ದೇಶದ ಸೆಮಿ-ಹೈಸ್ಪೀಡ್ ರೈಲು 'ವಂದೇ ಭಾರತ್ ಎಕ್ಸ್ಪ್ರೆಸ್' ಭಾರತೀಯ ರೈಲ್ವೆಗೆ ಬೃಹತ್ ಆದಾಯದ ಮೂಲವಾಗಿದೆ, ದಕ್ಷಿಣ ಭಾರತದಲ್ಲೇ 806 ಕೋಟಿ ರೂ. ಗಳಿಸಿದೆ. ದುಬಾರಿ ಟಿಕೆಟ್ ದರ, ಶೇ.100ರಷ್ಟು ಆಕ್ಯುಪೆನ್ಸಿ ಮತ್ತು ವೇಗದ ಪ್ರಯಾಣದ ಕಾರಣ ಇದು ಯಶಸ್ವಿಯಾಗಿದೆ.
- Home
- News
- India News
- India Live News: ದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ! - ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!
India Live News: ದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ! - ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!

ದೇಶದಲ್ಲಿ ಆಡಳಿತ ಪಕ್ಷ ಎನ್ಡಿಎ ಮತ್ತು ವಿಪಕ್ಷಗಳಾದ ಇಂಡಿಯಾ ಒಕ್ಕೂಟಗಳು ಜೆನ್ಝೀಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೆನ್ಝೀಗಳ ಬಳಿಯೇ ಹೋಗಲು ನಿರ್ಧರಿಸಿದ್ದು, ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳಿಸುವ ಚಿಂತನೆಯನ್ನು ಮಾಡಿದೆ. ಈ ಮೂಲಕ ಯುವಕರೊಂದಿಗೆ ನೇರವಾಗಿ ಸಂವಹನ ನಡೆಸಿ ಅವರ ಬೇಡಿಕೆಗಳನ್ನು ಅರಿಯುವ ಕಾರ್ಯಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಜೊತೆಗೆ, 'ಒಂದು ದಿನ, ಒಂದು ವಿಶ್ವವಿದ್ಯಾಲಯ' ಕಾರ್ಯಕ್ರಮದಡಿ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ, ಯುವಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ಇಂಡಿಯಾ ಒಕ್ಕೂಟದ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಜೆನ್ಝೀ ಯುವ ಸಮುದಾಯವನ್ನು ತಮ್ಮತ್ತ ಸೆಳೆಯಲು ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದೆ. ದೆಹಲಿ, ಜಾರ್ಖಂಡ್ ಜೆನ್ಝೀ ಹೋರಾಟದ ಎಫೆಕ್ಟ್ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಎಲ್ಲ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳ ಮುಖ್ಯಮಮಂತ್ರಿಗಳಿಗೆ ಆದೇಶ ನೀಡಿದ್ದಾರೆ. ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿ ವರದಿ ಸಲ್ಲಿಸಲು 1 ತಿಂಗಳ ಗಡುವು ನೀಡಿದ್ದಾರೆ.
India News Liveದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ! - ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!
India News Liveಜಿಯೋ ರಿಚಾರ್ಜ್ ದರ ಹೆಚ್ಚಳ ಬಹುತೇಕ ಖಚಿತ - ಗ್ರಾಹಕರಿಗೆ ಶೀಘ್ರದಲ್ಲೇ ಶಾಕ್ ನೀಡಲು ಮುಹೂರ್ತ ಫಿಕ್ಸ್!
ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ರೀಚಾರ್ಜ್ ದರಗಳನ್ನು ಶೇಕಡಾ 15-20 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ದರ ಏರಿಕೆಯಿಂದ ಗ್ರಾಹಕರನ್ನು ತಾತ್ಕಾಲಿಕವಾಗಿ ರಕ್ಷಿಸಲು, ಕಂಪನಿಯು ₹300 ಮೌಲ್ಯದ 'ಜಿಯೋ ಪ್ರೈಮ್ ಮೆಂಬರ್ಶಿಪ್' ಅನ್ನು ಪರಿಚಯಿಸಿದೆ.
India News Liveಅಲ್ಲು ಅರ್ಜುನ್ ಜೊತೆ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್? ‘ರಾಕ’ ಸಿನಿಮಾದಲ್ಲಿ ಮಹತ್ವದ ಪಾತ್ರದ ಆಫರ್!
ಪುಷ್ಪ 2 ನಂತರ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಕ'. ಅಟ್ಲಿ ನಿರ್ದೇಶನದ ಈ ಚಿತ್ರದ ಬಗ್ಗೆ ಈಗೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.
India News Liveಶ್ರಾವಣ ಮಾಸದಲ್ಲಿ ನಿತಿನ್ ನಬಿನ್ ಮಾಂಸಾಹಾರ ತಿಂದ್ರಾ? 'ಇದು ಸುಳ್ಳು ಸುದ್ದಿ' ಕಾಂಗ್ರೆಸ್ ಪೋಸ್ಟ್ಗೆ ಬಿಜೆಪಿ ಕೆಂಡಾಮಂಡಲ!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದಾರೆಂದು ಛತ್ತೀಸ್ಗಢ ಕಾಂಗ್ರೆಸ್ ಸುಳ್ಳು ಪೋಸ್ಟ್ ಮಾಡಿದೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ. ಇದು ಸೋಲಿನ ಹತಾಶೆಯಿಂದ ಮಾಡುತ್ತಿರುವ ಅಪಪ್ರಚಾರ ಎಂದು ಬಿಜೆಪಿ ಕಿಡಿಕಾರಿದೆ.
India News Liveಐಟಿ ಉದ್ಯೋಗಿಗಳ ಪ್ರೈವೆಸಿಗೆ ಬಿತ್ತು ಕನ್ನ - ಲ್ಯಾಪ್ಟಾಪ್ಗಳಲ್ಲಿ ಮಾನಿಟರಿಂಗ್ ಸಾಫ್ಟ್ವೇರ್ ಹಾಕಿ ಟ್ರ್ಯಾಕ್ ಮಾಡಲು ಆರಂಭಿಸಿದ ಟಿಸಿಎಸ್!
TCS ತನ್ನ ಉದ್ಯೋಗಿಗಳ ಲ್ಯಾಪ್ಟಾಪ್ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್ಪೀರಿಯನ್ಸ್ ಮಾನಿಟರಿಂಗ್' ಟೂಲ್ ಅಳವಡಿಸಿದೆ. ಈ ಕ್ರಮವು ಡೇಟಾ ಭದ್ರತೆಗಾಗಿಯೇ ಅಥವಾ ಉದ್ಯೋಗಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆಯೇ ಎಂಬ ಆತಂಕ ಮತ್ತು ಅನುಮಾನಗಳನ್ನು ಸಿಬ್ಬಂದಿ ವಲಯದಲ್ಲಿ ಹುಟ್ಟುಹಾಕಿದೆ.
India News Liveಮಹಿಳಾ ಏಷ್ಯಾಕಪ್ 2026 - ಭಾರತ ಚಾಂಪಿಯನ್ ಆದರೆ ಪಿಸಿಬಿ ಅಧ್ಯಕ್ಷ ನಖ್ವಿಯಿಂದ ಟ್ರೋಫಿ ಪಡೆಯುತ್ತಾ ಹರ್ಮನ್ಪ್ರೀತ್ ಪಡೆ?
ಮಹಿಳಾ ಏಷ್ಯಾಕಪ್ 2026ರಲ್ಲಿ, ಭಾರತ ತಂಡ ಫೈನಲ್ ಗೆದ್ದರೆ ಟ್ರೋಫಿ ಸ್ವೀಕಾರದ ಕುರಿತು ವಿವಾದ ಮರುಕಳಿಸುವ ಸಾಧ್ಯತೆಯಿದೆ. ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಇರುವುದರಿಂದ, ಹರ್ಮನ್ಪ್ರೀತ್ ಪಡೆ ಟ್ರೋಫಿ ಸ್ವೀಕರಿಸುವುದೇ ಅಥವಾ ಪುರುಷರ ತಂಡದಂತೆ ನಿರಾಕರಿಸುವುದೇ ಎಂಬ ಕುತೂಹಲ ಮೂಡಿದೆ.
India News Liveಎಚ್ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ - ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ
India News Liveಭಾರತದ ಮೊದಲ ಎಟಿಎಂ ಯಾವುದು? ಎಲ್ಲಿ ಸ್ಥಾಪಿಸಲಾಯಿತು? ಇದರ ಹಿಂದಿನ ಇತಿಹಾಸ ಗೊತ್ತಾ?
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ತಂದ ಕ್ರಾಂತಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಟಿಎಂ ಬಂದ ನಂತರ ಬ್ಯಾಂಕಿಂಗ್ ವ್ಯವಹಾರವೇ ಬದಲಾಯಿತು. ಹಾಗಾದರೆ, ಭಾರತದ ಮೊದಲ ಎಟಿಎಂ ಎಲ್ಲಿದೆ, ಅದರ ಹಿಂದಿನ ಕಥೆ ಏನು? ತಿಳಿಯೋಣ ಬನ್ನಿ.
India News LiveWatch - ಲಾರ್ಡ್ಸ್ ಬಾಲ್ಕನಿಯಲ್ಲಿ ಮರುಕಳಿಸಿದ 'ದಾದಾ' ಖದರ್ - ಇಂಗ್ಲೆಂಡ್ ನೆಲದಲ್ಲಿ ಕೋಟ್ ಬಿಚ್ಚಿ ಸಂಭ್ರಮಿಸಿದ ಭಾರತೀಯ ದಿವ್ಯಾಂಗ ಕ್ರಿಕೆಟಿಗರು!
India News LiveAIನಿಂದ ಉದ್ಯೋಗ ನಷ್ಟ ಭೀತಿ - ಕಾರ್ಪೊರೇಟ್ ಕಂಪನಿಗಳಿಗೆ ಮಾಜಿ RBI ಗವರ್ನರ್ ರಘುರಾಮ್ ಹೊಸ ತೆರಿಗೆ ಅಸ್ತ್ರ ಪ್ರಸ್ತಾಪ!
India News LiveHyundai Price Hike - ಹ್ಯುಂಡೈ ಕಾರ್ ಬೆಲೆ ಮತ್ತೆ ಏರಿಕೆ! ಯಾವ ಮಾಡೆಲ್ಗೆ ಎಷ್ಟು ಬೆಲೆ ಏರಿಕೆ?
India News Liveಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲು - ಪಂದ್ಯ ಮುಗಿದ ಬೆನ್ನಲ್ಲೇ ಮೈದಾನದಲ್ಲೇ ಎರಡು ಭಾಗವಾಗಿ ಕತ್ತರಿಸಲಾಯ್ತು ಚೆಂಡು!
India News Liveಕ್ಷೀರಪಥದ ಕೇಂದ್ರದಲ್ಲಿ ವಿಶ್ವದ ಅತ್ಯಂತ ವೇಗದ ನಕ್ಷತ್ರ ಪತ್ತೆ - ಕಪ್ಪು ಕುಳಿಯ ರಹಸ್ಯ ಬಿಡಿಸಲಿದೆಯೇ S301?
India News Liveಕೈಗೆಟಕುವ ದರದಲ್ಲಿ ಐಕ್ಯೂ Z11 ಸ್ಮಾರ್ಟ್ಫೋನ್ ಹಾಗೂ iQOO ಬಡ್ಸ್ ಭಾರತದಲ್ಲಿ ಬಿಡುಗಡೆ
India News LiveNASA Viking Mission - ಮಂಗಳ ಗ್ರಹದ ಮೇಲೆ ಮೊದಲ ಬಾರಿಗೆ ಇಳಿದ ಬಾಹ್ಯಾಕಾಶ ನೌಕೆ; ಕೆಂಪು ಗ್ರಹದ ಚಿತ್ರಗಳು ಭೂಮಿಗೆ ರವಾನೆ
India News Liveಚಾಣಕ್ಯ ನೀತಿ ಪ್ರಕಾರ, ಬುದ್ಧಿವಂತ ವ್ಯಕ್ತಿ ಈ 5 ವಿಷಯಗಳನ್ನು ಯಾರಿಗೂ ಹೇಳಲ್ಲ..! ಯಾಕಂದ್ರೆ?
ಮನುಷ್ಯನ ಮಾತಿಗೆ ಎಲ್ಲಿಲ್ಲದ ಶಕ್ತಿ ಇದೆ. ಒಂದು ಮಾತು ಸಂಬಂಧವನ್ನು ಬೆಳೆಸಬಲ್ಲದು, ಮುರಿಯಬಲ್ಲದು. ಹಾಗಾಗಿ ಯಾವಾಗ ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾರೊಂದಿಗೆ ಏನು ಹೇಳಬೇಕು? ಎಂಬ ಬಗ್ಗೆ ಎಚ್ಚರಿಕೆ ಇರಬೇಕು. ಚಾಣಕ್ಯನ ಪ್ರಕಾರ, ಬುದ್ಧಿವಂತ ವ್ಯಕ್ತಿ ಯಾರಿಗೂ ಹೇಳದ ಆ 5 ವಿಷಯಗಳು ಯಾವುವು ನೋಡೋಣ.
India News Liveಲಂಡನ್ ಹಾಸ್ಟೆಲ್ನಿಂದ ಭಾರತೀಯ ಮಹಿಳೆ ಹೊರಹಾಕಿದ್ದು ಯಾಕೆ? ಜನಾಂಗೀಯ ತಾರತಮ್ಯದ ಅಸಲಿ ಸತ್ಯ ಬಿಚ್ಚಿಟ್ಟ ವ್ಲಾಗರ್!
India News Liveಭಾರತದ ಒಂದೇ ಸಿಟಿ, ಎರಡು ರಾಜ್ಯಗಳಿಗೆ ರಾಜಧಾನಿ! ಯಾವುದು ಆ ನಗರ? ಇದರ ಹಿಂದಿನ ಕಥೆಯೇನು?
ನಮ್ಮ ದೇಶದಲ್ಲಿ ಎರಡು ರಾಜ್ಯಗಳಿಗೆ ಒಂದೇ ರಾಜಧಾನಿ ಇದೆ. ಆ ರಾಜ್ಯಗಳು ಯಾವುವು? ಒಂದೇ ನಗರವನ್ನು ಎರಡು ರಾಜ್ಯಗಳು ರಾಜಧಾನಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಹಾಗಾದರೆ ಆಡಳಿತ ಯಾರ ಕೈಯಲ್ಲಿದೆ?
India News Liveಒಲಿಂಪಿಕ್ಸ್, ಏಷ್ಯನ್ ಗೇಮ್ಸ್ನಿಂದ ಮುತ್ತಜ್ಜಿಯ ಲೆಹೆಂಗಾವರೆಗೆ - ಪಟಿಯಾಲ ರಾಜಮನೆತನದ ಕಲಾ ವೈಭವ, ರಹಸ್ಯ ಕಥೆಗಳು!
India News Liveಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು.. ತಮ್ಮದೇ ಪ್ರಾಂಶುಪಾಲರನ್ನ 27 ಬಾರಿ ಇರಿದು ಕೊಂದರು.. ಕಾರಣ?
ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು, ತಮ್ಮ ಶಾಲೆಯ ಪ್ರಾಂಶುಪಾಲರನ್ನು 27 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಕ್ಕಳನ್ನು ತಿದ್ದಲು ಹೋದ ಗುರುವನ್ನೇ ಹಣಕ್ಕಾಗಿ ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಈ ಪ್ರಕರಣ, ಸಮಾಜದಲ್ಲಿ ಮಕ್ಕಳ ಕ್ರೂರ ಮನಸ್ಥಿತಿಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.