ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಶವ..!ಅತ್ಯಾಚಾರ ಮಾಡಿದವನು ಕೊಲೆಯನ್ನೂ ಮಾಡಿದ್ನಾ ?

ಉತ್ತರ ಕರ್ನಾಟಕ ಮೂಲದ ಮಹಿಳೆಯನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಆಕೆ 55 ವರ್ಷದ ಮಹಿಳೆ. ಉತ್ತರ ಕರ್ನಾಟಕದ(North Karnataka) ಮೂಲದ ಆಕೆ ಹೊಟ್ಟೆಪಾಡಿಗೆ ರಾಜಧಾನಿ ಬೆಂಗಳೂರಿಗೆ ಬಂದಿದ್ದಳು. ಎರಡು ಮಕ್ಕಳ ತಾಯಿಯಾದ ಆಕೆ ಶೆಡ್‌ನಲ್ಲಿ ವಾಸವಾಗಿದ್ದುಕೊಂಡೆ ಜೀವನ ನಡೆಸುತ್ತಿದ್ಳು. ಆದ್ರೆ ಕೆಲಸ ಅರಸಿಕೊಂಡು ಇದೇ ಬೆಂಗಳೂರಿಗೆ(Bengaluru) ಬಂದಿದ್ದ ಯುಪಿ ಮೂಲದ ಆ ಕಿರಾತಕ ಕಣ್ಣು ಅದ್ಯಾವಾಗ ಆ ಮಹಿಳೆ(Woman)ಮೇಲೆ ಬಿತ್ತೋ ಏನೋ ಭೀಕರವಾಗಿ ಕೊಲೆಯಾಗಿ(Murder) ಹೋಗಿದ್ದಾಳೆ. ತನಿಗಿನ್ನು ಚಿಕ್ಕವಯಸ್ಸು.. ದೂರದೂರಿಂದ ಕೆಲಸ ಹುಡುಕಿಕೊಂಡು ರಾಜಧಾನಿ ಬೆಂಗಳೂರಿಗೆ ಬಂದಿದ್ದ. ಸಿಕ್ಕ ಸಣ್ಣ ಕೆಲಸ ಮಾಡಿಕೊಂಡು ಗೆಳೆಯರ ಜೊತೆ ಬದುಕು ಸಾಗಿಸುತಿದ್ದ. ಆದ್ರೆ ಇಷ್ಟೇ ಆಗಿದ್ರೆ ಎಲ್ಲವೂ ಚೆನ್ನಾಗೆ ಇರುತಿತ್ತು. ಆದ್ರೆ ಅದೊಂದು ರಾತ್ರಿ ಮದ್ಯಸೇವಿಸಲು ಬಾರ್ ಗೆ ಹೊದ ಆತ ಮೆರದಿದ್ದು ಮಾತ್ರ ವಿಕೃತಿ. ಮದ್ಯದ ಅಮಲಿನಲ್ಲಿ ಆತ ಮಾಡಿದ ವಿಕೃತಿಗೆ ಹೊಟ್ಟೆಪಾಡಿಗೆ ಬಂದ ಉತ್ತರ ಕರ್ನಾಟಕದ ಮಹಿಳೆ ಬಲಿಯಾಗಿದ್ದಾಳೆ.ಹೀಗೆ ಕೆಲಸ ಅರಸಿ ಬಂದಿದ್ದ 55 ವರ್ಷದ ಮಹಿಳೆ ಮೇಲೆ ಸಚಿನ್ ಹೇಗೆ ಮೃಗನಂತೆ ಎರಗಿ ಅತ್ಯಾಚಾರ ಎಸಗಿದ್ದ ಅಂದ್ರೆ ಪೊಲೀಸರು ಕೂಡ ಒಂದು ಕ್ಷಣ ಶಾಕ್ ಆಗಿದ್ರೂ. ಯಾಕಂದ್ರೆ ಮಹಿಳೆಯ ಗುಪ್ತಾಂಗಕ್ಕೆಲ್ಲಾ ಒದ್ದು ಆಕೆ ಸತ್ತರೂ ಕೂಡ ಬಿಟ್ಟಿರಲಿಲ್ಲ. ಆ ಮಹಿಳೆ ಸತ್ತಿದ್ರೂ ಕೂಡ ಎಣ್ಣೆ ನಶೆಯಲ್ಲಿದ್ದ ಸಚಿನ್ ಶವ ಸಂಭೋಗವನ್ನು ಮಾಡಿ ವಿಕೃತಿ ಮೆರೆದಿದ್ದ. 55 ವರ್ಷದ ಮಹಿಳೆ ಮೇಲೆ 19 ವರ್ಷದ ಸಚಿನ್ ಯಾವ ಮಟ್ಟಿಗೆ ವಿಕೃತಿ ಮೆರೆದಿದ್ದ ಅನ್ನೋದನ್ನು ಹೇಳಿದ್ರೆ ನಿಮ್ಗೆ ಶಾಕ್ ಆಗೇ ಆಗುತ್ತೆ. ಆತನ ಕ್ರೂರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಆ ಮಹಿಳೆ ದೇಹ ಹಾಗೂ ಅಂಗಾಂಗಗಳ ಮೇಲೆ ಗಾಯದ ಗುರುತುಗಳಾಗಿತ್ತು.. ಆಕೆಯ ಎದೆಯ ಭಾಗ ಹಾಗೂ ಗುಪ್ತಾಂಗಕ್ಕೂ ಸಹ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದ ಈತನ ಪೈಶಾಚಿಕ ಕೃತ್ಯಕ್ಕೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸತ್ತರೂ ಬಿಡದೇ ಶವ ಸಂಭೋಗ ಮಾಡಿದ್ದ.. ಯುಪಿಗೆ ಓಡಿಹೋಗಲು ಪ್ಲಾನ್ ಸಹ ಮಾಡಿದ್ದ ಈತ ಪೊಲೀಸರಿಗೆ ಸಿಕ್ಕಿದ್ದೇ ರೋಚಕ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: Siddaramaiah: "ಗೆದ್ದರೆ ಅಧಿಕಾರ, ಸೋತರೆ ತಲೆದಂಡ.." ಡಿಸಿಎಂ ಡಿಕೆ ವಾರ್ನಿಂಗ್! ನಾನು ಇರ್ಬೇಕೋ ಬೇಡ್ವೋ” ಅಂದಿದ್ದೇಕೆ ಸಿಎಂ ?

Related Video