- Home
- News
- India News
- India Latest News Live: ಮೇಕೆದಾಟುಗೆ ನ್ಯಾಯಾಧಿಕರಣ - ಸಿಎಂ ವಿಜಯ್ ಸರ್ಕಾರದ ನಿರ್ಣಯಕ್ಕೆ ತಮಿಳುನಾಡಿನಲ್ಲೇ ವಿರೋಧ
LIVE NOW
India Latest News Live: ಮೇಕೆದಾಟುಗೆ ನ್ಯಾಯಾಧಿಕರಣ - ಸಿಎಂ ವಿಜಯ್ ಸರ್ಕಾರದ ನಿರ್ಣಯಕ್ಕೆ ತಮಿಳುನಾಡಿನಲ್ಲೇ ವಿರೋಧ

ಸಾರಾಂಶ
ಇಸ್ಲಾಮಾಬಾದ್: ‘ನಮ್ಮ ನೀರಿನ ಭದ್ರತೆಗೆ ಅಪಾಯ ಎದುರಾದರೆ ಭಾರತದ ವಿರುದ್ಧ ಪಾಕಿಸ್ತಾನವು ಮಿಲಿಟರಿ ಕ್ರಮ (ಯುದ್ಧ) ಕೈಗೊಳ್ಳಬಹುದು’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಎಚ್ಚರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ವರ್ಷ ಪಹಲ್ಗಾಂ ದಾಳಿ ನಂತರ ಭಾರತವು ಪಾಕಿಸ್ತಾನಕ್ಕೆ ಸಿಂಧು ನದಿ ಹರಿವು ನಿಲ್ಲಿಸಿದೆ. ಹೀಗಾಗಿ ಪಾಕ್ನಲ್ಲಿ ಜಲ ಕ್ಷಾಮ ಉಂಟಾಗಿದೆ. ಹೀಗಾಗಿ ಆಸಿಫ್ ಈ ಎಚ್ಚರಿಕೆ ನೀಡಿದ್ದಾರೆ.
ಎಆರ್ವೈ ನ್ಯೂಸ್ಗೆ ಸಂದರ್ಶನ ನೀಡಿದ ಆಸಿಫ್, ‘ನಮ್ಮ ನಮ್ಮ ರಾಷ್ಟ್ರೀಯ ಭದ್ರತೆಯ ಭಾಗವಾಗಿದೆ ಎಂದು ನಾವು ಭಾವಿಸಿದ ತಕ್ಷಣವೇ ನಾವು ಖಂಡಿತವಾಗಿಯೂ ಭಾರತದ ವಿರುದ್ಧ ಯುದ್ಧಕ್ಕೆ ಹೋಗುತ್ತೇವೆ’ ಎಂದು ಘೋಷಿಸಿದರು.
ಕಳೆದ ವರ್ಷ ಭಾರತ ಆಪರೇಷನ್ ಸಿಂದೂರ ನಡೆಸಿದಾಗ ಪಾಕಿಸ್ತಾನವು ಕದನವಿರಾಮಕ್ಕೆ ಗೋಗರೆದು, ಮುಖಭಂಗ ಅನುಭವಿಸಿತ್ತು
07:30 AM (IST) Jun 22
India Latest News Live 22 June 2026ಮೇಕೆದಾಟುಗೆ ನ್ಯಾಯಾಧಿಕರಣ - ಸಿಎಂ ವಿಜಯ್ ಸರ್ಕಾರದ ನಿರ್ಣಯಕ್ಕೆ ತಮಿಳುನಾಡಿನಲ್ಲೇ ವಿರೋಧ
ಮೇಕೆದಾಟು ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಹೊಸ ನ್ಯಾಯಮಂಡಳಿ ರಚಿಸಬೇಕೆಂಬ ತಮಿಳುನಾಡು ಸರ್ಕಾರದ ನಿರ್ಣಯವನ್ನು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ವಿರೋಧಿಸಿದ್ದಾರೆ. ಈ ನಿರ್ಧಾರವು ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲಿದ್ದು, ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆ ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಕಾನೂನು ಹೋರಾಟ ಮತ್ತು ರಾಜಕೀಯ ಒತ್ತಡದ ಮೂಲಕವೇ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
Read Full Story 07:10 AM (IST) Jun 22
India Latest News Live 22 June 2026ನೀಟ್ ವಿದ್ಯಾರ್ಥಿಗಳ ಅನುಕೂಲಕ್ಕೆ ಏರ್ಪೋರ್ಟನಲ್ಲೇ 45 ನಿಮಿಷ ಕಾದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು, ನೀಟ್ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಟ್ರಾಫಿಕ್ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ 45 ನಿಮಿಷಗಳ ಕಾಲ ಕಾದರು. ಪರೀಕ್ಷೆ ಆರಂಭವಾದ ನಂತರವೇ ಅವರು ತಮ್ಮ ನಿವಾಸಕ್ಕೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು.
Read Full Story 06:08 AM (IST) Jun 22
India Latest News Live 22 June 2026ಠಾಕ್ರೆ ಪಾಳಯದಲ್ಲಿ ಕಂಪನ - ಆಪರೇಷನ್ ಸಕ್ಸಸ್, ಪೇಷಂಟ್ ಹೆಲ್ದಿ ಎಂದ CM ಫಡ್ನವೀಸ್
ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಇಬ್ಬರು ಸಂಸದರಾದ ಓಂ ರಾಜೆ ನಿಂಬಾಳ್ಕರ್ ಮತ್ತು ನಾಗೇಶ್ ಪಾಟೀಲ್ ಅಷ್ಟಿಕರ್, ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಅವಾಚ್ಯ ನಿಂದನೆ ಮತ್ತು ಅಭಿವೃದ್ಧಿ ಅನುದಾನದ ಕೊರತೆಯೇ ಪಕ್ಷಾಂತರಕ್ಕೆ ಕಾರಣ ಎಂದು ಅಷ್ಟಿಕರ್ ಸ್ಪಷ್ಟಪಡಿಸಿದ್ದು, ಈ ಬೆಳವಣಿಗೆಯನ್ನು ಫಡ್ನವೀಸ್ 'ಆಪರೇಷನ್ ಸಕ್ಸಸ್' ಎಂದು ಬಣ್ಣಿಸಿದ್ದಾರೆ.
Read Full Story 06:00 AM (IST) Jun 22
India Latest News Live 22 June 2026ಸಂಧಾನದ ಮಧ್ಯೆ ಇರಾನ್ಗೆ ಟ್ರಂಪ್ ಡಬಲ್ ವಾರ್ನಿಂಗ್! ಇಸ್ರೇಲ್ ಪ್ರಧಾನಿಗೆ ಮುಜುಗರ
ಸ್ವಿಜರ್ಲೆಂಡ್ನಲ್ಲಿ ಶಾಂತಿ ಸಂಧಾನ ನಡೆಯುತ್ತಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಎರಡು ಕಠಿಣ ಎಚ್ಚರಿಕೆಗಳನ್ನು ನೀಡಿದ್ದಾರೆ. ಹಿಜ್ಬುಲ್ಲಾವನ್ನು ನಿಯಂತ್ರಿಸದಿದ್ದರೆ ಮತ್ತೆ ದಾಳಿ ಮಾಡುವುದಾಗಿಯೂ, ಒಪ್ಪಂದ ವಿಫಲವಾದರೆ ಹೋರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಾರೆ.
Read Full Story