10:49 PM (IST) Aug 31

India Latest News Live 31 August 2026ಅಣ್ಣಾ ಹಜಾರೆ ಆರೋಗ್ಯ ದಿಢೀರ್ ಏರುಪೇರು - ಐಸಿಯುಗೆ ದಾಖಲು

ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕಿನಿಂದ ಬಳಲುತ್ತಿರುವ 87 ವರ್ಷದ ಅಣ್ಣಾ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Read Full Story
09:50 PM (IST) Aug 31

India Latest News Live 31 August 2026'ಮಹಿಳೆಯರು ಮನೆಯ ಅಲಂಕಾರ' ಕೇರಳ ಗ್ರಾಂಡ್ ಮುಫ್ತಿ ವಿವಾದಾತ್ಮಕ ಹೇಳಿಕೆಗೆ ಮುಸ್ಲಿಂ ಜಮಾತ್ ಮುಖ್ಯಸ್ಥ ಬೆಂಬಲ

ಕೇರಳದ ಗ್ರಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹಮದ್ ಅವರು ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಬರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಸಮರ್ಥಿಸಿಕೊಂಡಿದ್ದಾರೆ.

Read Full Story
09:29 PM (IST) Aug 31

India Latest News Live 31 August 2026ರಾಹುಲ್ ಗಾಂಧಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು - ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಈ ಆರೋಪ ಸಾಬೀತಾದರೆ ಏನು ಶಿಕ್ಷೆ?

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದಲ್ಲಿ ಜಾತಿನಿಂದನೆ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಆರೋಪ ಸಾಬೀತಾದರೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅವರಿಗೆ ಎದುರಾಗಬಹುದಾದ ಸಂಭಾವ್ಯ ಜೈಲು ಶಿಕ್ಷೆ ಮತ್ತು ದಂಡದ ಕುರಿತು ಈ ಲೇಖನ ವಿವರಿಸುತ್ತದೆ.
Read Full Story
08:47 PM (IST) Aug 31

India Latest News Live 31 August 2026GDP Growth - ಭಾರತದ ಜಿಡಿಪಿ 7.8% ಹೆಚ್ಚಳದಿಂದ ಭಾರತದ ಯುವಕರಿಗೇನು ಬಂತು? ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಭಾರತದ 7.8% ಜಿಡಿಪಿ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ನ ಪವನ್ ಖೇರಾ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಕೇವಲ ಒಂದು ತ್ರೈಮಾಸಿಕದ ಬೆಳವಣಿಗೆಯನ್ನು 'ಆರ್ಥಿಕ ವಸಂತ' ಎನ್ನಲಾಗದು

Read Full Story
08:28 PM (IST) Aug 31

India Latest News Live 31 August 2026ಈ ಮನೆಯ ಬೆಡ್‌ರೂಮ್‌ ಒಂದು ರಾಜ್ಯದಲ್ಲಿ, ಟಾಯ್ಲೆಟ್‌ ಇನ್ನೊಂದು ರಾಜ್ಯದಲ್ಲಿ! ವಿಚಿತ್ರ ಸ್ಟೋರಿ ಕೇಳಿ

ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ ಪವಾರ್ ಕುಟುಂಬದ ಮನೆಯು ಎರಡು ರಾಜ್ಯಗಳ ನಡುವೆ ಹಂಚಿಹೋಗಿದೆ. ಈ ವಿಶಿಷ್ಟ ಮನೆಯ ಅಡುಗೆಮನೆಯು ತೆಲಂಗಾಣದಲ್ಲಿದ್ದರೆ, ಮಲಗುವ ಕೋಣೆ ಮಹಾರಾಷ್ಟ್ರದಲ್ಲಿದೆ. ಈ ಕುಟುಂಬವು ಎರಡೂ ರಾಜ್ಯಗಳಿಗೆ ತೆರಿಗೆ ಪಾವತಿಸಿ, ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿದೆ.
Read Full Story
07:53 PM (IST) Aug 31

India Latest News Live 31 August 2026ಶ್ರೀಮಂತ ಮಹಿಳಾ ಕ್ರಿಕೆಟಿಗರು ಯಾರು ಯಾರು? RCB ಕ್ವೀನ್ ಸ್ಮೃತಿ ಮಂಧಾನಗೆ ಎಷ್ಟನೇ ಸ್ಥಾನ?

ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಎಲಿಸ್ ಪೆರಿ 120 ಕೋಟಿ ರೂ. ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮಿಥಾಲಿ ರಾಜ್, ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಕೂಡ ಟಾಪ್ 5ನಲ್ಲಿ ಸ್ಥಾನ ಪಡೆದಿದ್ದು, ಮಹಿಳಾ ಕ್ರಿಕೆಟ್‌ನ ಬೆಳೆಯುತ್ತಿರುವ ಆರ್ಥಿಕ ಶಕ್ತಿಯನ್ನು ಸಾರಿದ್ದಾರೆ.

Read Full Story
07:13 PM (IST) Aug 31

India Latest News Live 31 August 2026ಪಾಕಿಸ್ತಾನಕ್ಕೆ ಮತ್ತೊಂದು ಆಘಾತ.. ಸಿಂಧೂ ನದಿ ನೀರು ವಿಚಾರದಲ್ಲಿ ಭಾರತ ದಿಟ್ಟ ನಿರ್ಧಾರ..!

ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ 'ಕಾನೂನುಬಾಹಿರವಾಗಿ' ರಚನೆಯಾದ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಭಾರತ ತಿರಸ್ಕರಿಸಿದ್ದು, ತನ್ನ ಸಾರ್ವಭೌಮ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

Read Full Story
06:51 PM (IST) Aug 31

India Latest News Live 31 August 2026Gold Investment - ನಿಮ್ಮನ್ನು ಉಳಿಸೋದು ಬಂಗಾರ, ಬೆಳ್ಳಿ ಮಾತ್ರ! ಅಸಲಿ ಕಥೆ ಬಿಚ್ಚಿಟ್ಟ 'ರಿಚ್ ಡ್ಯಾಡ್ ಪೂರ್ ಡ್ಯಾಡ್' ಲೇಖಕ

'ರಿಚ್ ಡ್ಯಾಡ್ ಪೂರ್ ಡ್ಯಾಡ್' ಲೇಖಕ ರಾಬರ್ಟ್ ಕಿಯೋಸಾಕಿ ಮುಂಬರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸಿದ್ದಾರೆ. ಹಣದ ಮೌಲ್ಯ ಕುಸಿಯುತ್ತಿರುವುದರಿಂದ, ಬ್ಯಾಂಕ್‌ನಲ್ಲಿ ಹಣ ಇಡುವುದಕ್ಕಿಂತ ಬಂಗಾರ ಮತ್ತು ಬೆಳ್ಳಿಯಂತಹ ನೈಜ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಅವರು ಸಲಹೆ ನೀಡಿದ್ದಾರೆ.
Read Full Story
05:54 PM (IST) Aug 31

India Latest News Live 31 August 2026CSK ತಂಡದಲ್ಲಿ ಧೋನಿ 25% ಪಾಲು ಕೇಳಿದ್ದರ ಬಗ್ಗೆ ಕೊನೆಗೂ ಮೌನ ಮುರಿದ ಚೆನ್ನೈ ಫ್ರಾಂಚೈಸಿ..! ಮಹಿ ಮುಂದಿನ ಸೀಸನ್ ಐಪಿಎಲ್ ಆಡ್ತಾರಾ?

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂ.ಎಸ್. ಧೋನಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂಬ ವದಂತಿಯನ್ನು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಳ್ಳಿಹಾಕಿದ್ದಾರೆ. ಇದು ಶುದ್ಧ ಸುಳ್ಳು ಎಂದಿರುವ ಅವರು, ಧೋನಿ ಮತ್ತು ಮ್ಯಾನೇಜ್‌ಮೆಂಟ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಧೋನಿ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
Read Full Story
05:28 PM (IST) Aug 31

India Latest News Live 31 August 202619 ತಿಂಗಳ ಮಗುವನ್ನು ಅಂಗಾಂಗದಾನಕ್ಕೆ ಕೊಟ್ಟು ಹಿಂತಿರುಗಿ ನೋಡಿದೆ ಹೋದ ಅಮ್ಮ!

ಬ್ರೈನ್ ಡೇಡ್ ಆದ ತನ್ನ 19 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ಒಪ್ಪಿಗೆ ನೀಡಿದರು. ಈ ಮೂಲಕ ಆ ಮಗು ತಮಿಳುನಾಡಿನಲ್ಲೇ ಅತೀ ಕಿರಿಯ ವಯಸ್ಸಿನ ಅಂಗಾಂಗ ದಾನಿ ಎಂಬ ಇತಿಹಾಸ ಸೃಷ್ಟಿಸಿತು. ಮಗನನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ದ ನಂತರ, ತಾಯಿ ಮತ್ತೆ ಹಿಂತಿರುಗಿ ನೋಡದೆ ಆಸ್ಪತ್ರೆಯಿಂದ ಹೊರನಡೆದರು.
Read Full Story
05:14 PM (IST) Aug 31

India Latest News Live 31 August 2026'ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸು' ಎಂಬಂತೆ ಮಗುವಿನ ಹೆಸರಿನ ಬಗ್ಗೆ ಚರ್ಚೆ - ಸಮಂತಾ ಹೇಳಿದ್ದೇನು?

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಮೊದಲ ಮಗುವಿನ ಹೆಸರಿನ ಬಗ್ಗೆ ಅಭಿಮಾನಿಯೊಬ್ಬರು ವಿಶೇಷ ಸಲಹೆ ನೀಡಿದ್ದಾರೆ. ‘ಸಮ್ರಾಜ್’ ಎಂಬ ಹೆಸರು ಸೂಚಿಸಿದ ಫ್ಯಾನ್‌ಗೆ ಸಮಂತಾ ತಮಾಷೆಯಾಗಿ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.

Read Full Story
05:12 PM (IST) Aug 31

India Latest News Live 31 August 2026ದೆಹಲಿಯಲ್ಲಿ ಮತ್ತೊಮ್ಮೆ ನಿರ್ಭಯಾ ಕೇಸ್‌ - 47 ಕಿ.ಮೀ ನಾನ್‌ ಸ್ಟಾಪ್‌ ಪ್ರಯಾಣಿಸಿದ ಸ್ಲೀಪರ್‌ ಬಸ್‌ನಲ್ಲಿ 16ರ ಬಾಲಕಿಯ ಗ್ಯಾಂಗ್‌ರೇ*

ದೆಹಲಿಯಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಚಾಲಕ ಮತ್ತು ನಿರ್ವಾಹಕ ಸಾಮೂಹಿಕ ಅ*ಚಾರ ಎಸಗಿದ್ದಾರೆ. ಸುಮಾರು 47 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಈ ಘೋರ ಕೃತ್ಯ ನಡೆದಿದ್ದು, ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story
04:56 PM (IST) Aug 31

India Latest News Live 31 August 2026ವಿರೇಂದ್ರ ಸೆಹ್ವಾಗ್ ಕಾಲರ್ ಹಿಡಿದು ಮುಖಕ್ಕೆ ಗುದ್ದಿದ್ದರು, ಟೀಂ ಇಂಡಿಯಾ ಕೋಚ್ ಆಗಿದ್ದ ಜಾನ್ ರೈಟ್!

ನಝಾಫ್’ಗಢದ ನವಾಬ ವಿರೇಂದ್ರ ಸೆಹ್ವಾಗ್ ತನ್ನ ನಿರ್ಭೀತ ಬ್ಯಾಟಿಂಗ್​ನಿಂದಲೇ ಹೆಸರುವಾಸಿ. ಆದರೆ 2002ರ ನಾಟ್ ವೆಸ್ಟ್ ಸರಣಿಯಲ್ಲಿ ಬೇಜವಾಬ್ದಾರಿ ಹೊಡೆತಕ್ಕೆ ಔಟಾದಾಗ, ಕೋಚ್ ಜಾನ್ ರೈಟ್ ಡ್ರೆಸ್ಸಿಂಗ್ ರೂಮ್​ನಲ್ಲಿ ಸೆಹ್ವಾಗ್​ರ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿದ್ದರು. ಈ ಘಟನೆಯಿಂದ ನೊಂದ ಸೆಹ್ವಾಗ್ ಭಾರತಕ್ಕೆ ಮರಳಲು ನಿರ್ಧರಿಸಿದ್ದರಂತೆ.

Read Full Story
04:48 PM (IST) Aug 31

India Latest News Live 31 August 2026ದಳಪತಿ ವಿಜಯ್ ಜೊತೆಗಿನ ವದಂತಿ ನಡುವೆ ತ್ರಿಶಾ ವಿಡಿಯೋ ವೈರಲ್ - ಪ್ರೈವಸಿ ಬಗ್ಗೆ ನೆಟ್ಟಿಗರ ಕಳವಳ

ನಟಿ ತ್ರಿಶಾ ಕೃಷ್ಣನ್ ಲಂಡನ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಜೊತೆಗಿನ ಪ್ರೇಮ ವದಂತಿ ನಡುವೆ ವಿಡಿಯೋ ವೈರಲ್ ಆಗಿದ್ದು, ಸೆಲೆಬ್ರಿಟಿ ಪ್ರೈವಸಿಗೆ ಗೌರವ ನೀಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

Read Full Story
04:46 PM (IST) Aug 31

India Latest News Live 31 August 2026ಮಗಳ ಸ್ಕೂಲ್ ಫೀಸ್‌ಗಾಗಿ ತಾಯಿ ಸಾಹಸ.. ಸೀರೆಯುಟ್ಟು ಬರಿಗಾಲಲ್ಲಿ ಓಡಿ ಮ್ಯಾರಥಾನ್ ಗೆದ್ದ ಅಮ್ಮ..!

ಮಹಾರಾಷ್ಟ್ರದ 47 ವರ್ಷದ ರಮಾಬಾಯಿ ರಣವೀರ್ ತಮ್ಮ ಮಗಳ ಶಿಕ್ಷಣದ ವೆಚ್ಚಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಾಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದ ಇವರು, ಆ ಬಹುಮಾನದ ಮೊತ್ತವನ್ನು ಮಗಳ ಓದಿಗಾಗಿ ಮೀಸಲಿಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

Read Full Story
04:17 PM (IST) Aug 31

India Latest News Live 31 August 2026​ಸೆಲೆಕ್ಟ್ ಆದ್ರೂ ಒಂದೇ ಒಂದು ಪಂದ್ಯವೂ ಆಡದೆ ನಿವೃತ್ತಿಯಾದ ಭಾರತದ ಅಪರೂಪದ ಕ್ರಿಕೆಟ್ ಹೀರೋ - ಧೋನಿ-ಗಂಭೀರ್ ಕಾಲದ ಈ ಆಟಗಾರ ಯಾರು ಗೊತ್ತಾ?

2003-04ರ ದೇಶಿ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದ ಧೀರಜ್ ಜಾಧವ್, ಭಾರತ 'ಎ' ತಂಡದಲ್ಲೂ ಮಿಂಚಿದ್ದರು. ಗೌತಮ್ ಗಂಭೀರ್, ಎಂ ಎಸ್ ಧೋನಿ ಅವರಂತಹ ಆಟಗಾರರ ಜೊತೆಗಾರನಾಗಿದ್ದರೂ, ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕವೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
Read Full Story
04:09 PM (IST) Aug 31

India Latest News Live 31 August 2026ಇಸ್ರೋ ಬಾಹುಬಲಿ ಟೆಕ್ನಾಲಜಿ ಟ್ರಾನ್ಸ್‌ಫರ್‌ - ರೇಸ್‌ನಲ್ಲಿ L&T, JSW, ಅದಾನಿ, ಮಹೀಂದ್ರಾ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಅತ್ಯಂತ ಶಕ್ತಿಶಾಲಿ 'ಎಲ್‌ವಿಎಂ-3' ರಾಕೆಟ್ ತಂತ್ರಜ್ಞಾನವನ್ನು ಖಾಸಗಿ ವಲಯಕ್ಕೆ ವರ್ಗಾಯಿಸಲು ಮುಂದಾಗಿದೆ. ಈ ಒಪ್ಪಂದಕ್ಕಾಗಿ ಅದಾನಿ, ಎಲ್&ಟಿ, ಜೆಎಸ್‌ಡಬ್ಲ್ಯೂ ಸೇರಿದಂತೆ ಹಲವು ದೈತ್ಯ ಸಂಸ್ಥೆಗಳು ತೀವ್ರ ಸ್ಪರ್ಧೆ ನಡೆಸುತ್ತಿವೆ.

Read Full Story
03:28 PM (IST) Aug 31

India Latest News Live 31 August 2026ಅದು ಸರಳತೆಯಲ್ಲ, ಅವರಿರುವುದೇ ಹಾಗೆ.. ಅವರು ಗಂಡ ಭೇರುಂಡ ಲಾಂಛನದ ಗರ್ವ..! ಜಾವಗಲ್ ಶ್ರೀನಾಥ್ ಕನ್ನಡಿಗರ ಹೆಮ್ಮೆ

ಭಾರತದ ಖ್ಯಾತ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಇತ್ತೀಚೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಫೋಟೋ ವೈರಲ್ ಆಗಿದೆ. ಈ ಲೇಖನವು ಅವರ ಸರಳ ಜೀವನಶೈಲಿ, 'ಮೈಸೂರು ಎಕ್ಸ್‌ಪ್ರೆಸ್' ಆಗಿ ಅವರ ಅಪ್ರತಿಮ ಕ್ರಿಕೆಟ್ ಸಾಧನೆಗಳು ಮತ್ತು ಕನ್ನಡದ ಮೇಲಿನ ಅವರ ಅಪಾರ ಪ್ರೀತಿಯನ್ನು ವಿವರಿಸುತ್ತದೆ.
Read Full Story
01:51 PM (IST) Aug 31

India Latest News Live 31 August 2026'ಮಹಿಳೆಯರು ಚಿನ್ನದ ಒಡವೆಯಂತೆ ಮನೆಯಲ್ಲೇ ಇರಬೇಕು' - ಇಸ್ಲಾಮಿಕ್ ಧರ್ಮಗುರು ಶೇಕ್ ಅಬೂಬಕರ್

ಕೇರಳದ ಗ್ರ್ಯಾಂಡ್ ಮುಫ್ತಿ ಶೇಕ್ ಅಬೂಬಕರ್ ಅಹ್ಮದ್ ಅವರು, ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬಂದರೆ ಮಹಾ ವಿನಾಶಕ್ಕೆ ಕಾರಣವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಚಿನ್ನದ ಆಭರಣಕ್ಕೆ ಹೋಲಿಸಿದ ಅವರು, ಇಸ್ಲಾಂ ಅವರಿಗೆ ಮನೆಯಲ್ಲೇ ಇರಲು ಮತ್ತು ಪರ್ದಾ ಪಾಲಿಸಲು ಸೂಚಿಸಿದೆ ಎಂದು ಪ್ರತಿಪಾದಿಸಿದ್ದಾರೆ.
Read Full Story
01:43 PM (IST) Aug 31

India Latest News Live 31 August 2026ನಟನೆಯಿಂದ ಬಿಸಿನೆಸ್ - ಕೇವಲ 5 ತಿಂಗಳಲ್ಲಿ ಬದಲಾದ ಕಂಟೆಂಟ್ ಕ್ರಿಯೇಟರ್ ಬದುಕು, ತಿಂಗಳಿಗೆ ₹8.8 ಲಕ್ಷ ಆದಾಯ!

ನಟನಾ ಕೌಶಲ್ಯವನ್ನು ಸೈಡ್ ಬಿಸಿನೆಸ್ ಆಗಿ ಪರಿವರ್ತಿಸಿಕೊಂಡ ಮಹಿಳೆಯೊಬ್ಬರು, ಬಳಕೆದಾರ ರಚಿಸಿದ ವಿಷಯ (UGC) ಮೂಲಕ ತಿಂಗಳಿಗೆ ಸುಮಾರು ₹8.8 ಲಕ್ಷ ಗಳಿಸುತ್ತಿದ್ದಾರೆ. ತಮ್ಮ ರಂಗಭೂಮಿ ಹಿನ್ನೆಲೆಯನ್ನು ಬಳಸಿಕೊಂಡು, ಬ್ರ್ಯಾಂಡ್‌ಗಳಿಗೆ ಆಕರ್ಷಕ ವೀಡಿಯೊಗಳನ್ನು ರಚಿಸುವ ಮೂಲಕ ಇವರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿದ್ದಾರೆ.
Read Full Story