Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕೋರ್ಟ್‌ಗೆ ಬಂದು ಸತ್ಯ ಹೇಳಬೇಕಾದ ಸಾಕ್ಷಿಗಳನ್ನ ದಾರಿಯಲ್ಲೇ ತಡೆದು, ಕಾರಿಗೆ ತುಂಬಿಕೊಂಡು, ಆಮಿಷ ಒಡ್ಡಿ, ಬೆದರಿಕೆ ಹಾಕಿ, ಸಾಕ್ಷ್ಯನಾಶ ಮಾಡಲು ಜಾಲವೊಂದು ಹೆಣೆಯಲ್ಪಟ್ಟಿದೆಯಾ? ಈ ಪ್ರಶ್ನೆಗೆ ‘ಹೌದು’ ಅನ್ನೋ ಉತ್ತರ ಬರುತ್ತಿದೆ. ಈ ಸ್ಟೋರಿ ನೋಡಿ.. 

Share this Video
  • FB
  • Linkdin
  • Whatsapp

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ, ಹಾಗೂ ಅದರ ಆರೋಪಿ ನಟ ದರ್ಶನ್ (Darshan Thoogudeepa) ಸದ್ಯ ಜೈಲಿಲ್ಲಿರೋದು ಗೊತ್ತೇ ಇದೆ. ಕಾನೂನು ತನ್ನ ಕೆಲಸವನ್ನ ಮಾಡ್ತಾ ಇದೆ, ನ್ಯಾಯಾಲಯದಲ್ಲಿ ವಿಚಾರಣೆಯೂ ಪ್ರಗತಿಯಲ್ಲಿದೆ. ಆದರೆ, ಈ ನಡುವೆ ಬೆಚ್ಚಿಬೀಳಿಸುವಂತ ರಹಸ್ಯವೊಂದು ಬಯಲಾಗಿದೆ! ಹೌದು, ದರ್ಶನ್ ನ ಹೇಗೆಯಾದರೂ ಮಾಡಿ ಪಾರು ಮಾಡಬೇಕು, ಕಾನೂನಿನ ಕಣ್ಣಿಗೆ ಮಣ್ಣೆರಚಬೇಕು ಅಂತ ದೊಡ್ಡದೊಂದು ಗ್ಯಾಂಗ್ ಆಕ್ಟಿವ್ ಆಗಿದೆಯಾ? ನಿರಂತರವಾಗಿ ಸಾಕ್ಷಿಗಳನ್ನ ಸಂಪರ್ಕಿಸಿ ಸಾಕ್ಷ್ಯನಾಶ ಮಾಡುವ ಕೆಲಸ ನಡೀತಿದೆಯಾ..? ಡಿ ಗ್ಯಾಂಗ್​ನ ಆ ಕೃತ್ಯ ಸದ್ಯ ಖಾಕಿ ಪಡೆಯನ್ನೇ ಬೆಚ್ಚಿಬೀಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ್ಶನ್ ಪಾರು ಮಾಡಲು ಕಾಣದ ಕೈಗಳ ಕೆಲಸ..? ಸಾಕ್ಷಿಗಳ ಬೇಟೆಗೆ ಹೊಂಚು ಹಾಕಿ ಕೂತಿರುತ್ತೆ ಕಾರು..!

ವೀಕ್ಷಕರೇ, ಮಿಸ್ಟರ್ ಐರಾವತ ಸಿನಿಮಾದಲ್ಲಿ ದರ್ಶನ್ ಪೊಲೀಸರು ಹೇಗೆ ಕೆಲಸ ಮಾಡಬೇಕು ಅಂತ ಹೊಡೆದ ಈ ಡೈಲಾಗ್ ಕೇಳಿದ್ರಾ..? ಈಗ ಈ ರೀಲ್ ಪೊಲೀಸ್ ರಿಯಲ್ ಆಗಿ ಕೊಲೆ ಕೇಸ್ ಆರೋಪಿಯಾಗಿ ಜೈಲಿನಲ್ಲಿರೋ ವಿಷ್ಯ ನಿಮಗೆ ಗೊತ್ತೇ ಇದೆ. ಅಷ್ಟೇ ಅಲ್ಲ ಜೈಲಿನಲ್ಲಿ ಇದ್ದುಕೊಂಡೇ ದರ್ಶನ್, ಈ ಕೇಸ್ ನಿಂದ ಖುಲಾಸೆ ಆಗ್ಲಿಕ್ಕೆ ಸಂಚೊಂದನ್ನ ಮಾಡಿದ್ದಾರಾ..? ರೇಣುಕಾಸ್ವಾಮಿ ಕೊಲೆ ಕೇಸ್​ನ ಸಾಕ್ಷಿಗಳನ್ನ ಸಂಪರ್ಕಿಸಿ ಸಾಕ್ಷ್ಯನಾಶ ಮಾಡ್ಲಿಕ್ಕೆ ಗ್ಯಾಂಗ್​ಒಂದನ್ನು ಫಾರ್ಮ್ ಮಾಡಿದ್ದಾರಾ..? ಖುದ್ದು ರಿಯಲ್ ಪೊಲೀಸ್ ಒಬ್ರು ಕೊಟ್ಟಿರೋ ದೂರನ್ನ ನೋಡಿದ್ರೆ ನಿಮಗೆ ಆ ಶಾಕಿಂಗ್ ವಿಷ್ಯ ಗೊತ್ತಾಗುತ್ತೆ.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕೋರ್ಟ್‌ಗೆ ಬಂದು ಸತ್ಯ ಹೇಳಬೇಕಾದ ಸಾಕ್ಷಿಗಳನ್ನ ದಾರಿಯಲ್ಲೇ ತಡೆದು, ಕಾರಿಗೆ ತುಂಬಿಕೊಂಡು, ಆಮಿಷ ಒಡ್ಡಿ, ಬೆದರಿಕೆ ಹಾಕಿ, ಸಾಕ್ಷ್ಯನಾಶ ಮಾಡಲು ಜಾಲವೊಂದು ಹೆಣೆಯಲ್ಪಟ್ಟಿದೆಯಾ? ಈ ಪ್ರಶ್ನೆಗೆ ಹೌದು ಅಂತಿದೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇತ್ತೀಚಿನ ಸೆನ್ಸೇಷನಲ್ ಎಫ್‌ಐಆರ್! ಕೋರ್ಟ್ ಮಾನಿಟರಿಂಗ್ ಕರ್ತವ್ಯದಲ್ಲಿರುವ ಎ.ಎಸ್.ಐ ನಟೇಶ್ ಕೆ.ಎನ್ ಸ್ವತಃ ನೀಡಿರುವ ದೂರು ಇಡೀ ತನಿಖಾ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದೆ. 
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

Related Video