11:36 PM (IST) Aug 17

India Latest News Live 17 August 2026'ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ' - ನಟ ನಾಗಾರ್ಜುನ ಓಪನ್ ಟಾಕ್

ನಟ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾನು ಭ್ರಷ್ಟನಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಮಸ್ಯೆ ಇಲ್ಲ, ಆದರೆ ಹೊರಗಿನ ಜಗತ್ತಿನಲ್ಲಿ ಇದು ಹೆಚ್ಚಾಗಿದೆ.

Read Full Story
10:49 PM (IST) Aug 17

India Latest News Live 17 August 20265 ವರ್ಷದ ಬಾಲಕನ ಮುದ್ದು ಕಂಠದಲ್ಲಿ ರಾಷ್ಟ್ರಗೀತೆ - ನಾಗಾಲ್ಯಾಂಡ್ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ!

ಆನಂದ್ ಮಹೀಂದ್ರಾ ಶ್ಲಾಘಿಸಿದ 5 ವರ್ಷದ ಬಾಲಕನ ರಾಷ್ಟ್ರಗೀತೆ ಗಾಯನದಿಂದ ನಾಗಾಲ್ಯಾಂಡ್ ಪ್ರವಾಸೋದ್ಯಮವು ಗಮನ ಸೆಳೆದಿದೆ. ಈ ಲೇಖನವು ಹಾರ್ನ್‌ಬಿಲ್ ಹಬ್ಬ, ಜುಕೊ ಕಣಿವೆ, ಖೊನೊಮಾ ಹಸಿರು ಗ್ರಾಮ ಸೇರಿದಂತೆ ನಾಗಾಲ್ಯಾಂಡ್‌ನ ಪ್ರಮುಖ ಪ್ರವಾಸಿ ತಾಣಗಳ ವಿವರ ಇಲ್ಲಿದೆ.

Read Full Story
10:01 PM (IST) Aug 17

India Latest News Live 17 August 2026‘ಸುರ್ನಪಖಾ ಅಲ್ಲ, ಶೂರ್ಪನಖಿ’ - ಹೆಸರು ತಪ್ಪಾಗಿ ಹೇಳಿದ ಪಾಪರಾಜಿಗಳನ್ನು ನಗುತ್ತಲೇ ತಿದ್ದಿದ ರಕುಲ್!

ನಟಿಯೊಂದಿಗೆ ಮಾತನಾಡುವ ವೇಳೆ ಮುಂಬೈನ ಪಾಪರಾಜಿಗಳು ಆಕೆಯ ‘ರಾಮಾಯಣ’ ಪಾತ್ರದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ರಕುಲ್ ಪ್ರೀತ್ ಸಿಂಗ್ ನಗುತ್ತಲೇ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಟ್ಟಿದ್ದಾರೆ.

Read Full Story
09:42 PM (IST) Aug 17

India Latest News Live 17 August 2026ಮೋದಿಗಾಗಿ ಕಾನ್‌ಸ್ಟೆಬಲ್ ಹುದ್ದೆಗೆ ರಾಜೀನಾಮೆ; ಸರ್ಕಾರಿ ಕೆಲಸವನ್ನೇ ತ್ಯಾಗ ಮಾಡಿದ ಪೊಲೀಸ್..!

ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅಪಪ್ರಚಾರ ಎದುರಿಸಲು ಮತ್ತು 2029ರ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಲು ಗುಜರಾತ್‌ನ ಕಾನ್‌ಸ್ಟೆಬಲ್ ರಾಮಗರ್ ಗೋಸಾಯಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಅವರ ನಡೆ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
09:41 PM (IST) Aug 17

India Latest News Live 17 August 2026ವ್ಯರ್ಥ ಆಹಾರದಿಂದ ಪರಿಸರ ಹಾನಿ ತಡೆಗೆ ಇರುವೆ ಬಳಕೆ - 18 ವರ್ಷದ ವಿದ್ಯಾರ್ಥಿನಿಯ ಅದ್ಭುತ ಸಂಶೋಧನೆ

ವಿಶ್ವಾದ್ಯಂತ ಆಹಾರ ತ್ಯಾಜ್ಯವು ಗಂಭೀರ ಸಮಸ್ಯೆಯಾಗಿದ್ದು, ಪರಿಸರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ವಿದ್ಯಾರ್ಥಿನಿ ಅನನ್ಯಾ ಗುಲೂರ್ ನಾಗೇಂದ್ರ ಅವರು ಇರುವೆಗಳನ್ನು ಬಳಸಿ ಆಹಾರ ತ್ಯಾಜ್ಯವನ್ನು ಸಂಸ್ಕರಿಸುವ ವಿನೂತನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂಶೋಧನೆಯು ತ್ಯಾಜ್ಯ ನಿರ್ವಹಣೆಯಲ್ಲಿ ಇರುವೆಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
Read Full Story
09:25 PM (IST) Aug 17

India Latest News Live 17 August 2026ಕರ್ನಾಟಕ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಅಭಾವ - ದೇಶದಲ್ಲಿ ಭತ್ತದ ಬಿತ್ತನೆ 14.37 ಲಕ್ಷ ಹೆಕ್ಟೇರ್‌ ಕುಸಿತ!

ಕರ್ನಾಟಕ, ಜಾರ್ಖಂಡ್, ಮತ್ತು ಮಹಾರಾಷ್ಟ್ರದಲ್ಲಿನ ಮಳೆ ಕೊರತೆಯಿಂದಾಗಿ, ದೇಶದಲ್ಲಿ ಖಾರಿಫ್ ಭತ್ತದ ಬಿತ್ತನೆ ವಿಸ್ತೀರ್ಣ ಶೇ. 3.65 ರಷ್ಟು ಕುಸಿದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕುಸಿತ ದಾಖಲಾಗಿದೆ.

Read Full Story
08:50 PM (IST) Aug 17

India Latest News Live 17 August 2026ಭಾರತದ ಅತ್ಯಂತ ಎತ್ತರದ 7 ಕ್ರಿಕೆಟಿಗರು ಇವರೇ ನೋಡಿ.. ಲಿಸ್ಟ್‌ನಲ್ಲಿ ಕನ್ನಡಿಗನೂ ಇದ್ದಾನೆ..!

ಕ್ರಿಕೆಟ್‌ನಲ್ಲಿ ಆಟಗಾರರ ಎತ್ತರವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವಿಶೇಷ ಲಾಭವನ್ನು ನೀಡುತ್ತದೆ. ಭಾರತದ ಅತ್ಯಂತ ಎತ್ತರದ ಆಟಗಾರರಾದ ಅಬೆ ಕುರುವಿಲ್ಲಾ (6.6) ರಿಂದ ಹಿಡಿದು ಇಶಾಂತ್ ಶರ್ಮಾ ಮತ್ತು ಶಿವಂ ದುಬೆವರೆಗಿನ ಟಾಪ್ 7 ಆಟಗಾರರ ಮಾಹಿತಿ ಇಲ್ಲಿದೆ.

Read Full Story
08:14 PM (IST) Aug 17

India Latest News Live 17 August 2026ಗೆಜ್ಜೆ ಸದ್ದು, ಆಕ್ರಂದನ..ಆಶ್ರಮ ವಸತಿ ಶಾಲೆಯಲ್ಲಿ ಭೂತದ ಭೀತಿ - ಸ್ಕೂಲ್‌ ತೊರೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು!

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯೊಂದರಲ್ಲಿ ದೆವ್ವದ ವದಂತಿಯಿಂದಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ. ರಾತ್ರಿ ವೇಳೆ ಗೆಜ್ಜೆ ಸದ್ದು, ಅಳು, ನಗುವಿನಂತಹ ವಿಚಿತ್ರ ಶಬ್ದಗಳು ಕೇಳಿಬಂದಿದೆ.

Read Full Story
07:48 PM (IST) Aug 17

India Latest News Live 17 August 2026ಸರ್ಕಸ್​ ಕಂಪೆನಿ ಸೇರಬೇಕಿದ್ದವ ಡಾಕ್ಟರ್​ ಆದ ರೋಚಕ ಸ್ಟೋರಿ - ವೈದ್ಯಕೀಯ ಮಂಡಳಿ ರಿಜೆಕ್ಟ್​ ಮಾಡಿದ್ರೂ ದಾಖಲೆ ಬರೆದ ಸಾಹಸಿ

3 ಅಡಿ 4 ಇಂಚು ಎತ್ತರದ ಡಾ.ಗಣೇಶ್ ಬರಯ್ಯ, ದೈಹಿಕ ನ್ಯೂನತೆಯ ಕಾರಣಕ್ಕೆ ವೈದ್ಯಕೀಯ ಪ್ರವೇಶ ನಿರಾಕರಿಸಲ್ಪಟ್ಟರೂ ಛಲ ಬಿಡಲಿಲ್ಲ. ಸುಪ್ರೀಂಕೋರ್ಟ್​ನಲ್ಲಿ ಕಾನೂನು ಹೋರಾಟ ಮಾಡಿ ಗೆದ್ದು, ಇಂದು ಜಗತ್ತಿನ ಅತಿ ಕುಬ್ಜ ಡಾಕ್ಟರ್​ ಆಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
Read Full Story
07:31 PM (IST) Aug 17

India Latest News Live 17 August 2026'ಸತ್ತವರ ಬಗ್ಗೆ ನಾನು ಯೋಚಿಸಲ್ಲ' - ಶ್ರೀದೇವಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಅಧ್ಯಾಯ ಬರೆದಿದ್ದಾರೆ. ಈ ವೇಳೆ, ದಂತಕಥೆಯಂತಿದ್ದ ನಟಿಯ ನಟನೆ, ಅದರಲ್ಲೂ 'ಮಿಸ್ಟರ್ ಇಂಡಿಯಾ' ಚಿತ್ರದ ಅಭಿನಯವನ್ನು ನೆನಪಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story
07:00 PM (IST) Aug 17

India Latest News Live 17 August 2026ರಿಚಾರ್ಜ್ ದರ ಏರಿಕೆಯಾದರೂ ಇಲ್ಲ ತಲೆನೋವು - ಜಿಯೋ ಪ್ರೈಮ್‌ ಇದ್ರೆ ಸಾಕು ಒಂದು ವರ್ಷ ಟೆನ್ಶನ್‌ ಫ್ರೀ!

ರಿಲಯನ್ಸ್ ಜಿಯೋ ತನ್ನ 'ಜಿಯೋ ಪ್ರೈಮ್' ಸದಸ್ಯತ್ವವನ್ನು ಮರುಆರಂಭಿಸಿದೆ. ಕೇವಲ ₹300 ಪಾವತಿಸಿ ಒಂದು ವರ್ಷದವರೆಗೆ ಭವಿಷ್ಯದ ದರ ಏರಿಕೆಯಿಂದ ರಕ್ಷಣೆ ಪಡೆಯಬಹುದು. ಈ ಯೋಜನೆಯು ಹಳೆಯ ದರದಲ್ಲಿ ರಿಚಾರ್ಜ್, ಕ್ಯಾಶ್‌ಬ್ಯಾಕ್, ಆದ್ಯತೆಯ ಗ್ರಾಹಕ ಸೇವೆ ಮುಂತಾದ ಲಾಭಗಳನ್ನು ನೀಡುತ್ತದೆ.
Read Full Story
06:49 PM (IST) Aug 17

India Latest News Live 17 August 2026ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ಕೊಟ್ಟು ಕೊಂದ ಪತ್ನಿ.. ದರೋಡೆ ನಾಟಕವಾಡಿದ ಕಿರಾತಕಿ ಲಾಕ್ ಆಗಿದ್ದು ಹೇಗೆ?

ದೆಹಲಿಯಲ್ಲಿ ಅಕ್ರಮ ಸಂಬಂಧಕ್ಕಾಗಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ನೀಡಿ ಕ್ರೂರವಾಗಿ ಹತ್ಯೆ ಮಾಡಿ, ದರೋಡೆಯ ನಾಟಕವಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ. ಕೊನೆಗೆ ಈಕೆ ಲಾಕ್ ಆಗಿದ್ದು ಹೇಗೆ ಗೊತ್ತಾ?

Read Full Story
06:42 PM (IST) Aug 17

India Latest News Live 17 August 2026ಏರ್‌ಟೆಲ್‌ನಿಂದ ಭರ್ಜರಿ ಆಫರ್‌ - ಐಫೋನ್ ಖರೀದಿಯ ಮೇಲೆ ಸಿಗಲಿದೆ ₹35,000 ವರೆಗೆ ಭಾರಿ ಡಿಸ್ಕೌಂಟ್‌

ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಕ್ರೋಮಾ ಸಹಯೋಗದೊಂದಿಗೆ ಹೊಸ ಐಫೋನ್ ಖರೀದಿಯ ಮೇಲೆ ₹35,000 ವರೆಗೆ ಉಳಿತಾಯ ಮಾಡುವ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ನೇರ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್ ಸೇರಿದ್ದು, ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಇದನ್ನು ಕ್ಲೇಮ್ ಮಾಡಬಹುದು.
Read Full Story
06:24 PM (IST) Aug 17

India Latest News Live 17 August 2026ಚಿದಂಬರ ರಹಸ್ಯ ಅಂದ್ರೇನು? ಆ ಗರ್ಭಗುಡಿಯ ಪರದೆ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ!

ಸಾಮಾನ್ಯವಾಗಿ ನಿಗೂಢ ವಿಷಯಗಳಿಗೆ ಬಳಸುವ 'ಚಿದಂಬರ ರಹಸ್ಯ' ಎಂಬ ನುಡಿಗಟ್ಟು ತಮಿಳುನಾಡಿನ ಚಿದಂಬರಂ ದೇವಸ್ಥಾನದಿಂದ ಬಂದಿದೆ. ಇಲ್ಲಿನ ಗರ್ಭಗುಡಿಯಲ್ಲಿ ಯಾವುದೇ ಮೂರ್ತಿಯಿಲ್ಲದೆ, ಶೂನ್ಯವನ್ನೇ ದೇವರ ರೂಪವೆಂದು ಪೂಜಿಸಲಾಗುತ್ತದೆ. ದೇವರು ನಿರಾಕಾರ ಮತ್ತು ಸರ್ವವ್ಯಾಪಿ ಎಂಬ ತಾತ್ವಿಕ ಸತ್ಯವೇ ಈ ರಹಸ್ಯದ ಹಿಂದಿನ ಅಸಲಿ ಅರ್ಥವಾಗಿದೆ.
Read Full Story
05:46 PM (IST) Aug 17

India Latest News Live 17 August 2026ಏಷ್ಯನ್ ಗೇಮ್ಸ್‌ಗೆ ಆಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್‌ಗೆ ರೆಸ್ಟ್, ಮೊಹಮ್ಮದ್ ನಬಿ ಮಗನಿಗೆ ಚಾನ್ಸ್!

ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ರಶೀದ್ ಖಾನ್‌ರಂತಹ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ದರ್ವೀಶ್ ರಸೂಲಿ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲಾಗಿದ್ದು, ಮಾಜಿ ನಾಯಕ ಮೊಹಮ್ಮದ್ ನಬಿ ಅವರ ಪುತ್ರ ಹಸನ್ ಈಸಾಖಿಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
Read Full Story
05:21 PM (IST) Aug 17

India Latest News Live 17 August 2026ಸಚಿನ್ ತೆಂಡೂಲ್ಕರ್-ವಿನೋದ್ ಕಾಂಬ್ಳಿ ದೂರಾಗಿದ್ದೇಕೆ? ಆ ಕಹಿ ಸತ್ಯ ಕೊನೆಗೂ ವೆಬ್ ಸರಣಿಯಲ್ಲಿ ರಿವೀಲ್!

ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನವನ್ನು ಆಧರಿಸಿದ 'ಕಾಂಬ್ಳಿ' ವೆಬ್ ಸರಣಿ 'ಝೀ-5'ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅಭಿಜಿತ್ ದೇಶಪಾಂಡೆ ನಿರ್ದೇಶನದ ಈ ಸರಣಿಯು, ಕಾಂಬ್ಳಿಯ ಕ್ರಿಕೆಟ್ ಜರ್ನಿ, ಆರಂಭಿಕ ಯಶಸ್ಸು ಹಾಗೂ ಸಚಿನ್ ತೆಂಡೂಲ್ಕರ್ ಜೊತೆಗಿನ ಸ್ನೇಹದ ಏರಿಳಿತಗಳನ್ನು ಕಟ್ಟಿಕೊಡುವ ನಿರೀಕ್ಷೆಯಿದೆ.
Read Full Story
05:16 PM (IST) Aug 17

India Latest News Live 17 August 2026ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರಿ ವಿಧ್ವಂಸಕ ಕೃತ್ಯ ಸಂಚು ವಿಫಲ - 200ಕ್ಕೂ ಹೆಚ್ಚು ಉಗ್ರರ ಬಂಧನ!

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದಲ್ಲಿ ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ 'ಶಹಜಾದ್ ಭಟ್ಟಿ' ಭಯೋತ್ಪಾದಕ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.

Read Full Story
05:08 PM (IST) Aug 17

India Latest News Live 17 August 2026‘KGF’, ‘ಧುರಂಧರ್‌’ ಅಂತಹ ಬ್ಲಾಕ್‌ಬಸ್ಟರ್‌ ಕೊಟ್ಟರೂ ಈ ಇಬ್ಬರು ನಟಿಯರ ಕರಿಯರ್‌ ಯಾಕೆ ಬದಲಾಗಲಿಲ್ಲ?

‘ಕೆಜಿಎಫ್‌’, ‘ಧುರಂಧರ್‌’ ಅಂತಹ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್‌ ಅವರ ಕರಿಯರ್‌ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದಿರುವುದಕ್ಕೆ ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ.

Read Full Story
04:30 PM (IST) Aug 17

India Latest News Live 17 August 2026ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಶುಭ್‌ಮನ್ ಗಿಲ್! ವಿಡಿಯೋ ವೈರಲ್

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ, ನಾಯಕ ಶುಭಮನ್ ಗಿಲ್ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದು ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದರು. ಆರಂಭಿಕ ಕುಸಿತದ ನಂತರ ದಿನುಷ ಮತ್ತು ಡಿಕ್ವೆಲ್ಲಾ ಅವರ ಜೊತೆಯಾಟದಿಂದ ಚೇತರಿಸಿಕೊಂಡ ಲಂಕಾ, ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ 210 ರನ್‌ಗಳ ಹಿನ್ನಡೆಯಲ್ಲಿದೆ.
Read Full Story
04:19 PM (IST) Aug 17

India Latest News Live 17 August 2026ಅಡಿಕೆ ಕೃಷಿಕರಿಗೆ ಗುಡ್‌ನ್ಯೂಸ್‌ ನೀಡಿದ DRI, 2500 ಕೋಟಿ ರೂಪಾಯಿ ಅಕ್ರಮ ಬಯಲು!

ಆಗ್ನೇಯ ಏಷ್ಯಾದಿಂದ ಅಡಿಕೆ ಆಮದು ಮಾಡಿಕೊಂಡು, 'ಸಾಫ್ಟಾ' ಒಪ್ಪಂದವನ್ನು ದುರ್ಬಳಕೆ ಮಾಡಿ ಭಾರತ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂ. ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ.

Read Full Story