- Home
- News
- India News
- India Latest News Live: ಬಿಜೆಪಿಗೆ 65 ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡ ಪ್ರಕಟಿಸಿದ ಅಧ್ಯಕ್ಷ ನಿತಿನ್ ನವೀನ್
India Latest News Live: ಬಿಜೆಪಿಗೆ 65 ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡ ಪ್ರಕಟಿಸಿದ ಅಧ್ಯಕ್ಷ ನಿತಿನ್ ನವೀನ್

ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಬಳಿಕ ಕಾಂಗ್ರೆಸ್- ಬಿಜೆಪಿ ನಡುವೆ ಶುರುವಾಗಿದ್ದ ‘ಬೌದ್ಧಿಕ ನಕ್ಸಲ್’ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ‘ನಾನು ಬೌದ್ಧಿಕ ನಕ್ಸಲ್ ಆಗಲು ಹೆಮ್ಮೆ ಪಡುತ್ತೇನೆ’ನೆಂಬ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.
2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಮಾವೋವಾದಿಗಳ ಸಮಸ್ಯೆ ದೇಶ ಎದುರಿಸುತ್ತಿರುವ ಏಕೈಕ ಅತಿದೊಡ್ಡ ಆಂತರಿಕ ಭದ್ರತಾ ಸವಾಲು ಎಂದಿದ್ದರು. ಆದರೆ, ಈಗ ಚಿದಂಬರಂ ನಾನು ಬೌದ್ಧಿಕ ನಕ್ಸಲ್ ಆಗಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಕುಟುಂಬದ ಕ್ಷಮೆ ಯಾಚಿಸಬೇಕು ಎಂದು ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.
ತ್ರಿವೇದಿ ತಿರುಗೇಟು:
ಈ ನಡುವೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ಕಾಂಗ್ರೆಸ್ ಪಕ್ಷ ‘ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್’ ಎಂಬುದಾಗಿ ಅವರ ಪಕ್ಷದವರೇ ಬಯಲು ಮಾಡಿದ್ದರು. ಇದೀಗ ತಮ್ಮದು ‘ಬೌದ್ಧಿಕ ನಕ್ಸಲ್ ಕಾಂಗ್ರೆಸ್’ ಎಂದು ಹೇಳಿಕೊಳ್ಳುತ್ತಿದ್ದಾರೆ’ಎಂದು ವ್ಯಂಗ್ಯವಾಡಿದರು.