿಸಿವೆ.
Karnataka Latest News Live 19 August 2026ಹೆತ್ತ ಕರುಳನ್ನೇ ಕತ್ತು ಹಿಸುಕಿ ಕೊಂದ ತಾಯಿ.. ಪ್ರೀತಿಸಿ ಮದ್ವೆ ಆಗಿದ್ದ ಜೋಡಿಗೆ ಆಗಿದ್ದೇನು?
ಹಾಸನದ ಆಲೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಮಗುವಿನ ಕತ್ತು ಹಿಸುಕಿ ಜೀವ ತೆಗೆದಿದ್ದಾಳೆ. ನಂತರ ತಾನೂ ಸಾವಿಗೆ ಶರಣಾಗಿದ್ದಾಳೆ. ಕಾರಣ ಮಾತ್ರ ನಿಗೂಢವಾಗಿದೆ.
Karnataka Latest News Live 19 August 2026ಪವಿತ್ರಾ ಗೌಡಗೆ ದೊಡ್ಡ ಆಘಾತ - ಮಾಜಿ ಪತಿ ಸಂಜಯ್ ಸಿಂಗ್ ನಿಧನ
ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಮತ್ತೊಂದು ಆಘಾತ ಆಗಿದೆ. ಅವರ ಮಾಜಿ ಪತಿ ಸಂಜಯ್ ಸಿಂಗ್ ಏಳು ತಿಂಗಳ ಹಿಂದೆಯೇ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
Karnataka Latest News Live 19 August 2026‘ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?’ - ಬಿಗ್ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ವಿನಯ್ ಗೌಡ ಎಡವಟ್ಟು? ಭರ್ಜರಿ ಟ್ರೋಲ್
‘ಅಗ್ನಿಪರೀಕ್ಷೆ’ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ.
Karnataka Latest News Live 19 August 2026ಡಾ. ವಿಷ್ಣುವರ್ಧನ್ 'ಅಮೃತ ಮಹೋತ್ಸವ' ಅಧಿಕೃತ ಲೋಗೋ ಅನಾವರಣ; 'ಈವೆಂಟ್' ಯಾವಾಗ, ಎಲ್ಲಿ?
ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಅವರು, ಡಾ. ವಿಷ್ಣುವರ್ಧನ್ ಅವರ ನೆನಪುಗಳನ್ನು ಸದಾ ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಅವರೊಂದಿಗೆ ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಟ-ನಟಿಯರು, ನಿರ್ಮಾಪಕರು ಹಾಗೂ ತಂತ್ರಜ್ಞರನ್ನು ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
Karnataka Latest News Live 19 August 2026‘ಲಕ್ಷ್ಮೀ ನಿವಾಸ’ ಖ್ಯಾತಿಯ ಮಾನಸ ಮನೋಹರ್ ಮಗನಿಗೆ ನಾಮಕರಣ - ಆ ಹೆಸರಿನಲ್ಲೇ ಅಡಗಿದೆ ಅಮ್ಮ-ಅಪ್ಪನ ಪ್ರೀತಿ!
Manasa Manohar Son: ಕನ್ನಡ ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಮಾನಸ ಮನೋಹರ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ.
Karnataka Latest News Live 19 August 2026ಬೆಂಗಳೂರಲ್ಲಿ ICU ರೋಗಿಗಳಿಗೆ ನಕಲಿ ಔಷಧಿ? 4.91 ಕೋಟಿ ರೂ. ಮೌಲ್ಯದ ಫೇಕ್ ಡ್ರಗ್ಸ್ ಜಪ್ತಿ!
ಬೆಂಗಳೂರಿನ ಬಿಡದಿಯಲ್ಲಿ 4.91 ಕೋಟಿ ರೂ. ಮೌಲ್ಯದ ಬೃಹತ್ ನಕಲಿ ಔಷಧಿ ಜಾಲ ಪತ್ತೆಯಾಗಿದ್ದು, ಐಸಿಯು ರೋಗಿಗಳಿಗೆ ನೀಡುವ ಔಷಧಿಗಳನ್ನೂ ನಕಲಿ ಲೇಬಲ್ನಡಿ ಮಾರಾಟ ಮಾಡುತ್ತಿರುವುದು ಬಯಲಾಗಿದೆ.
Karnataka Latest News Live 19 August 2026Viral - ಪುರಾತನ ಮನುಷ್ಯರ ‘ಡಿನ್ನರ್ ಮೆನು’ ನೋಡಿ ವಿಜ್ಞಾನಿಗಳೇ ಕಂಗಾಲು! '3,000 ಮೂಳೆಗಳು' ಬಯಲು ಮಾಡಿದ ರಹಸ್ಯ!
ಇಸ್ರೇಲ್ನ ಕಾರ್ಮೆಲ್ ಪರ್ವತದ ಇಳಿಜಾರಿನಲ್ಲಿರುವ ಒಂದು ಪ್ರಾಚೀನ ಗುಹೆಯಲ್ಲಿ ಪತ್ತೆಯಾಗಿರುವ ಸರೀಸೃಪಗಳ ಮೂಳೆಗಳು ವಿಜ್ಞಾನಿಗಳನ್ನು ನಿಜಕ್ಕೂ ಕಂಗಾಲಾಗಿಸಿವೆ. ಸುಮಾರು 11,000 ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಪ್ರಾಚೀನ ಮಾನವರು ಬರೀ ದೊಡ್ಡ ಪ್ರಾಣಿಗಳನ್ನು ಮಾತ್ರವಲ್ಲ, ಇವುಗಳನ್ನು ಆಹಾರವಾಗಿಸಿಕೊಂಡಿದ್ದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka Latest News Live 19 August 2026ಕಿರಿಯ ನಟನಿಗೆ ‘ಸರ್’ ಎಂದ ಶಿವಣ್ಣ - ‘ನಿಮ್ಮ ಸ್ಥಾನವೇ ಬೇರೆ’ ಎಂದು ಬೇಸರ ವ್ಯಕ್ತಪಡಿಸಿದ ಕನ್ನಡಿಗರು
Shivarajkumar Viral Video: ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಸರಳತೆ ಹಾಗೂ ಕಿರಿಯ ನಟರನ್ನು ಪ್ರೋತ್ಸಾಹಿಸುವ ಗುಣಕ್ಕೆ ಅಭಿಮಾನಿಗಳಿಂದ ಸದಾ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ.
Karnataka Latest News Live 19 August 2026ಬೈರಮಂಗಲದ ವೃಷಾಭವತಿ ಸೇತುವೆಯ ಕೆಳಗೆ ಕಂತೆ ಕಂತೆ 500, 100ರ ನೋಟು ಪತ್ತೆ, ವೈರಲ್ ವಿಡಿಯೋದ ಅಸಲಿ ಸತ್ಯವೇನು?
Karnataka Latest News Live 19 August 2026'ನನ್ನ ಬದುಕನ್ನೇ ಬದಲಿಸಿದರು..' ಕೊಹ್ಲಿ ಬಗ್ಗೆ ಮುತ್ತಿನಂಥ ಮಾತು ಹೇಳಿದ ಪಿವಿ ಸಿಂಧು
ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಕಿಂಗ್ ವಿರಾಟ್ ಕೊಹ್ಲಿಯ ಸಹಾಯವನ್ನು ನೆನೆದಿದ್ದಾರೆ. ಕೊಹ್ಲಿ ಬಗ್ಗೆ ಅದೆಂಥ ಗೌರವ ಇಟ್ಟುಕೊಂಡಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
Karnataka Latest News Live 19 August 2026ಗ್ಲಾಮರ್ನಿಂದ ಆಧ್ಯಾತ್ಮಿಕತೆಯತ್ತ - ಕಾಮಾಕ್ಯ ದೇವಿ ದರ್ಶನ ಪಡೆದ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ!
ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ಗೌಡ ಇದೀಗ ಆಧ್ಯಾತ್ಮಿಕ ಪ್ರವಾಸವೊಂದರ ಮೂಲಕ ಗಮನ ಸೆಳೆದಿದ್ದಾರೆ. ಈ ಆಧ್ಯಾತ್ಮಿಕ ಪಯಣದ ಅನುಭವವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Karnataka Latest News Live 19 August 2026Viral; ತಮ್ಮ ಆಸೆ ಬದಿಗಿಟ್ಟು ಮಗನಿಗಾಗಿ ಬದುಕಿದ ಹೆತ್ತವರು; ಕೊನೆಗೆ ಮಗನಿಂದ ಅವರಿಗೆ ಸಿಕ್ಕಿದ್ದೇನು? ಕಣ್ಣೀರಾಗಿಸುವ ಕಥೆ!
ಕಂಟೆಂಟ್ ಕ್ರಿಯೇಟರ್ ಅಜಯ್ ಅಮರವಂಶಿ, ತಮ್ಮ ಪೋಷಕರ ತ್ಯಾಗಕ್ಕೆ ಕೃತಜ್ಞತೆಯಾಗಿ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಲೇಖನವು ಪೋಷಕರ ಭಾವುಕ ಪ್ರತಿಕ್ರಿಯೆ, ಮಗನ ಕೃತಜ್ಞತಾ ಭಾವ ಮತ್ತು ಈ ಹೃದಯಸ್ಪರ್ಶಿ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಪ್ರಶಂಸೆಯನ್ನು ವಿವರಿಸುತ್ತದೆ.
Karnataka Latest News Live 19 August 2026'17 ಕಿ.ಮೀ ಪ್ರಯಾಣಕ್ಕೆ 2 ಗಂಟೆ..' ಬೆಂಗಳೂರು ಟ್ರಾಫಿಕ್ಗೆ ಕಂಗಾಲಾದ ಎಐ ಸ್ಟಾರ್ಟ್ಅಪ್ ಸಂಸ್ಥಾಪಕ!
ಉದ್ಯಮಿಯೊಬ್ಬರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಳಗ್ಗೆ 10:15ಕ್ಕೆ ಕಚೇರಿಗಳು ಖಾಲಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ಸಾರಿಗೆ ಕಿರಿಕಿರಿಯು ಉದ್ಯೋಗಿಗಳ ಶಕ್ತಿ ಮತ್ತು ಉತ್ಪಾದಕತೆಯನ್ನು ಕುಗ್ಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.
Karnataka Latest News Live 19 August 2026ಮುಡಾ ಕೇಸ್ಗೆ ಟ್ವಿಸ್ಟ್! 1,100 ನಿವೇಶನಗಳ ಹಂಚಿಕೆ ರದ್ದು! ಸರ್ಕಾರಕ್ಕೆ 2 000 ಕೋಟಿ ಆಸ್ತಿ ಉಳಿಸಿದ ಯತೀಂದ್ರ
ಮುಡಾ 50:50 ಹಗರಣದಲ್ಲಿ ನಿಯಮ ಉಲ್ಲಂಘಿಸಿ ಹಂಚಿಕೆಯಾಗಿದ್ದ 1,100 ನಿವೇಶನಗಳನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ರದ್ದುಪಡಿಸಿದ್ದು, ಈ ಮೂಲಕ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಿದ್ದಾರೆ. ಈಗಾಗಲೇ ನೋಂದಣಿಯಾಗಿರುವ ಕ್ರಯಪತ್ರಗಳನ್ನು ರದ್ದುಗೊಳಿಸಲು ಕಾನೂನು ಕ್ರಮ ಜರುಗಿಸುವಂತೆ ಹಾಗೂ ಹೊಸದಾಗಿ ಖಾತಾ ಮಾಡಿಕೊಡುವುದನ್ನು ತಕ್ಷಣವೇ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
Karnataka Latest News Live 19 August 2026ನೀರಿನಲ್ಲೇ ಚಿತ್ರೀಕರಣ ಮಾಡಿ ‘ಅಣ್ಣಯ್ಯ’ ತಂಡ ಪಟ್ಟ ಕಷ್ಟ ಎಷ್ಟು? - ಮಾರಿಗುಡಿ ಶಿವು ಪೋಸ್ಟ್ ವೈರಲ್
‘ಅಣ್ಣಯ್ಯ’ ಧಾರಾವಾಹಿ ತನ್ನ ಭಾವನಾತ್ಮಕ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ತಂಗಿಯರಿಗಾಗಿ ಎಲ್ಲವನ್ನೂ ಮಾಡುವ ಅಣ್ಣನ ಪಾತ್ರ ಹಾಗೂ ಅಣ್ಣ-ತಂಗಿಯರ ನಡುವಿನ ಬಾಂಧವ್ಯ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.
Karnataka Latest News Live 19 August 2026Viral - ಪ್ರವಾಸದಲ್ಲಿ ಹುಟ್ಟಿದ ಪ್ರೀತಿ, ಮದುವೆ, ಮಗು; ಆದರೆ ಆ ದಂಪತಿಯ ಬಾಳಲ್ಲಿ ನಡೆದ ಘಟನೆ ಕೇಳಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ!
ಭಾರತ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಮಹಿಳೆ, ತಮಿಳುನಾಡಿನ ಕಾರು ಚಾಲಕ ರಬೀಕ್ರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬದ ವಿರೋಧದ ನಡುವೆ ಒಂದಾದ ಈ ದಂಪತಿಗೆ ಮಗಳಿದ್ದಾಳೆ. ಆದರೆ ಮುಂದೆ ಆದ ಘಟನೆ ಕಣ್ಣಲ್ಲಿ ನೀರು ತರಸುತ್ತದೆ.