11:42 PM (IST) Jul 29

India Latest News Live 29 July 2026ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?

ಟಾಲಿವುಡ್‌ನ ಸ್ಟಾರ್ ನಿರ್ದೇಶಕ ರಾಜಮೌಳಿ ಸಿನಿಮಾಗಳು ನೂರಾರು, ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಇಂತಹ ಬೃಹತ್ ಚಿತ್ರಗಳನ್ನು ಮಾಡುವ ಜಕ್ಕಣ್ಣ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?

Read Full Story
10:51 PM (IST) Jul 29

India Latest News Live 29 July 2026ಪವನ್ ಕಲ್ಯಾಣ್ ಪತ್ನಿ ಹೆಸರು ಬದಲಾವಣೆ.. ಅನ್ನಾ ಲೆಝ್ನೋವಾ ಹೊಸ ಹೆಸರೇನು ಗೊತ್ತಾ?

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಝ್ನೋವಾ ಅಂತಾನೇ ಎಲ್ಲರಿಗೂ ಗೊತ್ತು. ಆದರೆ, ಅವರು ಈಗ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ಹೊಸ ಹೆಸರೇನು ಅಂತ ತಿಳಿದುಕೊಳ್ಳೋಣ ಬನ್ನಿ.

Read Full Story
10:28 PM (IST) Jul 29

India Latest News Live 29 July 2026ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ - ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನೀಟ್ ಪತ್ರಿಕೆ ಸೋರಿಕೆ ಚರ್ಚೆಯ ವೇಳೆ ಸಂಸತ್ತಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಗಂಭೀರ ಭದ್ರತಾ ವಿಷಯಗಳಿದ್ದಾಗ ಮಾತ್ರ ಕಾಣಿಸಿಕೊಳ್ಳುವ ದೋವಲ್ ಅವರ ಈ ಭೇಟಿಯು, ನೀಟ್ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡದಂತಹ ರಾಷ್ಟ್ರೀಯ ಭದ್ರತೆಯ ಆಯಾಮವಿರಬಹುದೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
Read Full Story
10:11 PM (IST) Jul 29

India Latest News Live 29 July 2026ಟ್ರಕ್‌, ಬಸ್‌ ವಿಭಾಗವನ್ನು 525 ಕೋಟಿಗೆ ಮಾರಾಟ ಮಾಡಲಿರುವ ಮಹೀಂದ್ರಾ & ಮಹೀಂದ್ರಾ!

ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವಿಭಾಗವನ್ನು ₹525 ಕೋಟಿಗೆ 'ಎಸ್‌ಎಮ್‌ಎಲ್‌ ಮಹೀಂದ್ರಾ'ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಬೃಹತ್ ಪುನರ್ರಚನೆಯು ಕಂಪನಿಯ ವಾಣಿಜ್ಯ ವಾಹನಗಳ ಉದ್ಯಮವನ್ನು ಒಂದೇ ಸೂರಿನಡಿ ತಂದು, ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ.

Read Full Story
08:47 PM (IST) Jul 29

India Latest News Live 29 July 2026ಹಿಂದೂ ಆಗಿ ಹುಟ್ಟಿ, ಕ್ರಿಶ್ಚಿಯನ್ ಆಗಿ, ಪ್ರೀತಿಗಾಗಿ ಇಸ್ಲಾಂಗೆ ಮತಾಂತರವಾದ ಈ ನಟಿ ಯಾರು ಗೊತ್ತೇ!

ತನ್ನ ವಿವಾದಾತ್ಮಕ ವೈಯಕ್ತಿಕ ಜೀವನದಿಂದಲೇ ಸದಾ ಸುದ್ದಿಯಲ್ಲಿರುವ ಈ ನಟಿ, ಹಲವು ಬಾರಿ ಧರ್ಮ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ, ನಂತರ ಇಸ್ಲಾಂಗೆ ಮತಾಂತರಗೊಂಡರು.

Read Full Story
08:18 PM (IST) Jul 29

India Latest News Live 29 July 2026ಅಮೆರಿಕದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಗುಜರಾತ್​ ಸುಂದರಿಗೆ Mrs. Earth Elite ಕಿರೀಟ - ಯಾರೀಕೆ

ಗುಜರಾತ್​ನ ಭೂಮಿಕಾ ಶಜ್ವಾನಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 'ಮಿಸೆಸ್ ಅರ್ಥ್ ಎಲೈಟ್ 2026' ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದಿದ್ದಾರೆ. ಈ ಗೆಲುವು ಸೌಂದರ್ಯದ ಜೊತೆಗೆ ಆತ್ಮವಿಶ್ವಾಸ, ನಾಯಕತ್ವ ಹಾಗೂ ಮಹಿಳಾ ಸಬಲೀಕರಣದಂತಹ ಜವಾಬ್ದಾರಿಯ ಮಹತ್ವ ಸಾರುತ್ತದೆ.

Read Full Story
07:45 PM (IST) Jul 29

India Latest News Live 29 July 2026ಪ್ರಪೋಸಲ್ಸ್‌ ಬರ್ತಿದ್ರೂ ಜಿರಳೆ ದೀಪ್ಕೆ ಇನ್ನೂ ಮದ್ವೆಯಾಕಾಗಿಲ್ಲ? ಶಾಕಿಂಗ್‌ ಸತ್ಯ ರಿವೀಲ್‌ ಮಾಡಿದ ಅಮ್ಮ

'ಕಾಕ್ರೋಚ್‌ ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್‌ ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?

Read Full Story
06:01 PM (IST) Jul 29

India Latest News Live 29 July 2026'ನೀಲಿ ಬಣ್ಣದ್ದು ಟಾಯ್ಲೆಟ್‌ಗೆ...' - RAF ಯುನಿಫಾರ್ಮ್‌ ಬಣ್ಣ ಅಪಹಾಸ್ಯ ಮಾಡಿದ್ದ CJP ಇನ್‌ಫ್ಲುಯೆನ್ಸರ್‌ ಶ್ರದ್ಧಾ ಸಿಂಗ್‌ ಫುಲ್‌ ಟ್ರೋಲ್‌!

ಇನ್‌ಫ್ಲುಯೆನ್ಸರ್ ಶ್ರದ್ಧಾ ಸಿಂಗ್, RAF ಯೋಧರ ನೀಲಿ ಸಮವಸ್ತ್ರವನ್ನು ಲೇವಡಿ ಮಾಡಿದ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ವೀಡಿಯೋ ವೈರಲ್ ಆಗಿ ತೀವ್ರ ಟ್ರೋಲಿಂಗ್ ಎದುರಿಸಿದ ಅವರು, ತಮ್ಮ ತಪ್ಪಿನ ಅರಿವಾಗಿ ವೀಡಿಯೋ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕಡಿಮೆಯಾಗಿಲ್ಲ.

Read Full Story
04:43 PM (IST) Jul 29

India Latest News Live 29 July 2026ಅಲ್ಲು ಅರ್ಜುನ್‌ಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ಗೌರವದ ಶ್ರೀರಕ್ಷೆ!

ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ನಟ ಅಲ್ಲು ಅರ್ಜುನ್‌ ಅವರಿಗಿಘ ಶ್ರೀಗಳ ಶ್ರೀರಕ್ಷೆ ಸಿಕ್ಕಿದೆ.

Read Full Story
04:20 PM (IST) Jul 29

India Latest News Live 29 July 2026ODI ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಶುಭ್‌ಮನ್ ಗಿಲ್! ಟಿ20ಯಲ್ಲಿ 230 ಸ್ಥಾನ ಜಿಗಿದ ವೈಭವ್ ಸೂರ್ಯವಂಶಿ

ನೂತನ ಐಸಿಸಿ ರ್‍ಯಾಂಕಿಂಗ್‌ನಲ್ಲಿ, ಭಾರತದ ನಾಯಕ ಶುಭ್‌ಮನ್ ಗಿಲ್ ಏಕದಿನ ಬ್ಯಾಟಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಮಿಂಚಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಟಿ20 ರ್‍ಯಾಂಕಿಂಗ್‌ನಲ್ಲಿ 230 ಸ್ಥಾನಗಳ ಭರ್ಜರಿ ಜಿಗಿತ ಕಂಡಿದ್ದಾರೆ. ತಿಲಕ್ ವರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೂಡ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ.
Read Full Story
03:55 PM (IST) Jul 29

India Latest News Live 29 July 2026HCL ಟೆಕ್ ವಾರ್ಷಿಕೋತ್ಸವದಲ್ಲಿ CEO ವೇದಿಕೆ ಏರುತ್ತಿದ್ದಂತೆಯೇ ಮುಜುಗರ, ಸಂಭ್ರಮದ ಮಧ್ಯೆ ನೌಕರರ ಪ್ರತಿಭಟನೆ, ವಿಡಿಯೋ ವೈರಲ್!

ಎಚ್‌ಸಿಎಲ್ ಟೆಕ್ನಾಲಜೀಸ್‌ನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ, ಸಿಇಒ ಸಿ. ವಿಜಯಕುಮಾರ್ ವೇದಿಕೆಗೆ ಬರುತ್ತಿದ್ದಂತೆ ನೂರಾರು ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಈ ಅನಿರೀಕ್ಷಿತ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಟಿ ವಲಯದಲ್ಲಿನ ವೇತನದ ಕುರಿತ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
03:53 PM (IST) Jul 29

India Latest News Live 29 July 202610 ವರ್ಷ ಜೈಲು 10 ಕೋಟಿ ರೂ ದಂಡ, ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್

ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಮಂಡಿಸಿದ ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ. ವಿಪಕ್ಷಗಳ ಭಾರಿ ಗದ್ದಲದ ನಡುವೆ ಧ್ವನಿಮತದ ಮೂಲಕ ಬಿಲ್ ಪಾಸ್ ಮಾಡಲಾಗಿದೆ.

Read Full Story
03:26 PM (IST) Jul 29

India Latest News Live 29 July 2026ಕಾರಣವಿಲ್ಲದೆ ಉದ್ಯೋಗಿಯ ಹಠಾತ್ ವಜಾ, ಸೋತ ಕಂಪೆನಿಯಿಂದ ಗೆದ್ದ ಮಹಿಳೆಗೆ 19 ಲಕ್ಷ ರೂ. ಗರಿಷ್ಠ ಪರಿಹಾರ!

ಸಿಂಗಾಪುರದಲ್ಲಿ, ಪ್ರೊಬೇಷನ್ ಅವಧಿ ಮುಗಿದ ನಂತರ ಮಹಿಳಾ ಅಧಿಕಾರಿಯೊಬ್ಬರನ್ನು ಅನ್ಯಾಯವಾಗಿ ವಜಾಗೊಳಿಸಿದ ಕಂಪನಿಗೆ ಉದ್ಯೋಗ ಹಕ್ಕು ನ್ಯಾಯಮಂಡಳಿ ದಂಡ ವಿಧಿಸಿದೆ. ಉದ್ಯೋಗಿಯ ಕಳಪೆ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಲು ವಿಫಲವಾದ ಕಂಪನಿಗೆ, ಸಂತ್ರಸ್ತೆಗೆ ಸುಮಾರು 19 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
Read Full Story
03:17 PM (IST) Jul 29

India Latest News Live 29 July 2026ಪ್ರತಿದಿನ ಕಣ್ಣಿಗೆ ಮೇಕಪ್ ಮಾಡಿಕೊಳ್ಳೋದ್ರಿಂದ ಅಪಾಯ ಗ್ಯಾರಂಟಿ! ವೈದ್ಯರು ಹೇಳೋದೇನು?

ಪ್ರತಿದಿನ ಕಣ್ಣಿನ ಮೇಕಪ್ ಮಾಡುವುದರಿಂದ 'ಮೈಬೋಮಿಯನ್' ಗ್ರಂಥಿಗಳು ಬ್ಲಾಕ್ ಆಗಿ ಕಣ್ಣುಗಳು ಒಣಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಉತ್ತಮ ಗುಣಮಟ್ಟದ ಉತ್ಪನ್ನಗಳ ಬಳಕೆ, ಮಲಗುವ ಮುನ್ನ ಮೇಕಪ್ ತೆಗೆಯುವುದು ಮತ್ತು ಮೇಕಪ್ ಬ್ರಷ್‌ಗಳನ್ನು ಸ್ವಚ್ಛವಾಗಿಡುವುದು ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ.
Read Full Story
01:37 PM (IST) Jul 29

India Latest News Live 29 July 2026ಜಸ್ಪ್ರೀತ್ ಬುಮ್ರಾ ಕಡೆಗಣಿಸಿ, ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಆಯ್ಕೆಯ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ನಾಲ್ವರು ಸ್ಪಿನ್ನರ್‌ಗಳನ್ನು ಒಳಗೊಂಡಿರುವ ಈ ತಂಡದಲ್ಲಿ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
Read Full Story
01:28 PM (IST) Jul 29

India Latest News Live 29 July 2026Gaumutra Jibe ಐಐಟಿ ನಿರ್ದೇಶಕನಿಗೆ ಗೋಮೂತ್ರ ತಜ್ಞ ಎಂದು ಪೇಚಿಗೆ ಸಿಲುಕಿದ ಪ್ರಿಯಾಂಕಾ ಗಾಂಧಿ, ಏನಿದು ಜಟಾಪಟಿ

ಪರೀಕ್ಷಾ ಸುಧಾರಣೆಗೆ ಕೇಂದ್ರ ಸರ್ಕಾರ ರಚಿಸಿದ ಹೈಪವರ್ ಟಾಸ್ಕ್ ಫೋರ್ಸ್‌ನಲ್ಲಿರುವ ಐಐಟಿ ಮಡ್ರಾಸ್ ನಿರ್ದೇಶಕ ವಿ ಕಾಮಕೋಟಿ ಸದಸ್ಯರಾಗಿದ್ದಾರೆ. ಇದೇ ಕಾಮಕೋಟಿ ವಿರುದ್ದ ಪ್ರಿಯಾಂಕಾ ಗಾಂಧಿ ನಾಲಗೆ ಹರಿಬಿಟ್ಟಿದ್ದಾರೆ. ವಿ ಕಾಮಕೋಟಿ ಸಾಧನೆಗಳೇನು?

Read Full Story
12:45 PM (IST) Jul 29

India Latest News Live 29 July 2026ಬಿಲ್ಕಿಸ್ ಬಾನು ಕೇಸ್ - ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಹೇಳಿಕೆಗೆ ಕಾಂಗ್ರೆಸ್ ಬೆಂಬಲ, ಲೋಕಸಭೆಯಲ್ಲಿ ಗದ್ದಲ

ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ. ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಸಮರ್ಥನೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪ್ರಿಯಾಂಕಾ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಕ್ಷಮೆ ಕೇಳಬೇಕು ಎಂದು ಜೋಷಿ, ರಿಜಿಜು ಆಗ್ರಹಿಸಿದ್ದಾರೆ.

Read Full Story
12:42 PM (IST) Jul 29

India Latest News Live 29 July 2026ರಜತ್ ಪಾಟೀದಾರ್‌ ಜತೆ ಈತನ ಹೋಲಿಕೆ ಸಾಧ್ಯವೇಯಿಲ್ಲ; ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗನ ಖಡಕ್ ಮಾತು!

ಮಾಜಿ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್, ಭಾರತ ಟಿ20 ತಂಡಕ್ಕೆ ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ತಿಲಕ್ ವರ್ಮಾ ಅವರ ಸ್ಥಿರತೆಯ ಬಗ್ಗೆ ಪ್ರಶ್ನಿಸಿರುವ ಅವರು, ಪಾಟೀದಾರ್ ಅವರ ನಾಯಕತ್ವ ಮತ್ತು ಸ್ಪೋಟಕ ಬ್ಯಾಟಿಂಗ್ ಅನ್ನು ಉಲ್ಲೇಖಿಸಿ ಅವಕಾಶ ನೀಡಲು ಆಗ್ರಹಿಸಿದ್ದಾರೆ.
Read Full Story
12:41 PM (IST) Jul 29

India Latest News Live 29 July 2026ಒಬ್ಬರಿಗೆ ಒಂದು ಕಾರು ಮಾತ್ರ ಹೆಚ್ಚುವರಿ ವಾಹನ ಬಳಕೆಗೆ ಬ್ರೇಕ್, ಕೇಂದ್ರದಿಂದ ಹೊಸ ನೀತಿ ಜಾರಿ

ಒಬ್ಬರಿಗೆ ಒಂದು ಕಾರು ಮಾತ್ರ ಬಳಕೆ. ಕೇಂದ್ರ ಸರ್ಕಾರ ದಿಢೀರ್ ಹೊಸ ನೀತಿಯನ್ನು ಜಾರಿಗೆ ತಂದಿದೆ.ಹಿರಿಯ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಹೆಚ್ಚುವರಿ ವಾಹನ ಬಳಕೆಗೆ ಕೇಂದ್ರ ಸರ್ಕಾರ ತಡೆ ಹಾಕಿದೆ. ಏನಿದು ಹೊಸ ನಿಯಮ?

Read Full Story
12:30 PM (IST) Jul 29

India Latest News Live 29 July 2026ಸಾಲದ ಸುಳಿಯಲ್ಲಿದ್ದ ದಂಪತಿ ಬದುಕನ್ನೇ ಬದಲಿಸಿದ ಮೆಟ್ಟಿಲ ಕೆಳಗಿನ ಹಳೆ ಬಣ್ಣದ ಡಬ್ಬ

ಆರ್ಥಿಕ ಸಂಕಷ್ಟದಲ್ಲಿದ್ದ ಬ್ರಿಟನ್ ಮೂಲದ ದಂಪತಿಗೆ ತಮ್ಮ ಹಳೆಯ ಮನೆಯ ಮೆಟ್ಟಿಲುಗಳ ಕೆಳಗೆ ನಿಧಿಯೊಂದು ಪತ್ತೆಯಾಗಿದೆ. 1970ರ ದಶಕದ ಬ್ರಿಟಿಷ್ ಕರೆನ್ಸಿಗಳಿದ್ದ ಪೇಂಟ್ ಡಬ್ಬವು ಸಿಕ್ಕಿದ್ದು, ಈ ಹಣದಿಂದ ದಂಪತಿ ತಮ್ಮ ಸಾಲವನ್ನು ತೀರಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.
Read Full Story