Asianet Suvarna News Asianet Suvarna News

58 ಬಾರಿ ಕೊಚ್ಚಿ ಕೊಂದ್ರು ಕಡು ಪಾಪಿಗಳು..! 2 ಸಾವಿರ ರೂ. ವಿಚಾರಕ್ಕೆ ಅಕ್ಷಯ್ ಕೊಲೆ..!

ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಬರ್ಬರ ಹತ್ಯೆ..!
ಹುಲಿವೇಷ ತಂಡ ಕಟ್ಟಿದ ಕಲ್ಲೇಗ ಟೈಗರ್ ಎಂದೇ ಫೇಮಸ್
ಪೊಲೀಸರಿಗೆ ಶರಣಾದ ಆರೋಪಿಗಳಾದ ಚೇತನ್, ಮನಿಷ್

ಕಲ್ಲೇಗ ಟೈಗರ್ಸ್‌, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಫೇಮಸ್ ಆಗಿರೋ ಹುಲಿ ವೇಷದ ತಂಡ. ಕನ್ನಡದ ಬಿಗ್‌ಬಾಸ್‌ನಲ್ಲೂ ಈ ಟೀಂ ಕಮಾಲ್ ಮಾಡಿತ್ತು. ಅಕ್ಷಯ್ ಕಲ್ಲೇಗ ಈ ಹುಲಿವೇಷ ತಂಡದ ನಾಯಕನಾಗಿ ಒಂದು ರೀತಿಯಲ್ಲಿ  ಫೇಮಸ್ ಫಿಗರ್ ಕೂಡಾ ಆಗಿದ್ದ. ಈತ ಟೀಂ ಕಟ್ಟಿಕೊಂಡು ಫೀಲ್ಡ್ಗೆ ಇಳಿದ್ರೆ ಬಹುಮಾನ ಫಿಕ್ಸ್. ಹೀಗಿದ್ದವನು ಆವತ್ತು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಹಂತಕರು ಬರೊಬ್ಬರಿ 58 ಬಾರಿ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ರು. ಸಣ್ಣ ವಿಚಾರಕ್ಕೆ ಕಲ್ಲೇಗ ಟೈಗರ್ಸ್(Kallega Tigers) ನಾಯಕ ಮಚ್ಚಿನೇಟಿಗೆ ಬಲಿಯಾಗಿ ಹೋಗಿದ್ದ. ಜೊತೆಯಲ್ಲಿದ್ದವರೇ ಅಕ್ಷಯ್ನ ಕಥೆ ಮುಗಿಸಿದ್ರು. ಹುಲಿವೇಷ(Tiger dance) ಕುಣಿತದ ತಂಡ ಕಟ್ಟಿಕೊಂಡು ಜಿಲ್ಲೆಯಲ್ಲಿ ಒಳ್ಳೆ ಹೆಸರು ಮಾಡಿದ್ದವನನ್ನ ಹಂತಕರು ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ರು. ಜೊತೆಯಲ್ಲಿದ್ದವರೇ ಅಕ್ಷಯ್‌ಗೆ ಮಚ್ಚಿನೇಟು ಹಾಕಿದ್ರು. ಆದ್ರೆ 58 ಬಾರಿ ಹಲ್ಲೆ ಮಾಡುವಷ್ಟು ಕೋಪ ಆ ನಾಲ್ವರಿಗೆ ಇದ್ದಿದ್ದಾದ್ರೂ ಯಾಕೆ ಅಂತ ಕೆದಕಿದಾಗ ಬಂದಿದ್ದು ಜಸ್ಟ್ 2 ಸಾವಿರದ ಪರಿಹಾರದ ವಿಷಯ. ಚೇತನ್ ಆವತ್ತು ಸಂಜೆ ಅಕ್ಷಯ್ ಗೆಳಯನ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಇದು ಅಕ್ಷಯ್ಗೆ ಗೊತ್ತಾಗಿ 2 ಸಾವಿರ ಪರಿಹಾರ ಕೊಡಬೇಕು ಅಂತ ಚೇತನ್‌ಗೆ ಹೇಳ್ತಾನೆ.ಆದ್ರೆ ಇದು ಚೇತನ್ಗೆ ಸರಿ ಅನ್ನಿಸೋದಿಲ್ಲ.. ಅಕ್ಷಯ್ಗೆ ಆಗದವರದ್ದೇ ಒಂದು ಟೀಂ ರೆಡಿ ಮಾಡಿಕೊಂಡು ಬಂದು ಅವನ ಕಥೆ ಮುಗಿಸಿ ಹೋಗಿಬಿಡ್ತಾರೆ. ಆದ್ರೆ ಈ ಎರಡು ಸಾವಿರದ ಕಥೆಯನ್ನ ಕೇಳೋದಕ್ಕೆ ಪೊಲೀಸರು ರೆಡಿ ಇಲ್ಲ. ಇಲ್ಲಿ ಬೇರೆಯದ್ದೇ ಕಾರಣವಿರಬಹುದು ಅನ್ನೋ ನಂಬಿಕೆ ಅವರದ್ದು.ಅಕ್ಷಯ್ ಪುತ್ತೂರಿನಲ್ಲಿ ಎಷ್ಟು ಒಳ್ಳೆ ಹೆಸರು ಮಾಡಿದ್ದ ಅಂದ್ರೆ ಅರೋಪಿಗಳನ್ನ ಸ್ಥಳ ಮಹಜರಿಗೆ ತಂದ ಹೊತ್ತಲ್ಲೂ ಅಕ್ಷಯ್ ತಂಡದ ಯುವಕರು ಆರೋಪಿಗಳ ವಿರುದ್ದ ಎಗರಿ ಬಿದ್ದಿದ್ದಾರೆ. ಸುಮ್ಮನೆ ಬಿಡಲ್ಲ ಅನ್ನೋ ರೀತಿಯಲ್ಲಿ ಮತ್ತೆ ಪ್ರತೀಕಾರದ ಮಾತನ್ನಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ನ.15ಕ್ಕೆ ಮತ್ತೊಂದು ಸುತ್ತಿನ ಕಾಂಗ್ರೆಸ್ ಸೇರ್ಪಡೆ ಎಂದ ಡಿಕೆಶಿ: ತಿಂಗಳಿಗೆ ಕನಿಷ್ಠ 3 ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜನೆ ?

Video Top Stories