ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ಬೆಂಗಳೂರು (ಸೆ.7): ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ಬಸ್ ವೇಗದಲ್ಲಿದ್ದಾಗ ಚಾಲಕ ಸೀಟಿನಿಂದ ಎದ್ದಿದ್ದೇಕೆ?

ಈ ಆಘಾತಕಾರಿ ಘಟನೆಯ ದೃಶ್ಯ ಖಾಸಗಿ ಬಸ್‌ನಲ್ಲಿನಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ದಾಖಲಾಗಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 90 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಚಾಲಕ ಎದ್ದು ನಿಂತಿದ್ದೇಕೆ? ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರ ಪ್ರಾಣಕ್ಕೆ ಕುತ್ತು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ನೆಟಿಜನ್ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಚಾಲಕನ ಕಿವಿಯಲ್ಲಿ ಬ್ಲೂಟೂತ್ ಹಿಯರ್ ಬಡ್‌!

ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವುದು ಬ್ಲ್ಯೂಟೂತ್ ಹಿಯರ್ ಬಡ್ ಬಳಸುವಂತಿಲ್ಲ, ಆದರೆ ಪ್ರಯಾಣಿಕರ ಸುರಕ್ಷತೆ ಮರೆತು ಚಾಲಕ ಕಿವಿಯಲ್ಲಿ ಹಿಯರ್ ಬಡ್ ಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಹಾಡುಗಳನ್ನ ಕೇಳುತ್ತಾ ಮೈಮರೆತು ಸೀಟಿನಿಂದ ಎದ್ದಿರುವ ಸಾಧ್ಯತೆಯಿದೆ. ಚಾಲಕನನ್ನು ನಂಬಿ ಪ್ರಯಾಣಿಸುವ ಪ್ರಯಾಣಿಕರಿಗೆ ಅದೆಷ್ಟು ಅಪಾಯಕಾರಿ! ಬಸ್‌ನಲ್ಲಿ ಸುಮಾರು ನಲ್ವತ್ತು ಪ್ರಯಾಣಿಕರು ಚಾಲಕನ ನಂಬಿಕೆ ಇಟ್ಟು ಮಲಗಿರ್ತಾರೆ. ಆದರೆ ಬ್ಲ್ಯೂಟೂತ್‌ನಲ್ಲಿ ಹಾಡುವುದು ಕೇಳುವುದು, ಬಸ್ ವೇಗದಲ್ಲಿದ್ದಾಗಲೇ ಸೀಟಿನಿಂದ ಎದ್ದಿರುವುದು ಎಷ್ಟೊಂದು ನಿರ್ಲಕ್ಶ್ಯ! ಪ್ರಕರಣದ ಬಗ್ಗೆ ತನಿಖೆ ನಡೆಸಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Scroll to load tweet…