07:31 AM (IST) Sep 06

India News Live 6th September: ಪಾಕ್‌ಗೆ ಶಾಕ್‌ - ಸಿಂಧು ನದಿಗೆ ಭಾರತ ಡ್ಯಾಂ, ನದಿ ಒಪ್ಪಂದ ಸ್ಥಗಿತ ಬಳಿಕ ಮೊದಲ ಅಣೆಕಟ್ಟು

ಲಡಾಖ್‌ನ ಗಡಿ ಭಾಗದಲ್ಲಿ, ಸಿಂಧೂ ನದಿಗೆ ಅಡ್ಡಲಾಗಿ ಭಾರತವು ತನ್ನ ಮೊದಲ ನೈಸರ್ಗಿಕ 'ರಾಕ್ ಚೆಕ್ ಡ್ಯಾಂ' ಅನ್ನು ನಿರ್ಮಿಸಿದೆ. ಸಿಮೆಂಟ್ ಬಳಸದೆ, ಕೇವಲ ಬಂಡೆಗಲ್ಲುಗಳಿಂದ ನಿರ್ಮಿಸಲಾದ ಈ ಅಣೆಕಟ್ಟು, ಸ್ಥಳೀಯ ರೈತರ ನೀರಿನ ಸಮಸ್ಯೆ ನೀಗಿಸಿ, ಒಣ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ.
Read Full Story
07:08 AM (IST) Sep 06

India News Live 6th September: ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕ್ಷೇತ್ರಕ್ಕೆ ತೆರೆದ ಕೇಂದ್ರ ಸರ್ಕಾರ - ಇಸ್ರೋದ 9 ಸಂಘಟನೆ ಪ್ರಶ್ನೆ

ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಸರ್ಕಾರದ ನಿರ್ಧಾರಕ್ಕೆ ಇಸ್ರೋದ ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇಸ್ರೋ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾರ್ವಜನಿಕ ವಲಯದ ಪಾತ್ರದ ಬಗ್ಗೆ ಲಿಖಿತ ಸ್ಪಷ್ಟೀಕರಣವನ್ನು ಕೋರಿವೆ.

Read Full Story
06:58 AM (IST) Sep 06

India News Live 6th September: ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ

2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್‌ನ ಮಾನ್ಯತೆ ಇಲ್ಲದ 6 ರಾಜಕೀಯ ಪಕ್ಷಗಳು ಒಟ್ಟು 1700 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸದ ಈ ಪಕ್ಷಗಳು, 5 ರಾಷ್ಟ್ರೀಯ ಪಕ್ಷಗಳ ಒಟ್ಟು ದೇಣಿಗೆಗಿಂತ ಹೆಚ್ಚು ಹಣ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.

Read Full Story