ಕೇರಳವೇ ಕಂಬನಿ ಸುರಿಸಿದ ದುರಂತ ಪ್ರೇಮ ಕತೆ! ಶ್ರುತಿ ಬಾಳಲ್ಲಿ ಆಘಾತ, ಅನಾಥ!

ಬಾಲ್ಯದ ಗೆಳೆಯರಾಗಿದ್ದ ಶ್ರುತಿ ಮತ್ತು ಜೀಸನ್ ಮದುವೆಯಾಗಲು ನಿರ್ಧರಿಸಿದ್ದರು. ಮದುವೆ ಶಾಪಿಂಗ್‌ಗೆ ತೆರಳುವಾಗ ಜೀಸನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದಾಗಿ ಶ್ರುತಿಯ ಬದುಕು ಮತ್ತೆ ಅಂಧಕಾರದಲ್ಲಿ ಮುಳುಗಿದೆ.

Share this Video
  • FB
  • Linkdin
  • Whatsapp

ಜೆನ್ಸನ್, ಶೃತಿಯ ಬಾಲ್ಯದ ಗೆಳಯ.. ಇಬ್ಬರದ್ದೂ ಅಪರೂಪದ ಜೋಡಿ.. ಹತ್ತಾರು ವರ್ಷದ ಗೆಳೆತನ ಅವರದ್ದು.. ಮೊಗ್ಗೊಂದು ಹೂವಾಗೋ ಹಾಗೆ, ಅವರ ಸ್ನೇಹವೂ ಪ್ರೇಮವಾಗಿತ್ತು.. ಅದರಲ್ಲೂ ಅನಾಥೆಯಾಗಿದ್ದ ಶೃತಿ ಬಾಳಿಗೆ, ಜೆನ್ಸನ್ ಪ್ರೀತಿ ಬೆಳಕಾಗಿ ಬಂದಿತ್ತು.. ಇಬ್ಬರೂ ಕೂಡ ಮದುವೆಯಾಗೋ ನಿರ್ಧಾರ ಮಾಡಿದ್ರು.. ಅವತ್ತು 9 ಮಂದಿಯ ಕುಟುಂಬವನ್ನು ಕಳೆದುಕೊಂಡು ಅನಾಥಳಾಗಿದ್ದವಳು, ಅದಾಗಿ 44 ದಿನಗಳಲ್ಲೇ ಮತ್ತೆ ಅನಾಥಳಾಗಿದ್ದಾಳೆ.

Add Asianetnews Kannada as a Preferred SourcegooglePreferred

ದಶಕಗಳ ಕಾಲ ಲಿವ್ಇನ್‌ ರಿಲೇಶನ್‌ಶಿಪ್‌ ನಲ್ಲಿ ಇದ್ದು ಮುರಿದುಬಿದ್ದ ನಟ-ನಟಿಯರ ಸಂಬಂಧ!

ಬಾಲ್ಯದ ಗೆಳೆಯರಾದ ಶ್ರುತಿ ಹಾಗೂ ಜೀಸನ್ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಯ ಶಾಪಿಂಗ್‌ಗಾಗಿ ಇಬ್ಬರು ಕಾರಿನಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮಂಗಳವಾರ ಮಧ್ಯಾಹ್ನ ಜೀಸನ್ ಅವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ವಯನಾಡ್‌ನ ಕಲ್ಪೆಟ್ಟ ಬಳಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಜೀಸನ್ ಸಾವನ್ನಪ್ಪಿದ್ದು, ಇದರಿಂದ ಶ್ರುತಿಯವರ ಬದುಕಿನ ಭರವಸೆಯೇ ಭಗ್ನವಾಗಿದೆ. ಇಬ್ಬರು ಅನ್ಯಧರ್ಮಕ್ಕೆ ಸೇರಿದವರಾಗಿದ್ದು, ಬಾಲ್ಯದಿಂದಲೂ ಸಹಪಾಠಿಗಳಾಗಿದ್ದರು ಇವರ ಮದುವೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು ಇಲ್ಲಿದೆ ಈ ಬಗ್ಗೆ ಕಂಪ್ಲೀಟ್‌ ಸ್ಟೋರಿ..

Related Video