ಒಂದು ಸ್ಟೇಟ್ಮೆಂಟ್.. ನೂರೆಂಟು ಅನುಮಾನದ ಘಾಟು: ದರ್ಶನ್‌ಗೆ ಕಂಟಕವಾಗಿದ್ದೇಕೆ ಆರೋಪಿಗಳ ಆ ಹೇಳಿಕೆ..?

ಪವಿತ್ರಾಗೌಡ ಕೊಟ್ಟಿರೋ ಹೇಳಿಕೆಗಳು ದರ್ಶನ್ ಪಾಲಿಗೆ ಕಂಟಕ ತರಬಲ್ಲ ಸಾಧ್ಯತೆಗಳಿವೆ ಅಂತಿದ್ದಾರೆ.. ಆದ್ರೆ ಡೆವಿಲ್ ಹೀರೋಗೆ ಎದುರಾಗಿರೋ ಕಂಟಕ ಅದೊಂದೇ ಅಲ್ಲ. ಅದನ್ನೂ ಮೀರಿದ ಸಂಗತಿಗಳೂ ಇವೆ ಈ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೇಸಲ್ಲಿ ನಂಬರ್ ಒನ್ ಆರೋಪಿಯಾಗಿದ್ದವರೇ, ಜಾಮೀನು ಬೇಕು ಅಂತ ಕೋರ್ಟ್ ಕದ ತಟ್ತಿದ್ದಾರೆ.. ಇಲ್ಲಿಂದಲೇ ಈ ಕ್ರೈಮ್ ಸ್ಟೋರಿಲಿ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.. ಅಷ್ಟೇ ಅಲ್ಲ, ತನಗೆ ಜಾಮೀನು ಯಾಕೆ ಬೇಕು ಅಂತ ಆ ಪವಿತ್ರಾ ಗೌಡ ಹಾಗೂ ಉಳಿದವರು ಕೊಟ್ಟಿರೋ ಹೇಳಿಕೆ ದರ್ಶನ್‌ಗೆ ಕಂಟಕ ತರೋ ಸಾಧ್ಯತೆ ಕಾಣ್ತಾ ಇದೆ.. ಅದರ ಜೊತೆಗೆ, ಡಿ-ಗ್ಯಾಂಗ್ ಈಗ ದಿಕ್ಕಾಪಾಲಾಗಿದೆ.. ಆ ಗ್ಯಾಂಗ್ ದರ್ಶನ್ ವಿರುದ್ಧ ವಿಷಕಾರುತ್ತಾ ಅನ್ನೋ ಪ್ರಶ್ನೆ ಮೂಡಿದೆ.. ಅದರಲ್ಲೂ ಜಾಮೀನು ಅರ್ಜಿ ಸಲ್ಲಿಸಿದವರು ಕೊಡ್ತಾ ಇರೋ ಒಂದೊಂದು ಸ್ಟೇಟ್ಮೆಂಟ್ ಕೂಡ ನೂರೆಂಟು ಅನುಮಾನ ಹುಟ್ಟಿಸ್ತಾ ಇದೆ.. ಇದಕ್ಕೆಲ್ಲಾ ಉತ್ತರ ಹುಡುಕ್ತಾ ಹೋದ್ರೆ, ಡೆವಿಲ್ ಇನ್ ಡೇಂಜರಸ್ ಸಿಚುಯೇಷನ್ ಅನ್ನೋದು ಅರ್ಥವಾಗುತ್ತೆ.. ಅದರ ಇನ್ಸೈಡ್ ಸ್ಟೋರಿ, ಇಲ್ಲಿದೆ ನೋಡಿ..

Add Asianetnews Kannada as a Preferred SourcegooglePreferred

Related Video