- Home
- News
- India News
- Nationl News Live: ಪಾಕ್ಗೆ ಶಾಕ್ - ಸಿಂಧು ನದಿಗೆ ಭಾರತ ಡ್ಯಾಂ, ನದಿ ಒಪ್ಪಂದ ಸ್ಥಗಿತ ಬಳಿಕ ಮೊದಲ ಅಣೆಕಟ್ಟು
Nationl News Live: ಪಾಕ್ಗೆ ಶಾಕ್ - ಸಿಂಧು ನದಿಗೆ ಭಾರತ ಡ್ಯಾಂ, ನದಿ ಒಪ್ಪಂದ ಸ್ಥಗಿತ ಬಳಿಕ ಮೊದಲ ಅಣೆಕಟ್ಟು

ನವದೆಹಲಿ (ಸೆ.6): ಚುನಾವಣಾ ದೇಣಿಗೆ ಕುರಿತ ಆಕ್ಷೇಪಗಳ ನಡುವೆಯೇ, 2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್ನ ಮಾನ್ಯತೆ ಹೊಂದಿರದ 6 ಪಕ್ಷಗಳಿಗೆ ಭರ್ಜರಿ 1700 ಕೋಟಿ ರು. ದೇಣಿಗೆ ಸಂದಾಯ ಆಗಿತ್ತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ. ಅಭ್ಯರ್ಥಿಗಳನ್ನು ಬೆರಳೆಣಿಕೆಯಷ್ಟು ಮಾತ್ರ ಕಣಕ್ಕಿಳಿಸಿದ ಈ ಪಕ್ಷಗಳು, ಬಿಜೆಪಿ ಹೊರತುಪಡಿಸಿ 5 ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ದೇಣಿಗೆಗಿಂತ 200 ಕೋಟಿ ರು. ಹೆಚ್ಚಿಗೆ ದೇಣಿಗೆ ಪಡೆದಿರುವುದು, ಪಕ್ಷದ ಹೆಸರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಗೆ ಎಡೆಮಾಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್.
India News Live 6th September: ಪಾಕ್ಗೆ ಶಾಕ್ - ಸಿಂಧು ನದಿಗೆ ಭಾರತ ಡ್ಯಾಂ, ನದಿ ಒಪ್ಪಂದ ಸ್ಥಗಿತ ಬಳಿಕ ಮೊದಲ ಅಣೆಕಟ್ಟು
India News Live 6th September: ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕ್ಷೇತ್ರಕ್ಕೆ ತೆರೆದ ಕೇಂದ್ರ ಸರ್ಕಾರ - ಇಸ್ರೋದ 9 ಸಂಘಟನೆ ಪ್ರಶ್ನೆ
ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಸರ್ಕಾರದ ನಿರ್ಧಾರಕ್ಕೆ ಇಸ್ರೋದ ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇಸ್ರೋ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾರ್ವಜನಿಕ ವಲಯದ ಪಾತ್ರದ ಬಗ್ಗೆ ಲಿಖಿತ ಸ್ಪಷ್ಟೀಕರಣವನ್ನು ಕೋರಿವೆ.
India News Live 6th September: ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ
2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್ನ ಮಾನ್ಯತೆ ಇಲ್ಲದ 6 ರಾಜಕೀಯ ಪಕ್ಷಗಳು ಒಟ್ಟು 1700 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸದ ಈ ಪಕ್ಷಗಳು, 5 ರಾಷ್ಟ್ರೀಯ ಪಕ್ಷಗಳ ಒಟ್ಟು ದೇಣಿಗೆಗಿಂತ ಹೆಚ್ಚು ಹಣ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.