10:43 PM (IST) Jun 16

Karnataka News Live 16 June 2026ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್

ಇನ್‌ಸ್ಟಾದಲ್ಲಿ ಪರಿಚಯವಾಗಿ ಲೀವ್ ಇನ್ ರಿಲೇಶನ್‌ಶಿಪ್ ಶುರುವಾಯಿತು. ಇಬ್ಬರದ್ದೂ ಒಂದೇ ಊರು. ಹೀಗಾಗಿ ಬೇಗನೆ ಆತ್ಮೀಯರಾಗಿದ್ದಾರೆ. 6 ತಿಂಗಳಿನಿಂದ ಒಟ್ಟಿಗೆ ವಾಸವಿದ್ದಾರೆ. ಇದೀಗ 20ರ ಹರೆಯದ ಯುವತಿಯನ್ನು ಕೊಲೆ ಮಾಡಲಾಗಿದೆ.

Read Full Story
09:45 PM (IST) Jun 16

Karnataka News Live 16 June 2026Chanakya Niti - ಸ್ಮಶಾನ ಮಾತ್ರವಲ್ಲ, ಈ ಸ್ಥಳಗಳಿಂದ ವಾಪಸ್ ಬರುವಾಗ ತಿರುಗಿ ನೋಡಲೇಬಾರದು ಅಂತಾರೆ ಚಾಣಕ್ಯ!

Chanakya Wisdom: ಚಾಣಕ್ಯ ನೀತಿಯ ಪ್ರಕಾರ, ಕೆಲವು ಸ್ಥಳಗಳಿಗೆ ಭೇಟಿ ನೀಡಿ ಹಿಂತಿರುಗುವಾಗ ನಾವು ಮತ್ತೆ ತಿರುಗಿ ನೋಡಬಾರದು. ಹಾಗೆ ನೋಡಿದರೆ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಆ ಸ್ಥಳಗಳು ಯಾವುವು ಎಂದು ಈಗ ನೋಡೋಣ…

Read Full Story
08:36 PM (IST) Jun 16

Karnataka News Live 16 June 2026Escalator Facts - ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಯಾಕಿರುತ್ತೆ? ಖಂಡಿತ ಧೂಳು ಒರೆಸೋಕೆ ಅಲ್ಲ!

Escalator Safety: ಎಸ್ಕಲೇಟರ್‌ನಲ್ಲಿ ಹೋಗುವಾಗ ಅದರ ಬದಿಯಲ್ಲಿರುವ ಬ್ರಷ್‌ಗಳನ್ನು ನೀವು ನೋಡಿರಬಹುದು. ಹೆಚ್ಚಿನವರು ಇದನ್ನು ಶೂ ಕ್ಲೀನ್ ಮಾಡಲು ಅಥವಾ ಧೂಳು ತೆಗೆಯಲು ಇಟ್ಟಿದ್ದಾರೆ ಎಂದು ಭಾವಿಸುತ್ತಾರೆ.

Read Full Story
07:13 PM (IST) Jun 16

Karnataka News Live 16 June 2026ಮಳೆ ಕೊರತೆ - ಕರಾವಳಿ ರೈತರಿಗೆ ಆತಂಕ, ಭತ್ತ ಉತ್ಪಾದನೆ ಕುಸಿತ ಭೀತಿ, ಮುಗಿಲು ನೋಡುತ್ತಾ ಕುಳಿತ ರೈತ!

ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ. ಸಕಾಲಿಕ ಮಳೆಯಾಗದ ಕಾರಣ ಗದ್ದೆ ಉಳುಮೆ, ಬಿತ್ತನೆ ಹಾಗೂ ನಾಟಿ ಕಾರ್ಯಗಳು ಸ್ಥಗಿತಗೊಂಡಿದ್ದು, ಇದು ಭತ್ತದ ಇಳುವರಿ ಮತ್ತು ಕೃಷಿ ವೆಚ್ಚದ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ.
Read Full Story
07:04 PM (IST) Jun 16

Karnataka News Live 16 June 2026ಬ್ಯಾಲೆನ್ಸ್‌ ಕಳೆದುಕೊಂಡ Rapido Bike Pink ಲೇಡಿ ರೈಡರ್‌, ಪ್ರಾಣ ಕಳೆದುಕೊಂಡ ಹಿಂಬದಿ ಕುಳಿತಿದ್ದ ಟೀಚರ್‌!

ಬೆಂಗಳೂರಿನ ಜೆ.ಪಿ. ನಗರದಲ್ಲಿ ರಾಪಿಡೋ ಬೈಕ್‌ನಿಂದ ಕೆಳಗೆ ಬಿದ್ದು 54 ವರ್ಷದ ಶಾಲಾ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಒಂದೇ ಬದಿಗೆ ಕಾಲು ಹಾಕಿ ಕುಳಿತಿದ್ದ ಅವರು, ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ.
Read Full Story
06:55 PM (IST) Jun 16

Karnataka News Live 16 June 2026Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!

Darshan Case: ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ.

Read Full Story
06:48 PM (IST) Jun 16

Karnataka News Live 16 June 2026CM ಡಿಕೆಶಿ ಸರ್ಕಾರದ ಮೊದಲ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ? ರಾಜಧಾನಿಯಾಚೆ ಆಡಳಿತ

ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರವು ತನ್ನ ಮೊದಲ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಭೆ ನಡೆಯುವ ಸಾಧ್ಯತೆಗಳಿದ್ದು, ರಾಜಧಾನಿಯಾಚೆ ಆಡಳಿತ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ.
Read Full Story
06:20 PM (IST) Jun 16

Karnataka News Live 16 June 2026ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್

ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.
Read Full Story
06:17 PM (IST) Jun 16

Karnataka News Live 16 June 2026RSS ದಾಖಲೆ ಕೇಳಿದ್ವಿ, ಸುನೀಲ್ ಅಣ್ಣ, ಅಶೋಕಣ್ಣ ಬಾಯಿಗೆ ಬಂದಾಗೆ ಮಾತಾಡ್ತಾರೆ - ಶಾಸಕ ಪ್ರದೀಪ್ ಈಶ್ವರ್

ಶಾಸಕ ಪ್ರದೀಪ್ ಈಶ್ವರ್ ಅವರು ಆರ್‌ಎಸ್‌ಎಸ್ ನೋಂದಣಿ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ನೋಂದಣಿಯಾಗದ ಸಂಘಟನೆಗೆ ಝೆಡ್ ಪ್ಲಸ್ ಭದ್ರತೆ ನೀಡಿರುವುದನ್ನು ಪ್ರಶ್ನಿಸಿರುವ ಅವರು, ಜೆಡಿಎಸ್ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದಾರೆ.
Read Full Story
05:53 PM (IST) Jun 16

Karnataka News Live 16 June 2026ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿ 121 ಕೋಟಿಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ನೈಕಿ ಇಂಡಿಯಾ

ಜಾಗತಿಕ ಕ್ರೀಡಾ ದೈತ್ಯ ನೈಕಿ ಇಂಡಿಯಾ, ಬೆಂಗಳೂರಿನ ಪ್ರತಿಷ್ಠಿತ ಬಾಗ್ಮನೆ ಟೆಕ್ ಪಾರ್ಕ್‌ನಲ್ಲಿ 1.25 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದಿದೆ. 5 ವರ್ಷಗಳ ಅವಧಿಯ ಈ ಬೃಹತ್ ಒಪ್ಪಂದದ ಒಟ್ಟು ಮೌಲ್ಯ 121 ಕೋಟಿ ರೂಪಾಯಿಗಳಾಗಿದೆ.

Read Full Story
05:47 PM (IST) Jun 16

Karnataka News Live 16 June 2026Baby Names - ನಿಮ್ಮ ಮುದ್ದಿನ ಕಂದನಿಗೆ ಕಾರ್ತಿಕೇಯನ ಈ 40 ಹೆಸರುಗಳನ್ನಿಡಿ - ಎಲ್ಲರೂ ಮೆಚ್ಚಿಕೊಳ್ತಾರೆ!

Baby Names: 2026ರಲ್ಲಿ ಟ್ರೆಂಡಿಂಗ್‌ನಲ್ಲಿರುವ, ಶಿವ-ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಂಬಂಧಿಸಿದ ಮಾಡರ್ನ್ ಮತ್ತು ಯೂನಿಕ್ ಹೆಸರುಗಳ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಅರ್ಥಪೂರ್ಣ ಹೆಸರುಗಳ ಲಿಸ್ಟ್. 

Read Full Story
05:47 PM (IST) Jun 16

Karnataka News Live 16 June 2026Cp Yogeshwara Son - 'ಸೈನಿಕ 2' ಮಾಡಲು ರೆಡಿಯಾದ ಶಾಸಕ ಸಿಪಿ ಯೋಗೇಶ್ವರ ಪುತ್ರ ಧ್ಯಾನ್!

cp yogeshwar son dhyan: ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್, ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿ.ಪಿ. ಯೋಗೇಶ್ವರ್ ಹೊಸ ಸಿನಿಮಾದಲ್ಲಿ ನಟಿಸುವ ನಿರ್ಧಾರ ಕೈಗೊಂಡಿದ್ದು, ಎರಡೂ ಸಿನಿಮಾಗಳ ಮುಹೂರ್ತ ಜು.5ರಂದು ನಡೆಯಲಿದೆ.

Read Full Story
05:32 PM (IST) Jun 16

Karnataka News Live 16 June 2026Chanakya Niti - ಪತ್ನಿಯನ್ನು ಈ 4 ಜಾಗಕ್ಕೆ ಅಪ್ಪಿತಪ್ಪಿಯೂ ಕರೆದುಕೊಂಡು ಹೋಗಬೇಡಿ ಅಂತಾರೆ ಚಾಣಕ್ಯ!

Chanakya Niti For Married Life: ಚಾಣಕ್ಯ ನೀತಿಯ ಪ್ರಕಾರ, ಗಂಡ ತನ್ನ ಹೆಂಡತಿಯನ್ನು ಯಾವ 4 ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು? ಕುಟುಂಬದ ಸುರಕ್ಷತೆ ಮತ್ತು ಗೌರವದ ಬಗ್ಗೆ ಚಾಣಕ್ಯರು ನೀಡಿದ ಸಲಹೆಗಳೇನು? 

Read Full Story
05:23 PM (IST) Jun 16

Karnataka News Live 16 June 2026ದಶಕದ ಕನಸಿಗೆ ಜೀವ - ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆಗೆ ಬಿಗ್‌ ಬೂಸ್ಟ್‌, 3348 ಕೋಟಿ ಟೆಂಡರ್ ಒಪ್ಪಿಕೊಂಡ SNC!

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಮೊದಲ ಪ್ಯಾಕೇಜ್ ಅಡಿಯಲ್ಲಿ ಮಾದಾವರದಿಂದ ಬಳ್ಳಾರಿ ರಸ್ತೆವರೆಗಿನ 21 ಕಿ.ಮೀ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಗುತ್ತಿಗೆಯನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗೆ ಬಿಡಿಎ ನೀಡಿದೆ. ಈ ಮಹತ್ವದ ಒಪ್ಪಂದವು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ.

Read Full Story
04:34 PM (IST) Jun 16

Karnataka News Live 16 June 2026ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬಾಂಬ್ ಆತಂಕ - ಬೆಂಗಳೂರಿನ ಬಹುತೇಕ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್!

ಬೆಂಗಳೂರಿನ ಹಲವು ಪ್ರಮುಖ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆಪ್ರಾದೇಶಿಕ ಸಾರಿಗೆ ಕಚೇರಿಇಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ತೀವ್ರ ಆತಂಕ ಸೃಷ್ಟಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ, ಇದು ಹುಸಿ ಬೆದರಿಕೆ ಎಂದು ಖಚಿತಪಡಿಸಿದ್ದಾರೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಇಮೇಲ್ ಕಳುಹಿಸಿದವರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

Read Full Story
04:16 PM (IST) Jun 16

Karnataka News Live 16 June 2026ರಸ್ತೆ ನಿರ್ಮಾಣ ವೆಚ್ಚಕ್ಕೆ ಐಐಟಿ ರೂರ್ಕಿ ಬಿಗ್ ಬ್ರೇಕ್ - ಕರ್ನಾಟಕದಲ್ಲಿ ಭಾರೀ ಖರ್ಚು ತಗ್ಗಿಸಬಲ್ಲ ‘ಬಯೋ-ಡಾಂಬರು’ ಮ್ಯಾಜಿಕ್!

ಐಐಟಿ ರೂರ್ಕಿಯ ಸಂಶೋಧಕರು ಕರ್ನಾಟಕದಲ್ಲಿ 'ಬಯೋ-ಬಿಟುಮೆನ್' ಬಳಸಿ ರಸ್ತೆ ನಿರ್ಮಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕಬ್ಬಿನ ಕಾಕಂಬಿ ಬಳಸಿ ತಯಾರಿಸುವ ಈ ಜೈವಿಕ ಡಾಂಬರು, ರಸ್ತೆ ನಿರ್ಮಾಣ ವೆಚ್ಚವನ್ನು ಶೇ. 20ರಷ್ಟು ಕಡಿಮೆ ಮಾಡಲಿದ್ದು, ಇದು ಪರಿಸರ ಸ್ನೇಹಿಯೂ ಆಗಿದೆ.
Read Full Story
03:58 PM (IST) Jun 16

Karnataka News Live 16 June 2026KSR Bengaluru ಕಾಮಗಾರಿ - 2 ತಿಂಗಳು ರೈಲು ಸಂಚಾರದಲ್ಲಿ ಭಾರಿ ಏರುಪೇರು, 58 ರೈಲು ರದ್ದು! ವಂದೇ ಭಾರತ್ ಕೂಡ ವ್ಯತ್ಯಯ!

ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿಯಿಂದಾಗಿ, ಮುಂದಿನ 2 ತಿಂಗಳ ಕಾಲ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. 

Read Full Story
03:08 PM (IST) Jun 16

Karnataka News Live 16 June 2026ಬೆಳಗಾವಿ - ಕಸದ ರಾಶಿಯಲ್ಲಿ 59 ಗುಂಡುಗಳು ಪತ್ತೆ! ತನಿಖೆ ವೇಳೆ ಶಾಕಿಂಗ್ ಮಾಹಿತಿ ಬಯಲು!

ಬೆಳಗಾವಿಯ ಉದ್ಯಮಭಾಗದಲ್ಲಿ ಕಸ ವಿಂಗಡಣೆ ಮಾಡುವಾಗ ಪೌರಕಾರ್ಮಿಕರಿಗೆ 59 ಬಳಕೆಯಾದ ಗುಂಡುಗಳು ಪತ್ತೆಯಾಗಿವೆ. ಪೊಲೀಸರ ತನಿಖೆಯಿಂದ, ವಿಜಯಪುರದ ಮಾಜಿ ಸೈನಿಕನೊಬ್ಬ ಸಂಬಂಧಿಕರ ಮನೆಯಲ್ಲಿ ಬಿಟ್ಟುಹೋಗಿದ್ದ ಈ ಗುಂಡುಗಳನ್ನು, ಮನೆ ಖಾಲಿ ಮಾಡುವಾಗ ಕಸಕ್ಕೆ ಎಸೆಯಲಾಗಿತ್ತು ಎಂಬುದು ತಿಳಿದುಬಂದಿದೆ.
Read Full Story
02:59 PM (IST) Jun 16

Karnataka News Live 16 June 2026ಲಾಂಚ್ ಬೆನ್ನಲ್ಲೇ ಗ್ರಾಹಕರಿಗೆ ಬಂಪರ್ ಆಫರ್ ನೀಡಿದ Hero MotoCorp - ಫ್ಲೆಕ್ಸ್-ಫ್ಯುಯೆಲ್ ಬೈಕ್ ಮತ್ತಷ್ಟು ಅಗ್ಗ!

ಹೀರೋ ಮೋಟೋಕಾರ್ಪ್ ತನ್ನ ಹೊಸ ಇಥೆನಾಲ್ ಚಾಲಿತ ಸ್ಪ್ಲೆಂಡರ್+ ಮತ್ತು ಎಚ್‌ಎಫ್ ಡಿಲಕ್ಸ್ ಫ್ಲೆಕ್ಸ್-ಫ್ಯುಯೆಲ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇಂಧನ ವೆಚ್ಚ ಉಳಿತಾಯದ ಗುರಿಯೊಂದಿಗೆ, ಕಂಪನಿಯು ಈ ಬೈಕ್‌ಗಳ ಮೇಲೆ ₹4,000 ಭರ್ಜರಿ ರಿಯಾಯಿತಿ ಘೋಷಿಸಿದ್ದು, ಇದು ಗ್ರಾಹಕರಿಗೆ ದೊಡ್ಡ ಅವಕಾಶವಾಗಿದೆ.
Read Full Story
01:52 PM (IST) Jun 16

Karnataka News Live 16 June 2026ಶಿವಮೊಗ್ಗದಲ್ಲಿ ಮನಕಲುಕುವ ಘಟನೆ - ಹೃದಯಾಘಾತದಿಂದ ಒಂದನೇ ತರಗತಿ ವಿದ್ಯಾರ್ಥಿ ಸಾವು!

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಸರ್ಕಾರಿ ಶಾಲೆಯಲ್ಲಿ ಆರು ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಒಂದನೇ ತರಗತಿ ವಿದ್ಯಾರ್ಥಿ ತ್ರಿಲೋಕ್ ಜೈನ್, ಸಂಜೆ ಶಾಲಾ ಆವರಣದಲ್ಲಿ ಆಟವಾಡುವಾಗ ಕುಸಿದುಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
Read Full Story