Asianet Suvarna News Asianet Suvarna News

ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ ಎಂದು ನಟಿ ಸುಹಾಸಿನಿ ಹೇಳಿದರು.

ಮಾನ್ಸೂನ್ ರಾಗ, ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಬಹುನಿರೀಕ್ಷೆಯ ಸಿನಿಮಾ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಇತ್ತೀಚೆಗೆ ಚಿತ್ರತಂಡ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಹಿರಿಯ ನಟಿ ಸುಹಾಸಿನಿ ಮಾನ್ಸೂನ್ ರಾಗ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್ ಹೇಳಿದ ಹಾಗೆ ಸುಹಾಸಿನಿ ಕೂಡ ಅಚ್ಯುತ್ ಜೊತೆ ನಟಿಸಲು ಭಯವಾಗಿತ್ತು ಎಂದು ಹೇಳಿದರು. 'ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. 

ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ: ಧನಂಜಯ್

ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ. ಸಿನಿಮಾದಲ್ಲಿ ನಟಿಸಿದ್ರೆ ನಾನು ನನ್ನ ಕಾಸ್ಟ್ಯೂಮ್ ಅನ್ನು ನಾನೆ ಮಾಡಿಕೊಳ್ತೇನೆ. ಆದರೆ ಈ ಸಿನಿಮಾದಲ್ಲಿ ನನ್ನ ಕಾಸ್ಟ್ಯೂಮ್ ನಿರ್ದೇಶಕರೇ ಮಾಡಿದ್ರು. ಅಚ್ಯುತ್ ಕುಮಾರ್ ಅದ್ಭುತ ನಟರು. ಅವರ ಜೊತೆ ನಟಿಸುವಾಗ ನನಗೂ ತುಂಬಾ ಭಯ ಇತ್ತು. ಈ ಸಿನಿಮಾದಲ್ಲಿ ನನಗೆ ಹ್ಯಾಪಿ ರೊಮ್ಯಾಂಟಿಕ್ ಪಾತ್ರ ಕೊಟ್ಟಿದ್ದಾರೆ. ಮದುವೆ ಮೊದಲು ಕನ್ನಡ ಸಿನಿಮಾ ಮಾಡೋಕೆ ಅವಕಾಶ ಇರಲಿಲ್ಲ. ಆದ್ರೆ ಮದುವೆ ಆದ ಮೇಲೆ ಕನ್ನಡ ಸಿನಿಮಾ ಅವಕಾಶ ಹೆಚ್ಚು ಸಿಕ್ತು. ನಾನು ಕನ್ನಡ ಸಿನಿಮಾದಲ್ಲೇ ಹೆಚ್ಚು ನಟಿಸುತ್ತೇನೆ. ನನ್ನನ್ನ ಇಲ್ಲಿ ವರೆಗೆ ಯಾರೂ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಕರೆದಿಲ್ಲ. ಆದರೆ ಮಾನ್ಸೂನ್ ರಾಗ ಟೀಂ ನನ್ನನ್ನ ಕರೆದಿದ್ದಾರೆ' ಎಂದು ಸಂತೋಷ ಪಟ್ಟರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories