ರಾಜ್ಯ ಬಿಜೆಪಿಗೆ ಯಾರಾಗ್ತಾರೆ ನೂತನ ಸಾರಥಿ..?: ಅಭಿಪ್ರಾಯ ಸಂಗ್ರಹಿಸಿದ ಬಿ.ಎಲ್‌. ಸಂತೋಷ್‌

ರಾಜ್ಯದಲ್ಲಿ ಇನ್ನೂ ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆಯನ್ನು ಮಾಡಿಲ್ಲ. ಈ ವಿಷಯಕ್ಕೆ ಇದೀಗ ಬಿ.ಎಲ್‌. ಸಂತೋಷ್‌ ಎಂಟ್ರಿಕೊಟ್ಟಿದ್ದಾರೆ.
 

First Published Jul 24, 2023, 11:19 AM IST | Last Updated Jul 24, 2023, 11:19 AM IST

ವಿಧಾನಸಭಾ ಕಲಾಪ ಮುಗಿದರೂ ಇನ್ನೂ ಬಿಜೆಪಿಯಲ್ಲಿ(BJP) ಪ್ರತಿಪಕ್ಷ ನಾಯಕನ(Opposition leader) ಆಯ್ಕೆ ಮಾತ್ರ ಆಗಿಲ್ಲ. ಹಾಗಾಗಿ ಇದೀಗ ಈ ವಿಚಾರವಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಯಾರಾಗ್ತಾರೆ ಪ್ರತಿಪಕ್ಷ ನಾಯಕ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌(BL Santhosh) ಇದೀಗ ಈ ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳ ಹಿಂದೆ ಈ ವಿಚಾರವಾಗಿ ಅವರು ಚರ್ಚೆಯನ್ನು ಸಹ ನಡೆಸಿದ್ದಾರೆ. ಈ ವೇಳೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿವಿಧ ಸಂಘಟನಾ ವಿಭಾಗದ ಪ್ರಮುಖರ ಜೊತೆಗೂ ಚರ್ಚೆ ನಡೆಸಿದ್ದು, ರಾಜ್ಯದಲ್ಲಿನ ಆಗು ಹೋಗುಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಳೆ ಹುಡುಗ ಗಣಿ : ಹಿಂದೆಂದೂ ನೋಡಿರದ ಕಥೆಯಲ್ಲಿ ಕಮ್ ಬ್ಯಾಕ್..!