ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ. ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಸಮರ್ಥನೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪ್ರಿಯಾಂಕಾ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಕ್ಷಮೆ ಕೇಳಬೇಕು ಎಂದು ಜೋಷಿ, ರಿಜಿಜು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಅವರು ಬುಧವಾರ ಪಕ್ಷದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಿಂದೆ ನೀಡಿದ್ದ ಹೇಳಿಕೆಗಳಿಂದ ಅವರು ನುಣುಚಿಕೊಳ್ಳಬಾರದು ಎಂದು ಔಜ್ಲಾ ಟೀಕಿಸಿದರು.
ಬಿಲ್ಕಿಸ್ ಬಾನು ಅತ್ಯಾ೧ಚಾರಿಗಳಿಗೆ ಜೋಶಿ ಸನ್ಮಾನ?
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಔಜ್ಲಾ, ಬಿಲ್ಕಿಸ್ ಬಾನು ಅತ್ಯಾ೧ಚಾರಿಗಳಿಗೆ ಸನ್ಮಾನ ಮಾಡಿದ ಬಗ್ಗೆ ಪ್ರಹ್ಲಾದ್ ಜೋಶಿ ಒಂದು ಮಾತನ್ನೂ ಆಡಿಲ್ಲ, ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಪ್ರಹ್ಲಾದ್ ಜೋಶಿ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ನಿಜವೋ ಅಲ್ಲವೋ ಎಂಬುದನ್ನು ಮೊದಲು ಅವರೇ ಸ್ಪಷ್ಟಪಡಿಸಬೇಕು. ಈ ವಿಚಾರವನ್ನು ಸದನದಲ್ಲಿ ಎತ್ತಿದಾಗ ಅವರಿಗೆ ಮುಜುಗರವಾಗುತ್ತದೆ. ಇದರಿಂದ ನೀವು ನುಣುಚಿಕೊಳ್ಳಲು ಯತ್ನಿಸಬೇಡಿ ಬಿಲ್ಕಿಸ್ ಬಾನು ಅತ್ಯಾ೧ಚಾರಿಗಳನ್ನು ಅವರು ಸನ್ಮಾನಿಸಿದ್ದು ಎಲ್ಲರಿಗೂ ಗೊತ್ತು. ಇಂಥವರ ಕೈಗೆ ಶಿಕ್ಷಣ ಸಚಿವಾಲಯ ಕೊಟ್ಟರೆ ಇಡೀ ದೇಶಕ್ಕೆ ಯಾವ ಸಂದೇಶ ಹೋಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ತೀವ್ರ ಗದ್ದಲ
ಇದಕ್ಕೂ ಮುನ್ನ ನೀಟ್ ಪರೀಕ್ಷಾ ಅಕ್ರಮಗಳು, ಹೊಣೆಗಾರಿಕೆ ವಿಚಾರವಾಗಿ ಸರ್ಕಾರವನ್ನು ಗುರಿಯಾಗಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಹೊಸದಾಗಿ ಕೇಂದ್ರ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಶಿ ವಿರುದ್ಧ ಬಿಲ್ಕಿಸ್ ಬಾನು ಅಪರಾಧಿಗಳ ವಿಚಾರವಾಗಿ ಟೀಕೆ ಮಾಡಲಾರಂಭಿಸಿದರು. ಪ್ರಿಯಾಂಕಾರ ಈ ಹೇಳಿಕೆಗಳು ಲೋಕಸಭೆಯಲ್ಲಿ ತೀವ್ರ ಮಾತಿನ ಚಕಮಕಿಗೆ ಕಾರಣವಾದವು.
ಪ್ರಿಯಾಂಕಾ ಆರೋಪಕ್ಕೆ ಜೋಶಿ ಕಿಡಿ
ಪ್ರಿಯಾಂಕಾ ಅವರು ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ ಮತ್ತು ಶಿಕ್ಷಣ ಸಚಿವರ ವಿರುದ್ಧ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕಿರಣ್ ರಿಜಿಜು ಆರೋಪಿಸಿದರು. ಪ್ರಿಯಾಂಕಾ ಜಿ ಅವರು ತಮ್ಮ ಹೇಳಿಕೆಗಳನ್ನು ವೆರಿಫಿ ಮಾಡಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದ ಈ ಆರೋಪ. ಯಾರು ಬೇಕಾದರೂ ಏನು ಬೇಕಾದರೂ ಹೇಳಿ ತಪ್ಪಿಸಿಕೊಳ್ಳಬಹುದೇ? ಈ ಆರೋಪಗಳನ್ನು ನಾನು ಅಲ್ಲಗಳೆಯುತ್ತೇನೆ. ಅವರನ್ನು ಉಚ್ಚಾಟಿಸಬೇಕು, ಇಲ್ಲವೇ ಅವರ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡುತ್ತಿದ್ದಾಗ ಅವರ ಕಡೆಯಿಂದಲೂ ಅಡ್ಡಿಪಡಿಸಲಾಯಿತು, ನಮ್ಮ ಕಡೆಯಿಂದಲೂ ಅಡ್ಡಿಪಡಿಸಲಾಯಿತು. ಆದರೆ ನಾವು ಶಾಂತವಾಗಿ ಕೇಳುತ್ತಿದ್ದೆವು. ಆದರೆ ಈಗ ನಮ್ಮ ಶಿಕ್ಷಣ ಸಚಿವರ ಬಗ್ಗೆ ಅವರು ಮಾಡಿದ ಟೀಕೆಗಳು ಸಂಸತ್ತಿನಲ್ಲಿ ಚಾರಿತ್ರ್ಯ ವಧೆ ಮಾಡಿದಂತೆ. ಇಂತಹ ಭಾಷೆಯನ್ನು ನಾವು ನಿರೀಕ್ಷಿಸುವುದಿಲ್ಲ ಎಂದು ರಿಜಿಜು ಹೇಳಿದರು.
ಮಕ್ಕಳಂತೆ ವರ್ತಿಸುತ್ತಿದ್ದಾರೆ: ಪ್ರತಿಪಕ್ಷ ನಾಯಕರ ಕಿಡಿ
ಈ ಘಟನೆಯ ನಂತರ ಹಲವು ವಿರೋಧ ಪಕ್ಷದ ನಾಯಕರು ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ. ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಅವರು, ಕಿರಣ್ ರಿಜಿಜು ಮತ್ತು ಪ್ರಹ್ಲಾದ್ ಜೋಶಿ ಅವರು ಮಕ್ಕಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಕೀಯ ವಿಚಾರಗಳನ್ನು ರಾಜಕೀಯವಾಗಿಯೇ ಎದುರಿಸಬೇಕು, ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದರೆ ಅದನ್ನು ಎದುರಿಸಬೇಕಷ್ಟೇ ಎಂದಿದ್ದಾರೆ. 'ಇದು ಸತ್ಯಾಂಶಗಳ ಆಧಾರದ ಮೇಲೆ ಮಾಡಿದ ರಾಜಕೀಯ ಹೇಳಿಕೆ. ಸಂಸತ್ತಿನಲ್ಲಿ ಮಾತನಾಡಿದವರ ವಿರುದ್ಧ ದೂರು ದಾಖಲಿಸುವುದರಲ್ಲಿ ಅರ್ಥವಿಲ್ಲ. ನೀವು ರಾಜಕೀಯವಾಗಿ ಸಮರ್ಥಿಸಿಕೊಳ್ಳಬೇಕು. ಆದರೆ ಅವರು ಮಕ್ಕಳಂತೆ ಅಳಲು ಶುರುಮಾಡಿದರು. ಒಂದು ವೇಳೆ ಅದು ಸತ್ಯಕ್ಕೆ ದೂರವಾಗಿದ್ದರೆ, ತಪ್ಪು ಮಾಹಿತಿಯಾಗಿದ್ದರೆ ಅದನ್ನು ಎದುರಿಸಲಿ' ಎಂದು ಕುಮಾರ್ ANIಗೆ ತಿಳಿಸಿದ್ದಾರೆ.
ಜೆಎಂಎಂ ಸಂಸದೆ ಮಹುವಾ, ಸಂಸತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವೇದಿಕೆಯಾಗಿದೆ. ಇಂತಹ ಹೇಳಿಕೆಗಳನ್ನು ಸಂಸತ್ತಿನಲ್ಲಿ ಹೇಗೆ ಪರಿಗಣಿಸಬೇಕು ಎಂಬುದು ಸಭಾಪತಿಯ ವಿವೇಚನೆಗೆ ಬಿಟ್ಟದ್ದು ಎಂದು ಅವರು ಸೇರಿಸಿದರು. 'ಸಂಸತ್ತು ದೇಶದ ಹಿತದೃಷ್ಟಿಯಿಂದ ತಮ್ಮ ಅಭಿಪ್ರಾಯಗಳನ್ನು ಮುಂದಿಡುವ ಸ್ಥಳ. ಅದರಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಆಡಳಿತ ಪಕ್ಷದವರು ಹೇಳುವ ಮಾತುಗಳು ವಿರೋಧ ಪಕ್ಷದವರಿಗೆ ನೋವುಂಟುಮಾಡುತ್ತವೆ ಮತ್ತು ಕೆಲವೊಮ್ಮೆ ವಿರೋಧ ಪಕ್ಷದವರ ಹೇಳಿಕೆಗಳು ಆಡಳಿತ ಪಕ್ಷದವರಿಗೆ ತಪ್ಪಾಗಿ ಕಾಣಿಸುತ್ತವೆ. ಈ ಹೇಳಿಕೆಗಳನ್ನು ನಮ್ಮ ಸಭಾಪತಿಗಳು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಅವರ ವಿವೇಚನೆಗೆ ಬಿಟ್ಟದ್ದು ಎಂದರು.
(ಈ ಸುದ್ದಿಯ ಹೆಡ್ಲೈನ್ ಹೊರತುಪಡಿಸಿ, ಉಳಿದಂತೆ ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್ನಿಂದ ಪ್ರಕಟಿಸಲಾಗಿದೆ.)


