11:42 PM (IST) Aug 27

Karnataka Latest News Live 27 August 2026Yash Toxic Day 2 Collection - ವಿದೇಶದಲ್ಲಿ ಹೌಸ್‌ಫುಲ್, 2ನೇ ದಿನ ‘ಟಾಕ್ಸಿಕ್’ ಕಲೆಕ್ಷನ್‌ಗೆ ಏನಾಯ್ತು?

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಭಾರತದಲ್ಲಿ ಕಲೆಕ್ಷನ್ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ, ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಹೌಸ್‌ಫುಲ್ ಶೋಗಳು ಮುಂದುವರಿದಿದೆ.

Read Full Story
10:59 PM (IST) Aug 27

Karnataka Latest News Live 27 August 2026Cricket - ಶ್ರೀಲಂಕಾ ಸರಣಿ ಮುಕ್ತಾಯ; ಮತ್ತೆ ಮೈದಾನಕ್ಕಿಳಿಯುವುದು ಎಂದು ಟೀಮ್ ಇಂಡಿಯಾ? ಡಿಸೆಂಬರ್‌ವರೆಗೆ ಪ್ಯಾಕ್ ಆಗಿದೆ ಶೆಡ್ಯೂಲ್!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ನಂತರ, ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಡುವಿಲ್ಲದ ವೇಳಾಪಟ್ಟಿ ಎದುರಾಗಿದೆ. ಸೆಪ್ಟೆಂಬರ್‌ನಿಂದ ಫೆಬ್ರವರಿ 2027ರವರೆಗೆ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಸರಣಿಗಳನ್ನು ಆಡಲಿದೆ. ಈ ಸರಣಿಗಳು, ವಿಶೇಷವಾಗಿ ಟೆಸ್ಟ್ ಪಂದ್ಯಗಳು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿವೆ.
Read Full Story
10:53 PM (IST) Aug 27

Karnataka Latest News Live 27 August 2026ವಿಶ್ವನಾಯಕ ಯಶ್ ಮತ್ತು ಟಾಕ್ಸಿಕ್ ಎಂಬ ಮಾಯಾವಾಸ್ತವ - ಕೋಟಿಗಿಂತ ಕಥೆ ಮುಖ್ಯವೇ?

‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಬಳಿಕ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ದೊಡ್ಡ ಬಜೆಟ್‌, ಬಾಕ್ಸ್ ಆಫೀಸ್ ಹಾಗೂ ಪ್ಯಾನ್ ಇಂಡಿಯಾ ಮಾರುಕಟ್ಟೆಯ ಬಗ್ಗೆ ಚರ್ಚೆ ಶುರುವಾಗಿದೆ. KGF ಕನ್ನಡ ಸಿನಿಮಾಗೆ ಹೊಸ ಮಾರುಕಟ್ಟೆ ತೆರೆದರೂ, ಅದರ ಯಶಸ್ಸಿನ ಸೂತ್ರವನ್ನು ಹುಡುಕುವುದು ಸರಿಯೇ?

Read Full Story
10:19 PM (IST) Aug 27

Karnataka Latest News Live 27 August 2026ಕಸ್ತೂರಿ ರಂಗನ್ ವರದಿ ಸಾರಸಗಟು ತಿರಸ್ಕಾರಕ್ಕೆ ಯದುವೀರ್ ಅಸಮಾಧಾನ; ಸರ್ಕಾರದ ವಿರುದ್ಧ ವಾಗ್ದಾಳಿ

ಕಸ್ತೂರಿ ರಂಗನ್ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.

Read Full Story
10:18 PM (IST) Aug 27

Karnataka Latest News Live 27 August 2026Flood - ಮೋದಿ ಜೀ ನಮ್ಮನ್ನು ಕಾಪಾಡಿ; ಟಿಬೆಟ್ ದುರಂತದ ನಡುವೆ ಕಣ್ಣೀರಿಡುತ್ತಾ ಭಾರತಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಸುನೀತಾ!

ಚೀನಾ-ನೇಪಾಳ ಗಡಿಯ ಸಮೀಪ ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಹಿಮಪಾತದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ. ಉಸಿರಾಟದ ತೊಂದರೆ, ಆಹಾರ-ನೀರಿನ ಕೊರತೆಯಿಂದ ಬಳಲುತ್ತಿರುವ ಯಾತ್ರಿಕರು, ತಮ್ಮನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
Read Full Story
10:09 PM (IST) Aug 27

Karnataka Latest News Live 27 August 2026ಎಷ್ಟು ಮುದ್ದಾಗಿದ್ದಾರೆ ನೋಡಿ, ಎರಡು ಕಣ್ಣು ಸಾಲದು - ನಟಿ ನಭಾ ನಟೇಶ್ ಓಣಂ ಲುಕ್ ವೈರಲ್

ನಟಿ ನಭಾ ನಟೇಶ್ ಅವರ ಓಣಂ ಸ್ಪೆಷಲ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಸೀರೆಯಲ್ಲಿ ಸಿಂಪಲ್ ಹಾಗೂ ಎಲಿಗಂಟ್ ಆಗಿ ಕಾಣಿಸಿಕೊಂಡಿರುವ ನಭಾ ನಟೇಶ್ ಅವರ ಫೋಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read Full Story
09:21 PM (IST) Aug 27

Karnataka Latest News Live 27 August 2026ಭಾರತದಲ್ಲಿ ವಿಮೆ, ನೇಪಾಳದಲ್ಲಿ ಸಾವು; ಕುಟುಂಬಕ್ಕೆ ಸಿಗುತ್ತಾ ಕೋಟ್ಯಂತರ ರೂ., ಟರ್ಮ್ ಇನ್ಶೂರೆನ್ಸ್? ಇಲ್ಲಿದೆ ಸಂಪೂರ್ಣ ಲೆಕ್ಕ!

ವಿದೇಶದಲ್ಲಿ (ಉದಾ: ನೇಪಾಳ) ಭಾರತೀಯ ಪ್ರವಾಸಿಗರು ಮೃತಪಟ್ಟರೆ, ಅವರ ಟರ್ಮ್ ಇನ್ಶುರೆನ್ಸ್ ಹಣವನ್ನು ಕ್ಲೈಮ್ ಮಾಡಬಹುದು. ಮೃತದೇಹ ಸಿಗದಿದ್ದರೂ, ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ಸರ್ಕಾರದ ವಿಶೇಷ ಮಾರ್ಗಸೂಚಿಗಳ ಅಡಿಯಲ್ಲಿ ಕ್ಲೈಮ್ ಇತ್ಯರ್ಥಪಡಿಸಲು ಅವಕಾಶವಿದೆ.

Read Full Story
08:47 PM (IST) Aug 27

Karnataka Latest News Live 27 August 2026Success Story - 71 ಬಾರಿ ವರ್ಗಾವಣೆಯಾದರೂ ಮಂಡಿಯೂರದ ಐಎಎಸ್‌/ಐಪಿಎಸ್‌ ಆಫೀಸರ್ಸ್‌; ಅದರಲ್ಲೊಬ್ಬ ಕನ್ನಡತಿ!

ಭಾರತದ ಪ್ರಾಮಾಣಿಕ ಐಎಎಸ್/ಐಪಿಎಸ್ ಅಧಿಕಾರಿಗಳಾದ ಪ್ರದೀಪ್ ಕಸ್ನಿ, ಅಶೋಕ್ ಖೇಮ್ಕಾ, ಮತ್ತು ಕರ್ನಾಟಕದ ಡಿ. ರೂಪಾ ಅವರಂತಹವರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದಕ್ಕೆ ಪದೇ ಪದೇ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ. 71 ಬಾರಿ ವರ್ಗಾವಣೆಗೊಂಡರೂ ತಮ್ಮ ನಿಷ್ಠೆಯಿಂದ ಹಿಂದೆ ಸರಿಯದ ಈ ಅಧಿಕಾರಿಗಳ ಹೋರಾಟದ ಕಥೆಯು ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ.
Read Full Story
08:37 PM (IST) Aug 27

Karnataka Latest News Live 27 August 2026ಆನೇಕಲ್ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ವಿರುದ್ಧ ಸಿಡಿದೆದ್ದ ಉದ್ಯಮಿ ಕಿರಣ್ ಮಜುಂದಾರ್-ಶಾ!

ಬೆಂಗಳೂರಿನ ಆನೇಕಲ್ ಮತ್ತು ಹುಸ್ಕೂರು-ಸರ್ಜಾಪುರ ರಸ್ತೆಗಳ ದುಸ್ಥಿತಿಯ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಮತ್ತು ಶಾಸಕ ಬಿ. ಶಿವಣ್ಣ ನಡುವೆ ತೀವ್ರ ವಾಕ್ಸಮರ ನಡೆದಿದೆ. ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ಕಿರಣ್ ಹೇಳಿದರೆ, ಮೂಲಸೌಕರ್ಯಕ್ಕೆ ಸಿಎಸ್‌ಆರ್ ನಿಧಿ ಬಳಸಲಿ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.
Read Full Story
08:36 PM (IST) Aug 27

Karnataka Latest News Live 27 August 2026ರಾಯನನ್ನು ಕೊಲ್ಲುವುದಷ್ಟೇ ಟಿಕೆಟ್‌ನ ಉದ್ದೇಶವಾಗಿತ್ತಾ? ‘ಟಾಕ್ಸಿಕ್’ ಕ್ಲೈಮ್ಯಾಕ್ಸ್ ಅರ್ಥವೇನು?

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಕೊನೆಯಲ್ಲಿ ಏನಾಯ್ತು? ಅಪ್ಪ-ಮಗನ ಪಾತ್ರದಲ್ಲಿರೋ ರಾಯ ಮತ್ತು ಟಿಕೆಟ್ ನಡುವೆ ದೊಡ್ಡ ಫೈಟ್ ನಡೆಯುತ್ತೆ. ತನ್ನನ್ನ ಬಿಟ್ಟು ಹೋದ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳೋಕೆ ಟಿಕೆಟ್ ಬರ್ತಾನೆ. ಕೊನೆಗೆ, ಆತ ತನ್ನ ಅಪ್ಪನನ್ನ ಕೊಂದನಾ? ಇಲ್ವಾ? ಇಲ್ಲಿದೆ ಉತ್ತರ.

Read Full Story
07:58 PM (IST) Aug 27

Karnataka Latest News Live 27 August 2026Toxic ನಂತರ ಯಶ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ - ರಾಕಿಂಗ್ ಸ್ಟಾರ್ ಮುಂದಿನ ಹೆಜ್ಜೆ ಇದೇ

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಭರ್ಜರಿ ಓಪನಿಂಗ್ ಪಡೆದಿದೆ. KGF ಸರಣಿ ಮೂಲಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿರುವ ಯಶ್ ಇದೀಗ ನಿತೇಶ್ ತಿವಾರಿ ನಿರ್ದೇಶನದ..

Read Full Story
07:35 PM (IST) Aug 27

Karnataka Latest News Live 27 August 2026ಮಲಗಿದ್ದ ಪತ್ನಿಯ ಕುತ್ತಿಗೆ ಹಿಚುಕಿ ಜೀವ ತೆಗೆದ.. 'ಹೃದಯಾಘಾತ' ಎಂದು ಕತೆ ಕಟ್ಟಿದ್ದ ಪತಿ ಲಾಕ್ ಆಗಿದ್ದೇಗೆ?

ಕುಡಿದ ಮತ್ತಿನಲ್ಲಿ ಬಂದು ಮಲಗಿದ್ದ ಪತ್ನಿಯ ಜೀವ ತೆಗೆದು ಹೃದಯಾಘಾತದ ನಾಟಕ ಕಟ್ಟಿದ್ದ ಪತಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಂತರ ಪ್ರಕರಣ ಬಯಲಾಗಿದ್ದು ಹೇಗೆ? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
07:01 PM (IST) Aug 27

Karnataka Latest News Live 27 August 2026ಮಂಡ್ಯದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಚೀಲ ತೆರೆದಾಗ ಸಿಕ್ಕಿದ್ದು ಲಕ್ಷ ಲಕ್ಷ ಹಣ - ಕೊನೆಗೆ ಏನಾಯ್ತು?

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಮ್ಮ ಅವರ ಮನೆ ಸ್ವಚ್ಛಗೊಳಿಸುವ ವೇಳೆ ₹3.5 ಲಕ್ಷ ನಗದು ಪತ್ತೆಯಾಗಿದೆ. ಚೀಲಗಳಲ್ಲಿ ತುಂಬಿದ್ದ ಚಿಲ್ಲರೆ ಹಾಗೂ ನೋಟುಗಳನ್ನು ಸ್ವಯಂಸೇವಕರು ಎಣಿಸಿದಾಗ ಲಕ್ಷಾಂತರ ಹಣ ಇರುವುದು ಬೆಳಕಿಗೆ ಬಂದಿದೆ.

Read Full Story
06:42 PM (IST) Aug 27

Karnataka Latest News Live 27 August 2026ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ ಆರು ಪಟ್ಟು ದುಬಾರಿ ಆಗಲಿದೆ ಹೆಬ್ಬಾಳದ ಚಿಕ್ಕ ಸುರಂಗ ರಸ್ತೆ - IISc ವರದಿ

ಹೆಬ್ಬಾಳ ಜಂಕ್ಷನ್‌ನಲ್ಲಿ ಉದ್ದೇಶಿತ ಚಿಕ್ಕ ಸುರಂಗ ರಸ್ತೆ ಯೋಜನೆಯು ಸಂಚಾರ ದಟ್ಟಣೆಗೆ ಕೇವಲ ತಾತ್ಕಾಲಿಕ ಪರಿಹಾರ ನೀಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಧ್ಯಯನ ವರದಿಯು ತಿಳಿಸಿದೆ. ಈ ಯೋಜನೆಯು ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ 6 ಪಟ್ಟು ದುಬಾರಿಯಾಗಿದೆ.

Read Full Story
06:35 PM (IST) Aug 27

Karnataka Latest News Live 27 August 2026ಅಭಿಮಾನಿಗಳಿಗೆ ಸಿಹಿ ಸುದ್ದಿ - ಮದುವೆಗೂ ಮುನ್ನ ನಟ ಚಿಕ್ಕಣ್ಣನಿಂದ ಬಿಗ್ ಅನೌನ್ಸ್‌ಮೆಂಟ್

‘ಉಪಾಧ್ಯಕ್ಷ’ ಚಿತ್ರದ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.

Read Full Story
06:17 PM (IST) Aug 27

Karnataka Latest News Live 27 August 2026ತುಮಕೂರಿನಲ್ಲಿ HAL-SAFRAN ಕಂಪನಿಯಿಂದ ಜಂಟಿಯಾಗಿ ಅರಾವಳಿ ಹೆಲಿಕಾಪ್ಟರ್‌ ಇಂಜಿನ್‌ ನಿರ್ಮಾಣ

HAL ಮತ್ತು ಯುರೋಪಿನ ಸಾಫ್ರಾನ್ (Safran) ಭಾರತದಲ್ಲೇ 'ಅರಾವಳಿ' ಎಂಜಿನ್‌ಗಳನ್ನು ತಯಾರಿಸಲು ಜಂಟಿ ಉದ್ಯಮ ಸ್ಥಾಪಿಸಿವೆ. ಈ ಶಕ್ತಿಶಾಲಿ ಎಂಜಿನ್‌ಗಳು ಸೇನೆಯ ಮುಂದಿನ ಪೀಳಿಗೆಯ 13-ಟನ್ ತೂಕದ IMRH ಮತ್ತು ನೌಕಾಪಡೆಯ DBMRH ಹೆಲಿಕಾಪ್ಟರ್‌ಗಳಿಗೆ ಶಕ್ತಿ ತುಂಬಲಿವೆ.

Read Full Story
06:06 PM (IST) Aug 27

Karnataka Latest News Live 27 August 2026ಬೋನು ಸಿದ್ಧ, ಹುಲಿ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ - ತೆಂಬಾದಲ್ಲಿ ಮುಂದೇನಾಗುತ್ತೆ?

ಗಂಗಾವತಿಯ ತೆಂಬಾ ಅರಣ್ಯದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದೆ. ಇದೀಗ ಅರಣ್ಯ ಇಲಾಖೆ ಬೋನು ಇಟ್ಟು ಕಾಯುತ್ತಿದೆ. ಆಕಳಿನ ಕಳೇಬರದ ಬಳಿ ಮತ್ತೆ ಹುಲಿ ಬರುವ ನಿರೀಕ್ಷೆಯಲ್ಲಿರುವ ಅಧಿಕಾರಿಗಳು, ಇನ್ನೆರಡು-ಮೂರು ದಿನಗಳಲ್ಲಿ ಹುಲಿ ಬೋನಿಗೆ ಬೀಳಬಹುದು ಎಂದು ಅಂದಾಜಿಸಿದ್ದಾರೆ. ಅಷ್ಟಕ್ಕೂ ಹುಲಿ ಸೆರೆಯಾಗುತ್ತಾ?

Read Full Story
05:54 PM (IST) Aug 27

Karnataka Latest News Live 27 August 2026‘ನಾನು ಬರೆದಿದ್ದು ಒಂದು, ಎಡಿಟ್ ಮಾಡಿದ್ದು ಇನ್ನೊಂದು’ - Toxic ನಿರ್ದೇಶಕಿ ಹಳೆಯ ವಿಡಿಯೋ ವೈರಲ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿ ಪ್ರೇಕ್ಷಕರಿಂದ ಡಿವೈಡ್‌ಡ್ ಟಾಕ್ ಪಡೆದುಕೊಳ್ಳುತ್ತಿದೆ. ಈ ನಡುವೆ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

Read Full Story
05:41 PM (IST) Aug 27

Karnataka Latest News Live 27 August 2026Viral - ವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ ಪುಟ್ಟ ಮನಸ್ಸು! ಪೊಲೀಸ್ ಕಸ್ಟಡಿಯಿಂದ ಪ್ರೆಸ್‌ಕಾನ್ಫರೆನ್ಸ್‌ವರೆಗೆ; ದೇಶದ ಗಮನ ಸೆಳೆದ 6 ವರ್ಷದ ಆದಿತ್ಯ!

ಬಿಹಾರದ ಪಟ್ನಾದಲ್ಲಿ ನಡೆದ ಬಿಪಿಎಸ್‌ಸಿ ಪರೀಕ್ಷಾ ಅಕ್ರಮದ ವಿರುದ್ಧ ಕೇವಲ ಆರು ವರ್ಷದ ಆದಿತ್ಯ ಕುಮಾರ್ ಎಂಬ ಬಾಲಕ ಧ್ವನಿ ಎತ್ತಿದನು. ಪೊಲೀಸರಿಂದ ಬಂಧನಕ್ಕೊಳಗಾದರೂ, ಬಿಡುಗಡೆಯಾದ ನಂತರ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿ, ಭ್ರಷ್ಟ ವ್ಯವಸ್ಥೆಯ ವಿರುದ್ಧ ತನ್ನ ಹೋರಾಟದ ಮೂಲಕ ಇಡೀ ದೇಶದ ಗಮನ ಸೆಳೆದನು.
Read Full Story
05:28 PM (IST) Aug 27

Karnataka Latest News Live 27 August 2026ಕೊಲಂಬೊ ಟೆಸ್ಟ್‌ ಡ್ರಾನಲ್ಲಿ ಅಂತ್ಯ; ಶ್ರೀಲಂಕಾ ಎದುರು ಟೆಸ್ಟ್ ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ!

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಫಾಲೋ ಆನ್‌ಗೆ ಸಿಲುಕಿದ್ದ ಲಂಕಾ ಪರ ಸೋನಲ್ ದಿನುಶಾ ಅಜೇಯ ಶತಕ ಸಿಡಿಸಿ ತಂಡವನ್ನು ಸೋಲಿನಿಂದ ಪಾರುಮಾಡಿದರು. ಈ ಡ್ರಾನ ಹೊರತಾಗಿಯೂ, ಭಾರತವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.
Read Full Story