- Home
- News
- India News
- India Latest News Live: West Bengal - 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು
LIVE NOW
India Latest News Live: West Bengal - 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು

ಸಾರಾಂಶ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಮಂದಿರದಲ್ಲಿ ಪ್ರತಿ ದಿನ 6- 8 ಲಕ್ಷ ರು. ಹಣವನ್ನು ಆರೋಪಿಗಳು ವಂಚಿಸುತ್ತಿದ್ದರು ಎಂಬ ಸಂಶಯ ವ್ಯಕ್ತವಾಗಿದೆ. ಕಾರಣ ಹಗರಣ ತನಿಖೆ ಬರುವ ಮುನ್ನ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಾತೆಗೆ ಅಂದಾಜು ಸರಾಸರಿ 16 ರಿಂದ 18 ಲಕ್ಷ ರು. ಜಮೆಯಾಗುತ್ತಿತ್ತು. ಆದರೆ ಇದೀಗ ಅಕ್ರಮ ಬಯಲಾಗಿ, ಆರೋಪಿಗಳ ಬಂಧನ ಬಳಿಕ ಆ ಪ್ರಮಾಣ 24- 26 ಲಕ್ಷ ರು.ಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ನಿತ್ಯ 6 ರಿಂದ 8 ಲಕ್ಷ ರು. ವಂಚನೆಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ರಜಾ ದಿನಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಾದ ಕಾರಣವೂ ದೇಣಿಗೆ ಹಣ ಏರಿಕೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
05:27 AM (IST) Jul 06
India Latest News Live 6 July 2026West Bengal - 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು
ಪಶ್ಚಿಮ ಬಂಗಾಳ ಸರ್ಕಾರವು ಕಲ್ಯಾಣ ಯೋಜನೆಗಳಿಗೆ ಹೊಸ ಕಠಿಣ ಷರತ್ತುಗಳನ್ನು ವಿಧಿಸಿದೆ. ಎರಡಕ್ಕಿಂತ ಹೆಚ್ಚು ಮದುವೆಯಾದವರು, ಮಕ್ಕಳಿಗೆ ಲಸಿಕೆ ಹಾಕಿಸದವರು ಮತ್ತು ಧಾರ್ಮಿಕ ಶಿಕ್ಷಣಕ್ಕಾಗಿ ಶಾಲೆ ಬಿಟ್ಟವರು ಇನ್ನು ಮುಂದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಅರ್ಹರಿಗೆ ಮಾತ್ರ ಯೋಜನೆಗಳು ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
Read Full Story