09:25 AM (IST) Aug 29

India News Live 29th August: Hanuman Ansh - 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!

ಯಾವುದೇ ಹೈಪ್ ಇಲ್ಲದೆ ಬಿಡುಗಡೆಯಾದ, ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ 'ಹನುಮಾನ್ ಅಂಶ್' ಎಂಬ ಆಧ್ಯಾತ್ಮಿಕ ಸಿನಿಮಾವು ಪ್ರೇಕ್ಷಕರ ಮೌತ್ ಟಾಕ್‌ನಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಯಶಸ್ಸು ಸಾಧಿಸಿದೆ. ಕಡಿಮೆ ಸ್ಕ್ರೀನ್‌ಗಳಲ್ಲಿ ಆರಂಭವಾದ ಈ ಚಿತ್ರ ಇದೀಗ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
Read Full Story
08:38 AM (IST) Aug 29

India News Live 29th August: ನೇಪಾಳ ಜಲಪ್ರಳಯ, ಇನ್ಫೋಸಿಸ್ ಅಧಿಕಾರಿ ಲಕ್ಷ್ ಗೋಪಿಸೆಟ್ಟಿ ನಾಪತ್ತೆ

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ತೆರಳಿದ್ದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ದೃಢಪಡಿಸಿದ್ದು, ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.

Read Full Story
08:17 AM (IST) Aug 29

India News Live 29th August: ನೇಪಾಳ ಪ್ರವಾಹದ ನೀರಲ್ಲಿ ತೇಲಿ ಬಂದ ಶವದ ಒಡವೆ ಕಳವು ಮಾಡಿದ್ರು!

ನೇಪಾಳ ಪ್ರವಾಹದ ವೇಳೆ ನದಿಯಲ್ಲಿ ಕೊಚ್ಚಿ ಬಂದ ಮಹಿಳೆಯ ಶವದಿಂದ ಆಭರಣ ಕದ್ದ ಇಬ್ಬರನ್ನು ಬಂಧಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ಶವಾಗಾರಗಳು ಭರ್ತಿಯಾಗಿವೆ. ಪ್ರವಾಹದ ರಭಸಕ್ಕೆ ನೇಪಾಳದಿಂದ ಸುಮಾರು 7 ಶವಗಳು ಭಾರತದ ನದಿಗಳಲ್ಲಿ ತೇಲಿ ಬಂದಿವೆ.
Read Full Story
07:53 AM (IST) Aug 29

India News Live 29th August: ಟಿಬೆಟ್‌ನಲ್ಲಿ ಒಡೆದ ಅಣೆಕಟ್ಟು - ಪುನಃ ನೇಪಾಳಕ್ಕೆ ಪ್ರವಾಹ ಭೀತಿ

ಟಿಬೆಟ್ ಬದಿಯ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿಯಿಂದ ನೇಪಾಳದಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದೆ.

Read Full Story
07:37 AM (IST) Aug 29

India News Live 29th August: ನೇಪಾಳ ನೆರೆಗೆ 580 ಸಾವು - 320 ಭಾರತೀಯರು ನಾಪತ್ತೆ, 1000 ಜನರಿಗಾಗಿ ಹುಡುಕಾಟ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಮೃತರ ಸಂಖ್ಯೆ 580ಕ್ಕೆ ಏರಿದೆ. 320 ಭಾರತೀಯರು ಸೇರಿದಂತೆ ಸುಮಾರು 1 ಸಾವಿರ ಮಂದಿ ನಾಪತ್ತೆಯಾಗಿದ್ದು, ನದಿಗಳಲ್ಲಿ ತಾತ್ಕಾಲಿಕ ಕೆರೆಗಳು ಸೃಷ್ಟಿಯಾಗಿರುವುದರಿಂದ ಎರಡನೇ ಪ್ರವಾಹದ ಅಲೆಯ ಎಚ್ಚರಿಕೆ ನೀಡಲಾಗಿದೆ.
Read Full Story