- Home
- News
- India News
- National News Live: Hanuman Ansh - 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!
National News Live: Hanuman Ansh - 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!

ನವದೆಹಲಿ (ಆ.29): ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಹಿಮಾಲ ಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದ್ದು ಮತ್ತಷ್ಟು ಶವಗಳು ಪತ್ತೆಯಾಗಿವೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 580ಕ್ಕೆ ಏರಿಕೆಯಾಗಿದೆ. ಸುಮಾರು 1 ಸಾವಿರ ಮಂದಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 29th August: Hanuman Ansh - 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!
India News Live 29th August: ನೇಪಾಳ ಜಲಪ್ರಳಯ, ಇನ್ಫೋಸಿಸ್ ಅಧಿಕಾರಿ ಲಕ್ಷ್ ಗೋಪಿಸೆಟ್ಟಿ ನಾಪತ್ತೆ
ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ತೆರಳಿದ್ದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ದೃಢಪಡಿಸಿದ್ದು, ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.
India News Live 29th August: ನೇಪಾಳ ಪ್ರವಾಹದ ನೀರಲ್ಲಿ ತೇಲಿ ಬಂದ ಶವದ ಒಡವೆ ಕಳವು ಮಾಡಿದ್ರು!
India News Live 29th August: ಟಿಬೆಟ್ನಲ್ಲಿ ಒಡೆದ ಅಣೆಕಟ್ಟು - ಪುನಃ ನೇಪಾಳಕ್ಕೆ ಪ್ರವಾಹ ಭೀತಿ
ಟಿಬೆಟ್ ಬದಿಯ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿಯಿಂದ ನೇಪಾಳದಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದೆ.