Asianet Suvarna News Asianet Suvarna News

ಭಗವದ್ಗೀತೆ ಯಾಕೆ ಓದಬೇಕು ? ಸಾಮಾನ್ಯ ವ್ಯಕ್ತಿ ಇದರ ಸಾರವನ್ನು ಪಡೆದುಕೊಳ್ಳುವುದು ಹೇಗೆ ?

ಭಗವದ್ಗೀತೆಯ ಮುಖ್ಯ ಸಂದೇಶ ಒತ್ತಡ ನಿವಾರಣೆಯಾಗಿದೆ. ಪ್ರತಿಯೊಬ್ಬರಿಗೂ ಭಗವದ್ಗೀತೆಯನ್ನು ತಲುಪಿಸುವುದು ಈ ಕೋಟಿಗೀತಾ ಲೇಖನ ಯಜ್ಞದ ಉದ್ದೇಶವಾಗಿದೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರುಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ. 

ಭಗವದ್ಗೀತೆ ಇದು ಭಾರತೀಯರ ಪಾಲಿಗೆ ತುಂಬಾ ಶ್ರೇಷ್ಠವಾದ ಗ್ರಂಥವಾಗಿದೆ. ಇದರ ಸಾರ ನಮಗೆ ಗೊತ್ತಾಗಬೇಕಾದರೆ, ನಾವು ಅದರ ಮಹತ್ವವನ್ನು ತಿಳಿಯಲೇಬೇಕು. ಇನ್ನೂ ಭಗವದ್ಗೀತೆ(Bhagavad Gita) ಬಗ್ಗೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು (Sugunendra Tirtha Sripadaru) ಮಾತನಾಡಿದ್ದಾರೆ. ಇವರು ಕೋಟಿಗೀತಾ ಲೇಖನ ಯಜ್ಞವನ್ನು ಆರಂಭಿಸಿದ್ದಾರೆ. ಅಂದರೇ ಕೋಟಿ ಜನರ ಕೈಯಿಂದ ಈ ಭಗವದ್ಗೀತೆಯನ್ನು ಬರೆಸಲು ಅವರು ಮುಂದಾಗಿದ್ದಾರೆ. ಭಗವದ್ಗೀತೆ ಭಾರತೀಯರು(Indians) ಅಲ್ಲದೇ ಇಡೀ ಜಗತ್ತಿಗೆ ಶ್ರೇಷ್ಠವಾಗಿದೆ. ಮಾನವ ಕುಲಕ್ಕೆ ಶ್ರೀಕೃಷ್ಣ ಕೊಟ್ಟ ಗೀತೆ ಇದಾಗಿದೆ. ಮನುಷ್ಯ ಯಾವ ರೀತಿ ಜೀವನ ನಡೆಸಬೇಕು, ಹೇಗೆ ನಡೆಸಬೇಕು ಎಂಬುದು ಇದರಲ್ಲಿ ಇದೆ. ಜೀವನನ್ನು ಸಾರ್ಥಕಗೊಳಿಸಲು ಹಾಗೂ ಯಶಸ್ವಿಗೊಳಿಸಲು ಇದು ಸಹಕಾರಿ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  'ಅಂಪರಂಜಿ' ಮಹಾಲಕ್ಷ್ಮೀ ಫಸ್ಟ್‌ ಕನ್ನಡ ಸಿನಿಮಾ: 'ದುರ್ಗಾಷ್ಠಮಿ' ನಂತರ ನಟಿ ಕಣ್ಮರೆಯಾಗಿದ್ದು ಯಾಕೆ ?

Video Top Stories