11:08 PM (IST) Jul 06

India Latest News Live 6 July 2026ರಜನಿಕಾಂತ್-ಚಿರಂಜೀವಿ ಮಧ್ಯೆ 'ನಾನಾ ನೀನಾ' ಮಹಾ ಫೈಟ್.. ದಸರಾ ವೇಳೆ 'ಬೆಳ್ಳಿತೆರೆ ಕಾಳಗ'ಕ್ಕೆ ಸಿದ್ಧತೆ!

ನಟ ಚಿರಂಜೀವಿ ಹಾಗು ರಜಿನಿಕಾಂತ್ ಈ ಇಬ್ಬರ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ಕ್ಲಾಶ್ ಆಗಿರೋ ಉದಾಹರಣೆಯೇ ಇಲ್ಲ. ಆದ್ರೆ ಈ ಭಾರಿ ಅಂತದ್ದೊಂದು ಕದನ ಕಣ ಏರ್ಪಡುತ್ತಿದೆ. ಚಿರಂಜೀವಿಯ ವಿಶ್ವಂಭರ ಹಾಗು ರಜನಿಕಾಂತ್​ರ ಜೈಲರ್​-2 ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ.

Read Full Story
10:44 PM (IST) Jul 06

India Latest News Live 6 July 2026'ಥ್ಯಾಂಕ್ಯೂ ಟೈಗರ್.. ನೀವು ಕೊಟ್ಟ ಗರ್ಜನೆಗೆ ಧನ್ಯವಾದಗಳು' - ಅಖಿಲ್ ಭಾವುಕ ಪೋಸ್ಟ್

ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಜೂ.ಎನ್‌ಟಿಆರ್ ಮತ್ತು ಅಖಿಲ್ ಒಟ್ಟಿಗೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.

Read Full Story
09:28 PM (IST) Jul 06

India Latest News Live 6 July 2026Saumya Tandon - ಸ್ಕರ್ಟ್-ಟಾಪ್‌ನಲ್ಲಿ ರೆಹಮಾನ್ ಡಕಾಯಿತ್ ಪತ್ನಿ - ಫೋಟೋಸ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

'ಧುರಂಧರ್' ಮತ್ತು 'ಭಾಭಿ ಜಿ ಘರ್ ಪರ್ ಹೈ' ಧಾರಾವಾಹಿಯಲ್ಲಿನ ಪಾತ್ರಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿರುವ ನಟಿ ಸೌಮ್ಯ ಟಂಡನ್, ಇತ್ತೀಚೆಗೆ ಸ್ಕರ್ಟ್-ಟಾಪ್‌ನಲ್ಲಿ ತಮ್ಮ ಯಂಗ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read Full Story
08:38 PM (IST) Jul 06

India Latest News Live 6 July 2026ಎಂ.ಎಸ್​.ಧೋನಿ ಹುಟ್ಟುಹಬ್ಬ ನಾಳೆ - ಎಂದಿಗೂ ಮುರಿಯಲಾಗದ IPL ದಾಖಲೆಗಳ ಸರದಾರ- ಲಿಸ್ಟ್​ ಇಲ್ಲಿದೆ

ಜುಲೈ 7 ರಂದು ಎಂ.ಎಸ್ ಧೋನಿ ಅವರ ಹುಟ್ಟುಹಬ್ಬದ ಸಂಭ್ರಮ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮತ್ತು ವಿಕೆಟ್ ಕೀಪರ್ ಆಗಿ ಅವರು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಯಸ್ಸಿನ ಕಾರಣದಿಂದ ಮುಂಬರುವ ಐಪಿಎಲ್ 2024 ಅವರ ಕೊನೆಯ ಸೀಸನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

Read Full Story
08:22 PM (IST) Jul 06

India Latest News Live 6 July 2026ಮದ್ಯ ಸೇವಿಸಿ ಕಾರು ಚಾಲನೆ - 17 ಕಿ.ಮೀ ಅಟ್ಟಿಸಿಕೊಂಡು ಖ್ಯಾತ ಯುಟ್ಯೂಬರ್​ ಧನ್ಯಾಳ ಹಿಡಿದ ಪೊಲೀಸರು

'ಸ್ಪಾರ್ಟಾದ ಹೆಲೆನ್' ಖ್ಯಾತಿಯ ಯುಟ್ಯೂಬರ್ ಧನ್ಯಾ ಎಸ್‌.ಆರ್ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಕಾಸರಗೋಡಿನಲ್ಲಿ ಪೊಲೀಸರ ವಶವಾಗಿದ್ದಾರೆ. 17 ಕಿಲೋಮೀಟರ್‌ಗಳ ಚೇಸ್ ನಂತರ ಅವರನ್ನು ತಡೆದಾಗ, ಅವರ ಆಲ್ಕೋಹಾಲ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿತ್ತು.

Read Full Story
07:46 PM (IST) Jul 06

India Latest News Live 6 July 2026ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ ಆದಿತ್ಯ ಧರ್ ಭಾವುಕ ಪತ್ರ - 'ಧುರಂಧರ್' ನಟನೆಯನ್ನು ಆಕಾಶಕ್ಕೇರಿಸಿದ ನಿರ್ದೇಶಕ

Ranveer Singh Performance: ನಟ ರಣವೀರ್ ಸಿಂಗ್ ಅವರ ಹುಟ್ಟುಹಬ್ಬದ ದಿನ, 'ಧುರಂಧರ್' ಚಿತ್ರದ ನಿರ್ದೇಶಕ ಆದಿತ್ಯ ಧರ್ ಒಂದು ಭಾವುಕ ಸೋಶಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ.

Read Full Story
06:41 PM (IST) Jul 06

India Latest News Live 6 July 2026ಪೆಹಲ್ಗಾಂ ಸಂತ್ರಸ್ತನ ಪುತ್ರಿ ಹಾಕಿದ ವಿಡಿಯೋಗೆ ಕೆಟ್ಟ ಕಮೆಂಟ್, UAPA ಅಡಿಯಲ್ಲಿ ಯುವಕನ ಬಂಧನ

ಪೆಹಲ್ಗಾಂ ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಯೊಬ್ಬರ ಪುತ್ರಿ ಇತ್ತೀಚೆಗೆ ದುರಂತ ನೆನೆದು ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋಗೆ ಉಗ್ರರ ದಾಳಿ ಸಮರ್ಥಿಸಿ ಕಮೆಂಟ್ ಮಾಡಿದ್ದ ಯುವಕನನ್ನು ಪೊಲೀಸ್ ಬಂಧಿಸಿದ್ದಾರೆ.

Read Full Story
06:15 PM (IST) Jul 06

India Latest News Live 6 July 2026ಇಂಗ್ಲೆಂಡ್ ಎದುರು ಈ ಆಟಗಾರನನ್ನು ಕೈಬಿಟ್ಟಿದ್ದು 'ಹಿಮಾಲಯನ್ ಬ್ಲಂಡರ್'..! ಕೋಚ್ ಗೌತಮ್ ಗಂಭೀರ್ ವಿರುದ್ಧ ಕೈಫ್ ಕಿಡಿ!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು, ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಆರಂಭಿಕರಾಗಿ ಕಳುಹಿಸಿದ ಕೋಚ್ ಗೌತಮ್ ಗಂಭೀರ್ ಅವರ ತಂತ್ರವನ್ನು ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು 'ಹಿಮಾಲಯದಷ್ಟು ದೊಡ್ಡ ಪ್ರಮಾದ' ಎಂದಿರುವ ಅವರು, ಬಲಗೈ-ಎಡಗೈ ಆರಂಭಿಕ ಜೋಡಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.

Read Full Story
06:10 PM (IST) Jul 06

India Latest News Live 6 July 2026ಜೈಲು ಶಿಕ್ಷೆಯಿಂದ ಬಚಾವ್‌ ಆಗುವ ಹಾದಿಯಲ್ಲಿ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌!

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು, ಅರಣ್ಯ ಇಲಾಖೆಯ 'ಕ್ಷಮಾದಾನ ಯೋಜನೆ' ಅಡಿಯಲ್ಲಿ ತಮ್ಮ ಬಳಿ 10 ಆನೆ ದಂತಗಳು ಮತ್ತು ದಂತದಿಂದ ಮಾಡಿದ 13 ವಿಗ್ರಹಗಳಿವೆ ಎಂದು ಸ್ವಯಂಪ್ರೇರಿತರಾಗಿ ಘೋಷಿಸಿಕೊಂಡಿದ್ದಾರೆ. 

Read Full Story
06:00 PM (IST) Jul 06

India Latest News Live 6 July 2026Train Timing - ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್ - ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!

Indian Railways Update: ರೈಲ್ವೆ ಇಲಾಖೆಯು ವಿವಿಧ ತಾಂತ್ರಿಕ / ನಿರ್ವಹಣಾ ಕಾರಣಗಳಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಜುಲೈ 5, ಜುಲೈ 6, 2026 ರಂದು ಪ್ರಾರಂಭವಾಗುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.

Read Full Story
05:58 PM (IST) Jul 06

India Latest News Live 6 July 2026ರಾಮ ಮಂದಿರದಲ್ಲಿ ಕಳ್ಳತನ ಘಟನೆ - ಭಾಗಿಯಾದವರ ಬಗ್ಗೆ ಶಾಕಿಂಗ್​ ಮಾಹಿತಿ ಬಾಯ್ದಿಟ್ಟ ಆರೋಪಿ

ಅಯೋಧ್ಯೆಯ ರಾಮಮಂದಿರ ದರೋಡೆ ಪ್ರಕರಣದಲ್ಲಿ, 15 ಸಾವಿರ ಸಂಬಳ ಪಡೆಯುತ್ತಿದ್ದ ಅವಿನಾಶ್ ಶುಕ್ಲಾ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಈತ, ಗ್ಯಾಂಗ್‌ನ ರಹಸ್ಯ ಸಭೆಗಳು ಮತ್ತು ಹಣದ ಬಳಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಪೊಲೀಸರು ಸಂಪೂರ್ಣ ಜಾಲವನ್ನು ಭೇದಿಸುತ್ತಿದ್ದಾರೆ.
Read Full Story
05:28 PM (IST) Jul 06

India Latest News Live 6 July 2026ಆಸ್ಟ್ರೇಲಿಯಾ ಬಳಿಯಿದೆ 24 ICC ಟ್ರೋಫಿ, ಟೀಂ ಇಂಡಿಯಾ ಎಷ್ಟು ಟ್ರೋಫಿ ಗೆದ್ದಿದೆ? ಅತಿಹೆಚ್ಚು ಐಸಿಸಿ ಟ್ರೋಫಿ ಗೆದ್ದ ಟಾಪ್-5 ದೇಶಗಳಿವು

ಬೆಂಗಳೂರು: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಆಸೀಸ್‌ ಐಸಿಸಿ ಟೂರ್ನಿಯಲ್ಲಿ 24ನೇ ಟ್ರೋಫಿ. ಇನ್ನು ಭಾರತ ಎಷ್ಟು ಐಸಿಸಿ ಟ್ರೋಫಿ ಗೆದ್ದಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story
05:28 PM (IST) Jul 06

India Latest News Live 6 July 2026ಪ್ರೀತಿಗೆ ತಿರುಗಿದ ಸಹೋದರಿಯರ ಸ್ನೇಹ - 8 ಲಕ್ಷ ಸಾಲ ಮಾಡಿ ಲಿಂಗ ಬದಲಿಸಿ ಮದುವೆ

ಬಿಹಾರದ ಜಮುಯಿ ಜಿಲ್ಲೆಯಲ್ಲಿ, ಶಿಕ್ಷಕಿ ನಯನಶ್ರೀ ಮತ್ತು ಆಕೆಯ ಸೋದರಸಂಬಂಧಿ ರಾಖಿ ಪ್ರೀತಿಸುತ್ತಿದ್ದರು. ಸಮಾಜವನ್ನು ಎದುರಿಸಲು, ರಾಖಿ 8 ಲಕ್ಷ ರೂ. ಖರ್ಚು ಮಾಡಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ರಾಹುಲ್ ಆದರು. ನಂತರ, ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
Read Full Story
04:42 PM (IST) Jul 06

India Latest News Live 6 July 2026ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಮೇಲ್ಮಧ್ಯಮ ಆದಾಯದ ಗಡಿ ದಾಟಿದ ಭಾರತದ 5 ರಾಜ್ಯಗಳು, ಖುಷಿಪಟ್ಟ ಕರ್ನಾಟಕ

ಭಾರತವು 'ಕೆಳ-ಮಧ್ಯಮ ಆದಾಯ'ದ ದೇಶವಾಗಿದ್ದರೂ, ದೆಹಲಿ ಮತ್ತು ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ವಿಶ್ವಬ್ಯಾಂಕ್‌ನ 'ಮೇಲ್ಮಧ್ಯಮ ಆದಾಯ'ದ ಮಟ್ಟವನ್ನು ದಾಟಿವೆ. ಆದರೆ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅತ್ಯಂತ ಹಿಂದುಳಿದಿದ್ದು, ದೇಶದ ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.

Read Full Story
03:59 PM (IST) Jul 06

India Latest News Live 6 July 2026NASA ಜೊತೆ ಕೈಜೋಡಿಸಿದ ಕರ್ನಾಟಕದ ಸ್ಪೇಸ್ ಸ್ಟಾರ್; ಕನ್ನಡ ಮಣ್ಣಿನ ಅಪ್ರತಿಮ ಪ್ರತಿಭೆಯ ಸಾಹಸದ ಕತೆ..!

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.

Read Full Story
03:56 PM (IST) Jul 06

India Latest News Live 6 July 2026ಅಂಡರ್‌ 19 ಕ್ರಿಕೆಟ್‌ ಟೀಮ್‌ ವಾಲ್‌ ಆದ ರಾಹುಲ್ ದ್ರಾವಿಡ್‌ ಪುತ್ರ, 87 ರನ್‌ಗಳ ಕ್ಲಾಸ್‌ ಇನ್ನಿಂಗ್ಸ್‌ ಆಡಿದ ಅನ್ವಯ್‌!

ಟೀಂ ಇಂಡಿಯಾದ 'ದಿ ವಾಲ್' ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ತಂದೆಯ ಹಾದಿಯಲ್ಲೇ ಸಾಗಿದ್ದಾರೆ. ಶ್ರೀಲಂಕಾ ಅಂಡರ್-19 ವಿರುದ್ಧದ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದ ಅನ್ವಯ್, ಭರ್ಜರಿ 87 ರನ್ ಗಳಿಸಿ ತಂಡವನ್ನು ಪಾರುಮಾಡಿದರು. ಇದು ಅವರ ಅಂಡರ್-19 ವೃತ್ತಿಜೀವನದ ಮೊದಲ ಅರ್ಧಶತಕವಾಗಿದೆ.
Read Full Story
03:07 PM (IST) Jul 06

India Latest News Live 6 July 2026ಹೊಸೂರಿನಲ್ಲಿ ಬೃಹತ್ 1.6 ಲಕ್ಷ 'ಏರೋಸ್ಪೇಸ್-ಡಿಫೆನ್ಸ್' ಘಟಕ ನಿರ್ಮಾಣಕ್ಕೆ ಬೆಂಗಳೂರಿನ ಹಿಕಲ್ ಟೆಕ್ನಾಲಜೀಸ್ ಚಾಲನೆ!

ಬೆಂಗಳೂರು ಮೂಲದ 'ಹಿಕಲ್ ಟೆಕ್ನಾಲಜೀಸ್' ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಉಪಕರಣಗಳನ್ನು ಪೂರೈಸಲು ತಮಿಳುನಾಡಿನ ಹೊಸೂರಿನಲ್ಲಿ ಬೃಹತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಈ ಅತ್ಯಾಧುನಿಕ ಘಟಕವು ಜಾಗತಿಕ ಪೂರೈಕಾ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
Read Full Story
02:11 PM (IST) Jul 06

India Latest News Live 6 July 2026ಟಾಟಾ ಸಾಮ್ರಾಜ್ಯದಲ್ಲಿ ದಿಡೀರ್ ಬದಲಾವಣೆ, ವೆಸ್ಟ್‌ಸೈಡ್‌ನ ಗ್ಲೋಬಲ್ ಡಿಜಿಟಲ್ ಬಿಸಿನೆಸ್ ಹೆಡ್ ಆಗಿ ಮಾಯಾ ಎಂಟ್ರಿ!

ಮಾಯಾ ಟಾಟಾ, ಟ್ರೆಂಟ್ ಲಿಮಿಟೆಡ್‌ನ 'ವೆಸ್ಟ್‌ಸೈಡ್' ಬ್ರ್ಯಾಂಡ್‌ನ ಗ್ಲೋಬಲ್ ಡಿಜಿಟಲ್ ಬಿಸಿನೆಸ್ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. ಟಾಟಾ ಡಿಜಿಟಲ್‌ನಲ್ಲಿನ ತಮ್ಮ ಅನುಭವವನ್ನು ಬಳಸಿಕೊಂಡು, ಅವರು ವೆಸ್ಟ್‌ಸೈಡ್‌ನ ಆನ್‌ಲೈನ್ ಮತ್ತು ಅಂತರರಾಷ್ಟ್ರೀಯ ಇ-ಕಾಮರ್ಸ್ ವಿಸ್ತರಣೆಯನ್ನು ಮುನ್ನಡೆಸಲಿದ್ದಾರೆ.

Read Full Story
01:50 PM (IST) Jul 06

India Latest News Live 6 July 2026ಕ್ರಿಕೆಟ್ ಬಿಟ್ಟು ಟ್ರಕ್ ಡ್ರೈವರ್ ಆಗಲು ಹೊರಟಿದ್ದವನು ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಆಗಿ ಬಿಟ್ಟ!

ಅಶಿಸ್ತಿನ ಕಾರಣಕ್ಕೆ ತಂಡದಿಂದ ಹೊರಬಿದ್ದು, ಕುಟುಂಬದ ಜವಾಬ್ದಾರಿಗಾಗಿ ಟ್ರಕ್ ಡ್ರೈವರ್ ಆಗಲು ನಿರ್ಧರಿಸಿದ್ದ ಯುವ ಕ್ರಿಕೆಟಿಗನಿಗೆ ಸೌರವ್ ಗಂಗೂಲಿ ಆಸರೆಯಾದರು. ಆಯ್ಕೆ ಸಮಿತಿಯ ವಿರೋಧದ ನಡುವೆಯೂ ತಂಡಕ್ಕೆ ಆಯ್ಕೆಯಾದ ಆ ಆಫ್ ಸ್ಪಿನ್ನರ್, 2001ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹ್ಯಾಟ್ರಿಕ್ ಸಹಿತ 32 ವಿಕೆಟ್ ಪಡೆದು ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.
Read Full Story
01:36 PM (IST) Jul 06

India Latest News Live 6 July 202615 ರೂ. ಆರ್ಡರ್​- 500 ರೂ. ಟಿಪ್ಸ್​ - ಡೆಲಿವರಿ ಬಾಯ್ ಭಾವನಾತ್ಮಕ​ ವಿಡಿಯೋಗೆ ಕೋಟಿಗೂ ಅಧಿಕ ವ್ಯೂವ್ಸ್​

ಕುರುಕ್ಷೇತ್ರದಲ್ಲಿ ಬ್ಲಿಂಕಿಟ್ ಡೆಲಿವರಿ ಯುವಕನೊಬ್ಬ ₹15ರ ವಸ್ತುವಿಗೆ ₹500 ಟಿಪ್ಸ್ ಪಡೆದಿದ್ದಾನೆ. ಈ ಅನಿರೀಕ್ಷಿತ ಉದಾರತೆಗೆ ಕೃತಜ್ಞತೆ ಸಲ್ಲಿಸಿ ಆತ ಹಂಚಿಕೊಂಡ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಹೃದಯ ಗೆದ್ದಿದೆ.
Read Full Story