- Home
- News
- State
- Karnataka Latest News Live: ಬಿಡಿಎ ನಿರ್ಧಾರದ ವಿರುದ್ಧ ಶಿವರಾಮ ಕಾರಂತ್ ಬಡಾವಣೆ ರೈತರ ಬೇಸರ; ಅಡಿಗೆ 50 ರೂ.ಆಡಳಿತಾತ್ಮಕ ವೆಚ್ಚ
LIVE NOW
Karnataka Latest News Live: ಬಿಡಿಎ ನಿರ್ಧಾರದ ವಿರುದ್ಧ ಶಿವರಾಮ ಕಾರಂತ್ ಬಡಾವಣೆ ರೈತರ ಬೇಸರ; ಅಡಿಗೆ 50 ರೂ.ಆಡಳಿತಾತ್ಮಕ ವೆಚ್ಚ

ಸಾರಾಂಶ
ಧಾರವಾಡ: ನಾನು ಸಚಿವನಾಗಿದ್ದಾಗ ನನ್ನ ಮೇಲೆಯೂ ಆಪಾದನೆ ಬಂದಾಗ ಡಿ.ಕೆ.ಶಿವಕುಮಾರ್ ಅವರು ನನ್ನ ರಾಜೀನಾಮೆಗೆ ಪ್ರತಿಭಟಿಸಿದ್ದರು. ಈ ಹಿಂದೆ ಕೆ.ಜೆ.ಜಾರ್ಜ್ ಸಹ ರಾಜೀನಾಮೆ ನೀಡಿದ್ದು, ಸಚಿವ ನಾಗೇಂದ್ರ ವಿಷಯದಲ್ಲಿ ಏತಕ್ಕೆ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಆಪಾದನೆ ಬಂದಾಗ ಸ್ವತಃ ರಾಜೀನಾಮೆ ನೀಡಿದ್ದು, ನಂತರ ನಿಷ್ಕಳಂಕ ಎಂದು ಹೊರಗಡೆ ಬಂದಿದ್ದೇನೆ. ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಶಾಮೀಲಾಗಿರುವುದು ತನಿಖೆಯಲ್ಲಿ ಹೊರಬಂದಿದ್ದರೂ ಸಿಎಂ ಅವರ ರಾಜೀನಾಮೆ ಪಡೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
06:33 AM (IST) Aug 27
Karnataka Latest News Live 27 August 2026ಬಿಡಿಎ ನಿರ್ಧಾರದ ವಿರುದ್ಧ ಶಿವರಾಮ ಕಾರಂತ್ ಬಡಾವಣೆ ರೈತರ ಬೇಸರ; ಅಡಿಗೆ 50 ರೂ.ಆಡಳಿತಾತ್ಮಕ ವೆಚ್ಚ
ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶವನ್ನು ಕಡೆಗಣಿಸಿ ಬಿಡಿಎ ರೈತರನ್ನು ಶೇ.40ರ ಪಾಲುದಾರರಂತೆ ಪರಿಗಣಿಸದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ತಮಗಿಷ್ಟದಂತೆ ನಿವೇಶನ ಹಂಚಿಕೆ ಹಾಗೂ ಆಡಳಿತಾತ್ಮಕ ವೆಚ್ಚ ವಿಧಿಸುತ್ತಿರುವುದನ್ನು ವಿರೋಧಿಸಿರುವ ಸಂತ್ರಸ್ತರ ಸಂಘ, ಈ ವೆಚ್ಚವನ್ನು ರದ್ದುಗೊಳಿಸಿ ವಾಣಿಜ್ಯ ನಿವೇಶನಗಳಲ್ಲಿ ಶೇ.50:50ರ ಅನುಪಾತದಲ್ಲಿ ಪಾಲು ನೀಡಬೇಕೆಂದು ಆಗ್ರಹಿಸಿದೆ.
Read Full Story 06:20 AM (IST) Aug 27
Karnataka Latest News Live 27 August 2026Exclusive - CJ ರಾಯ್ ಸಾವಿಗೆ ಎರಡು ಕಾರಣ; ಮ್ಯಾಜಿಸ್ಟ್ರೇಟ್ಗೆ ಅಂತಿಮ ವರದಿ ಸಲ್ಲಿಸಲು ಸಿದ್ಧತೆ
ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮ*ಹತ್ಯೆಗೆ ಪ್ರಮುಖ ಕಾರಣ ಏನೆಂದು ಎಸ್ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ತನಿಖಾ ತಂಡವು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ಗೆ ಅಂತಿಮ ವರದಿ ಸಲ್ಲಿಸಲಿದೆ. ಇನ್ನೆರಡು ದಿನದಲ್ಲಿ ಮ್ಯಾಜಿಸ್ಟ್ರೇಟ್ಗೆ ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿದು ಬಂದಿದೆ.