- Home
- Entertainment
- Cine World
- Pawan Kalyan First Wife: ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಯಾರಿಗೂ ಕಾಣಿಸದಂತೆ ಬದುಕ್ತಿರೋದು ಯಾಕೆ?
Pawan Kalyan First Wife: ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಯಾರಿಗೂ ಕಾಣಿಸದಂತೆ ಬದುಕ್ತಿರೋದು ಯಾಕೆ?
Actor Pawan Kalyan: ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ನಂದಿನಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ನಿರ್ದೇಶಕ ಗೀತಾ ಕೃಷ್ಣ ಈ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಪವನ್ ಕಲ್ಯಾಣ್ಗೆ ಮೂರು ಮದುವೆ ಆಗಿದೆ!
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮೂರು ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅವರು ಮೊದಲು ನಂದಿನಿ ಎಂಬುವವರನ್ನು ವಿವಾಹವಾದರು. ಇದು ಅರೇಂಜ್ ಮ್ಯಾರೇಜ್ ಆಗಿತ್ತು. 1997ರಲ್ಲಿ ಮದುವೆಯಾಗಿ, ಎರಡೇ ವರ್ಷಗಳಲ್ಲಿ ಬೇರೆಯಾದರು. ಆದರೆ, 2008ರಲ್ಲಿ ಇವರಿಗೆ ವಿಚ್ಛೇದನ ಮಂಜೂರಾಯಿತು.
ನಂತರ 2009ರಲ್ಲಿ ಪವನ್, ರೇಣು ದೇಸಾಯಿ ಅವರನ್ನು ಮದುವೆಯಾದರು. ಇವರಿಗೆ ಅಕಿರಾ ನಂದನ್ ಮತ್ತು ಆದ್ಯ ಎಂಬ ಮಕ್ಕಳಿದ್ದಾರೆ. ಮೂರು ವರ್ಷಗಳ ನಂತರ ಇವರಿಬ್ಬರೂ ಬೇರೆಯಾದರು. ಬಳಿಕ ರಷ್ಯಾ ನಟಿ ಅನ್ನಾ ಲೆzhನೆವಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಫಸ್ಟ್ ಪತ್ನಿ ಎಲ್ಲಿ ಹೋದರು?
ರೇಣು ದೇಸಾಯಿ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಪವನ್ ಅವರ ಮೊದಲ ಪತ್ನಿ ನಂದಿನಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ದೊಡ್ಡ ರಹಸ್ಯವಾಗಿತ್ತು. ಇದೀಗ ಖ್ಯಾತ ನಿರ್ದೇಶಕ ಗೀತಾ ಕೃಷ್ಣ ಈ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ. ನಂದಿನಿ, ಗೀತಾ ಕೃಷ್ಣ ಅವರ ಸಂಬಂಧಿಕರ ಮಗಳಂತೆ.
ಪತ್ತಿಪಾಟಿ ಪುಲ್ಲಾ ರಾವ್ ಅವರ ಸಂಬಂಧಿಕರೂ ಹೌದು. ಅವರದ್ದು ದೊಡ್ಡ ಕುಟುಂಬ, ಅವರ ತಾತ ಪತ್ತಿಪಾಟಿ ಗಂಗರಾಜು, ಊರು ಪೋಲವರಂ. ನಂದಿನಿ, ಪತ್ತಿಪಾಟಿ ಪುಲ್ಲಾ ರಾವ್ ಅವರ ಸಹೋದರಿಯ ಮಗಳು ಎಂದು ಗೀತಾ ಕೃಷ್ಣ ಹೇಳಿದ್ದಾರೆ.
ಪವನ್ ಜೊತೆಗಿನ ವಿಚ್ಛೇದನದ ನಂತರ ನಂದಿನಿ ಮತ್ತೆ ಚಿತ್ರರಂಗದವರನ್ನೇ ಮದುವೆಯಾಗಲು ಬಯಸಿದ್ದರಂತೆ. ಆದರೆ ಗೀತಾ ಕೃಷ್ಣ ಬೇಡವೆಂದು ಸಲಹೆ ನೀಡಿದ್ದರಿಂದ ಆ ಯೋಚನೆ ಕೈಬಿಟ್ಟರಂತೆ.
ನಂದಿನಿ ಮತ್ತೆ ಯಾರನ್ನು ಮದುವೆ ಆಗಿದ್ದಾರೆ?
ನಂತರ ನಂದಿನಿ ಒಬ್ಬ ವೈದ್ಯರನ್ನು ಮದುವೆಯಾದರಂತೆ. ಈಗ ಅವರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಲ್ಲಿ ತಾವೇ ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದು, ಚೆನ್ನಾಗಿ ಸೆಟಲ್ ಆಗಿದ್ದಾರೆ. ಮಕ್ಕಳು, ಕುಟುಂಬದ ಜೊತೆ ಖುಷಿಯಾಗಿದ್ದು, ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂದು ಗೀತಾ ಕೃಷ್ಣ ತಿಳಿಸಿದ್ದಾರೆ.
ಎರಡನೇ ಮದುವೆಗಾಗಿ ನಂದಿನಿ ತಮ್ಮ ಹೆಸರನ್ನು 'ಜಾಹ್ನವಿ' ಎಂದು ಬದಲಿಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಪವನ್ ಜೊತೆ ವಿಚ್ಛೇದನವಾದಾಗ, ಪವನ್ ಅವರು ನಂದಿನಿಗೆ ಸುಮಾರು 6.5 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ. ಮೊದಲು ಕೊಡಲು ನಿರಾಕರಿಸಿದರೂ, ನಂತರ ಕೋರ್ಟ್ ಮೂಲಕ ಇಷ್ಟು ದೊಡ್ಡ ಮೊತ್ತವನ್ನು ನೀಡಿದ್ದಾರೆ ಎಂದು ಗೀತಾ ಕೃಷ್ಣ ಬಹಿರಂಗಪಡಿಸಿದ್ದಾರೆ.
ಎರಡನೇ ಪತ್ನಿಗೂ ಜೀವನಾಂಶ ಕೊಟ್ಟರು
ಇದೇ ವೇಳೆ ಗೀತಾ ಕೃಷ್ಣ, ರೇಣು ದೇಸಾಯಿ ಅವರ ಜೀವನಾಂಶದ ಬಗ್ಗೆಯೂ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ರೇಣು ಅವರಿಗೂ ಜೀವನಾಂಶ ನೀಡಿದ್ದಾರಂತೆ. ಸುಮಾರು 10-15 ಕೋಟಿಗೂ ಹೆಚ್ಚು ಹಣ ನೀಡಿದ್ದಾರೆ ಎನ್ನಲಾಗುತ್ತದೆ. ಆದರೆ, ತಾನು ಜೀವನಾಂಶ ಪಡೆದಿಲ್ಲ ಎಂದು ರೇಣು ದೇಸಾಯಿ ಹಲವು ಸಂದರ್ಶನಗಳಲ್ಲಿ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೀತಾ ಕೃಷ್ಣ, ಆದಾಯ ತೆರಿಗೆ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ಅವರು ಹಾಗೆ ಹೇಳಿರಬಹುದು ಎಂದಿದ್ದಾರೆ. ಪವನ್ ಎಲ್ಲವನ್ನೂ ಅಧಿಕೃತವಾಗಿಯೇ ಮಾಡಿದ್ದಾರೆ, ಆದರೂ ಜನ ಅವರನ್ನು ಟೀಕಿಸುತ್ತಾರೆ ಎಂದು ಗೀತಾ ಕೃಷ್ಣ, ಪವನ್ ಪರವಾಗಿ ಮಾತನಾಡಿದ್ದಾರೆ.
ಪವನ್ ಕಲ್ಯಾಣ್ ಮುಂದಿನ ಸಿನಿಮಾ ಯಾವುದು?
ಪವನ್ ಕಲ್ಯಾಣ್ ಕೊನೆಯದಾಗಿ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ನಟಿಸಿದ್ದರು. ಹರೀಶ್ ಶಂಕರ್ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿತ್ತು. ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿ, ದೊಡ್ಡ ಡಿಸಾಸ್ಟರ್ ಆಯಿತು.
ಸದ್ಯಕ್ಕೆ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, 'OG 2' ಸಿನಿಮಾ ಮಾಡಲು ಅವರು ಆಸಕ್ತಿ ತೋರಿಸುತ್ತಿದ್ದಾರೆ. ಈ ಕುರಿತು ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.