Asianet Suvarna News Asianet Suvarna News

ಚಪ್ಪಲಿ ತೋರಿಸಿದ್ದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ, ನನ್ನ ಪತಿ ಬಳಿ ಕ್ಷಮೆ ಕೇಳಲಿ: ಯತೀಶ್ ಪತ್ನಿ ಶ್ವೇತಾ

ಅಥ್ಲೀಟ್‌ ಬಿಂದು ರಾಣಿ ಮೇಲೆ ಹಲ್ಲೆಗೆ ಮುಂದಾಗಿದ್ದ ಶ್ವೇತಾ ಅವರು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
 

ಬೆಂಗಳೂರು: ಪ್ರಖ್ಯಾತ ಟಿವಿ ಶೋ ಎನಿಸಿಕೊಂಡಿರುವ ಟೆಡ್ ಎಕ್ಸ್‌ ಶೋನಲ್ಲಿ ಪಾಲ್ಗೊಳ್ಳಲು ಬಿಂದು ರಾಣಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಕಂಠೀರವ ಸ್ಟೇಡಿಯಂನ ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ, ಏಷ್ಯಾಡ್‌ ಅಥ್ಲೀಟ್‌ ಬಿಂದು ರಾಣಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯತೀಶ್‌ ಪತ್ನಿ ಶ್ವೇತಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಮಾಹಿತಿ ಹಾಕಿದ್ರು. ಗ್ರೂಪಲ್ಲಿ ಉತ್ತರಿಸದೆ ಅವರ ಗಂಡ ನನ್ನ ಪತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ನಾನು ಒಬ್ಬ ಟೆನಿಸ್ ಪ್ಲೇಯರ್.ನನಗೂ ಪ್ರಶಸ್ತಿ ಬಂದಿದೆ. ಚಪ್ಪಲಿ ತೋರಿಸಿದ್ದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ. ನನ್ನ ಪತಿಗೆ ಆಕೆಯೂ ಕ್ಷಮೆ ಕೇಳಲಿ. ಆಕೆ ಈಗ ಲೆವೆಲ್ ಒನ್ ಕೋಚ್ ಆಗಿದ್ದಾರೆ.ನನ್ನ ಪತಿ ಆರ್ಮಿ ಆಫೀಸರ್ ಆಗಿದ್ರು. ಬಿಂದು ರಾಣಿಗಿಂತ ಮುಂಚೆ ಗ್ರೇಡ್ ಒನ್ ಕೋಚ್ ಆಗಿದ್ದಾರೆ ಎಂದು ಶ್ವೇತಾ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?

Video Top Stories