- Home
- News
- India News
- India Latest News Live: FIFA World Cup 2026 - ಮೆಸ್ಸಿ, ಎಂಬಾಪೆ, ಹಾಲ್ಯಾಂಡ್ ಗೋಲಿನಬ್ಬರ! ಹೊಸ ದಾಖಲೆ ಬರೆದ ಮೆಸ್ಸಿ
India Latest News Live: FIFA World Cup 2026 - ಮೆಸ್ಸಿ, ಎಂಬಾಪೆ, ಹಾಲ್ಯಾಂಡ್ ಗೋಲಿನಬ್ಬರ! ಹೊಸ ದಾಖಲೆ ಬರೆದ ಮೆಸ್ಸಿ

ನವದೆಹಲಿ: ಮದುರೈನ ತಿರುಪ್ಪರಕುಂದ್ರಂ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಹಿಂದಿನಿಂದಲೂ ಆಚರಣೆಯಲ್ಲಿರುವ ಪದ್ಧತಿ ಮುಂದುವರೆಸಲು ಹಿಂದಿನ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂಗಳ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿತ್ತು. ಬಳಿಕ ದ್ವಿಸದಸ್ಯ ಪೀಠ ಕೂಡಾ, ದೀಪಸ್ತಂಭ ಇರುವ ಜಾಗ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಸೇರಿದ್ದು, ಈ ಜಾಗಕ್ಕೂ ವಕ್ಫ್ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಹೀಗಿರುವ ಜ್ಯೋತಿ ಬೆಳಗಲು ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎಂಬ ಡಿಎಂಕೆ ಸರ್ಕಾರದ ವಾದ ಕಪೋಲಕಲ್ಪಿತ ಎಂದು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಕೂಡಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.