Asianet Suvarna News Asianet Suvarna News

ಕಾಂಗ್ರೆಸ್ ಹೈಕಮಾಂಡ್‌ಗೆ ಅಧಿಕಾರ ಹಂಚಿಕೆ ತಲೆಬಿಸಿ: ಹಠಕ್ಕೆ ಬಿದ್ದ ಸಿದ್ದು.. ಡಿಕೆಶಿ

ಕಾಂಗ್ರೆಸ್ ಹೈಕಮಾಂಡ್‌ಗೆ ಖುಷಿ ಜೊತೆ ಅಧಿಕಾರ ಹಂಚಿಕೆ ತಲೆಬಿಸಿ
ಸಿಎಂ ಪಟ್ಟಕ್ಕಾಗಿ ನಾನಾ..? ನೀನಾ..? ಹಠಕ್ಕೆ ಬಿದ್ದ ಸಿದ್ದು.. ಡಿಕೆಶಿ
ಮುಂದಿನ ಸಿಎಂ ಯಾರು..? ಏನಿರಲಿದೆ ಹೈಕಮಾಂಡ್ ತೀರ್ಮಾನ ? 

ಬರೋಬ್ಬರಿ 135 ಸೀಟುಗಳನ್ನು ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಅಧಿಕಾರದ ಗದ್ದುಗೆ ತಲೆಬಿಸಿ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಗೆಲುವು ಸಹಜವಾಗಿ ಖುಷಿಯನ್ನೇ ಕೊಟ್ಟಿದೆ. ಆದ್ರೆ ಅಷ್ಟೇ ತಲೆನೋವನ್ನು ಅಧಿಕಾರ ಹಂಚಿಕೆಯಲ್ಲಿ ಆಗುತ್ತಿದೆ. ಅದ್ರಲ್ಲೂ ಈ ಬಾರಿ ಕಾಂಗ್ರೆಸ್ ಗೆಲುವಿನ ಸಾಕ್ಷಿಗಳನ್ನು ಮುಂದಿಟ್ಟು, ತಮ್ಮ ಸಮುದಾಯದ ನಾಯಕರುಗಳಿಗೆ ಸಿಎಂ ಮಾಡಿ, ಡಿಸಿಎಂ ಮಾಡಿ, ಮಂತ್ರಿಗಳನ್ನಾದ್ರು ಮಾಡಬೇಕೆಂದು ಆಯಾ ಧಾರ್ಮಿಕ ಗುರುಗಳು ಹೋರಾಟಕ್ಕೆ ಇಳಿದಿದ್ದಾರೆ. ಈ ಧರ್ಮ ಗುರುಗಳ ಹೋರಾಟ ಕಾಂಗ್ರೆಸ್ ಹೈಕಮಾಂಡ್‌ಗೆ ಇನ್ನಿಲ್ಲದ ತಲೆನೋವು ತಂದಿಟ್ಟಿದೆ. ರಾಜ್ಯದಲ್ಲಿ ಇರುವ ಪ್ರಮುಖ ಒಕ್ಕಲಿಗ ಮುಖಂಡರುಗಳೆಲ್ಲ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ಪಕ್ಷಕ್ಕೆ ಡಿಕೆ ಶಿವಕುಮಾರ್ ಇನ್ನಿಲ್ಲ ಶ್ರಮ ಪಟ್ಟಿದ್ದಾರೆ. ಮುಳುಗುತ್ತಿದ್ದ ಹಡಗನ್ನು ಮತ್ತೆ ವೇಗದಲ್ಲಿ ಓಡುವಂತೆ ಮಾಡಿದ್ದಾರೆ. ಹೀಗಾಗಿ ಅವರ ಶ್ರಮಕ್ಕೆ ಫಲವಾಗಿ ಸಿಎಂ ಸ್ಥಾನ ಕೊಡಲೇಬೇಕು ಅನ್ನೋದು ರಾಜ್ಯ ಒಕ್ಕಲಿಗ ಮತ್ತು ಒಕ್ಕಲಿಗ ಗುರುಗಳ ಆಕಾಂಕ್ಷೆಯಾಗಿದೆ. 

ಇದನ್ನೂ ವೀಕ್ಷಿಸಿ: ಹೈಕಮಾಂಡ್‌ ಸಿಎಂ ಆಗು ಅಂದ್ರೆ ನಾನು ಸಿದ್ಧನಿದ್ದೇನೆ: ಡಾ.ಜಿ. ಪರಮೇಶ್ವರ್‌