LIVE NOW
| Updated : Sep 09 2026, 07:33 AM IST India News Live: ‘ಅಭಿವೃದ್ಧಿ ಕಂಡರೆ ಅತೃಪ್ತ ಅಂಕಲ್ಗಳು ಅರಚುತ್ತಾರೆ’: ವಡೋದರಾದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕಿಡಿ!
ಸಾರಾಂಶ
‘2014ರ ನಂತರ ನಾವು 50,000 ಆಧುನಿಕ ರೈಲ್ವೆ ಬೋಗಿಗಳನ್ನು ನಿರ್ಮಿಸಿದ್ದೇವೆ. ಆದರೆ ಹಿಂದಿನ ಸರ್ಕಾರದ (ಕಾಂಗ್ರೆಸ್) ಕೈಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಲಿಲ್ಲ. ಇದೀಗ ಅಭಿವೃದ್ಧಿಯನ್ನು ಕಂಡು ಮತ್ತೆ ಅತೃಪ್ತ ಆತ್ಮಗಳು ಅಥವಾ ಅತೃಪ್ತ ಅಂಕಲ್ಗಳು (ನಾರಾಜ್ ಫೂಫಾ) ಅರಚಲು ಆರಂಭಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ವಿರುದ್ಧ ಮಂಗಳವಾರವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇತ್ತೀಚೆಗೆ ಪ್ರಧಾನಿ ವಿಪಕ್ಷಗಳನ್ನು ‘ಅತೃಪ್ತ ಆತ್ಮಗಳು’ ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅದೇ ಪದಬಳಕೆಯ ಮೂಲಕ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ಗುಜರಾತಿನ ವಡೋದರಾದಲ್ಲಿ ಒಟ್ಟು 35,000 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ದೇಶದ ಸಾರಿಗೆ ಮತ್ತು ವಾಣಿಜ್ಯ ರಂಗದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವ 2,800 ಕಿ.ಮೀ. ಉದ್ದದ ಬೃಹತ್ ‘ಮೀಸಲು ಸರಕು ಸಾಗಣೆ ಕಾರಿಡಾರ್’ ಯೋಜನೆಯನ್ನೂ ಲೋಕಾರ್ಪಣೆಗೊಳಿಸಿದರು.
India News Liveಮೋದಿ ಕಾರ್ಯಕ್ರಮದೊಳಕ್ಕೆ ನುಗ್ಗಿದ ಗನ್ ಮ್ಯಾನ್ ಅರೆಸ್ಟ್, PMO ಅಧಿಕಾರಿ ಸೋಗಿನಲ್ಲಿ ಬಂದ ಇಬ್ಬರು
ಮುಂಬೈ (ಸೆ.08) ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭದ್ರತಾ ಆತಂಕ ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುವ ಮೊದಲೇ ಭದ್ರತಾ ಪಡೆಗಳು ಇಬ್ಬರನ್ನು ಅರೆಸ್ಟ್ ಮಾಡಿದೆ. ಈ ಪೈಕಿ ಒರ್ವನಿಂದ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಐಡಿ ಕಾರ್ಡ್ ಬಳಸಿ ಮೋದಿ ಕಾರ್ಯಕ್ರಮದ ಪ್ರದೇಶಕ್ಕೆ ಆಗಮಿಸಿದ್ದರು. ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿ ವಿಚಾರಣೆ ತೀವ್ರಗೊಳಿಸಿದೆ.
NMACC ಆಯೋಜಿಸಲಾಗಿದ್ದ ಕಾರ್ಯಕ್ರಮ
ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (NMACC) ಆಯೋಜಿಸಲಾಗಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇಂದು (ಸೆ.08) ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ರಾತ್ರಿ ವೇಳೆ ಇಬ್ಬರನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿದೆ. ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಬಾಡಿಗಾರ್ಡ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಓರ್ವನಿಂದ ಒಂದು ಲೈಲೆನ್ಸ್ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
Read Full StoryIndia News Liveಕಷ್ಟಪಟ್ಟು ದುಡಿದ ಹಣದಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ - ಬಾಕ್ಸ್ನಲ್ಲಿ ಸಗಣಿ ತುಂಬಿ ಪಾರ್ಸಲ್ ಮಾಡಿದ್ರು
ಗ್ರೇಟರ್ ನೋಯ್ಡಾ: ಆನ್ಲೈನ್ ಶಾಪಿಂಗ್ ಮಾಡುವವರು ಎಚ್ಚರ! ಇಲ್ಲೊಬ್ಬ ಯುವಕ ತನಗೆ ಬೇಕಾದ ಎಲೆಕ್ಟ್ರಾನಿಕ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದಕ್ಕೆ ಪ್ರತಿಯಾಗಿ ಬಂದ ಪಾರ್ಸೆಲ್ನಲ್ಲಿ ಸಗಣಿ ಕಂಡುಬಂದಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ವಂಚನೆ ಪ್ರಕರಣ ಈಗ ಸೈಬರ್ ಸೆಲ್ ಮೆಟ್ಟಿಲೇರಿದೆ.
ನಡೆದಿದ್ದೇನು?
ಗ್ರೇಟರ್ ನೋಯ್ಡಾದ ಸಮಸಪುರ ಗ್ರಾಮದ ನಿವಾಸಿ ಆಕಾಶ್ ನಾಗರ್ ಎಂಬುವವರು ಇತ್ತೀಚೆಗೆ ಒಂದು ವೆಬ್ಸೈಟ್ ಮೂಲಕ ಆಂಡ್ರಾಯ್ಡ್ ಸಾಧನ (Android Device) ಆರ್ಡರ್ ಮಾಡಿದ್ದರು. ಇದಕ್ಕಾಗಿ ಬೇಕಾದ ಸಂಪೂರ್ಣ ಹಣವನ್ನು ಅವರು ಬುಕಿಂಗ್ ಸಮಯದಲ್ಲಿಯೇ ಆನ್ಲೈನ್ ಮೂಲಕ ಪಾವತಿಸಿದ್ದರು.
Read Full Story