- Home
- News
- India News
- India Latest News Live: ಸಿಎಂ ವಿಜಯ್ ನಿತ್ಯ 20 ಗಂಟೆ ಹೇಗೆ ಕೆಲಸ ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಸಚಿವ ಆಧವ್
LIVE NOW
India Latest News Live: ಸಿಎಂ ವಿಜಯ್ ನಿತ್ಯ 20 ಗಂಟೆ ಹೇಗೆ ಕೆಲಸ ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಸಚಿವ ಆಧವ್

ಸಾರಾಂಶ
ನವದೆಹಲಿ: ಕೋವಿಡ್ ವೇಳೆ ಸೃಷ್ಟಿಸಲಾಗಿದ್ದ ಹಾಗೂ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಪಿಎಂ ಕೇರ್ಸ್ ನಿಧಿಗೆ 2023-24 ಮತ್ತು 2024-25ರಲ್ಲಿ ದೇಶ-ವಿದೇಶಗಳಲ್ಲಿ 1,162.92 ಕೋಟಿ ರು. ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 16.47 ಕೋಟಿ ರು. ಖರ್ಚು ಮಾಡಿದೆ ಎಂದು ಆಡಿಟ್ ವರದಿಗಳು ತಿಳಿಸಿವೆ. 2024-25ರಲ್ಲಿ ಈ ನಿಧಿಯು 479.97 ಕೋಟಿ ರು. ದೇಣಿಗೆ ಸಂಗ್ರಹಿಸಿತ್ತು, ಆದರೆ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇವಲ 87.85 ಲಕ್ಷ ರು. ಖರ್ಚು ಮಾಡಿದೆ. 2023-24ರಲ್ಲಿ 682.94 ಕೋಟಿ ರು. ಸಂಗ್ರಹಿಸಿ 15.59 ಕೋಟಿ ರು. ಖರ್ಚು ಮಾಡಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾರ್ಚ್ 31, 2025ಕ್ಕೆ ಮುಗಿದ ವಿತ್ತ ವರ್ಷದಲ್ಲಿ, ನಿಧಿಯ ಖಾತೆಗಳಲ್ಲಿ 8,452.06 ಕೋಟಿ ರು. ಇದೆ. ಇದರಲ್ಲಿ 7,846.65 ಕೋಟಿ ಸ್ಥಿರ ಠೇವಣಿಗಳಲ್ಲಿದೆ. ಒಟ್ಟಾರೆ, ಈ ನಿಧಿಯು 2020ರ ಮಾರ್ಚ್ನಲ್ಲಿ ಆರಂಭವಾದಾಗಿನಿಂದ 14,766.95 ಕೋಟಿ ರು. ದೇಣಿಗೆ ಸಂಗ್ರಹಿಸಿದೆ ಮತ್ತು 2024-25 ರವರೆಗೆ 8,133.29 ಕೋಟಿ ರು. ಖರ್ಚು ಮಾಡಿದೆ.
06:00 AM (IST) Aug 19
India Latest News Live 19 August 2026ಸಿಎಂ ವಿಜಯ್ ನಿತ್ಯ 20 ಗಂಟೆ ಹೇಗೆ ಕೆಲಸ ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಸಚಿವ ಆಧವ್
ತಮಿಳುನಾಡು ಸಿಎಂ ವಿಜಯ್ ನಿತ್ಯ 20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಸಚಿವ ಆಧವ್ ಅರ್ಜುನ್ ಅವರ ಕಾರ್ಯವೈಖರಿಯ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ, ವಿಜಯ್ ಅವರ ಹೊಸ ಕಚೇರಿ ನಿರ್ಮಾಣದ ಟೆಂಡರ್ನಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಆರೋಪ ಮತ್ತು ಅದಕ್ಕೆ ಟಿವಿಕೆ ನೀಡಿರುವ ಸ್ಪಷ್ಟನೆಯನ್ನು ಈ ಲೇಖನ ಒಳಗೊಂಡಿದೆ.
Read Full Story 05:41 AM (IST) Aug 19
India Latest News Live 19 August 2026ಜಾರ್ಖಂಡ್ ಪರೀಕ್ಷಾ ರದ್ದತಿ ಬೆನ್ನಲ್ಲೇ 2000 ನೌಕರರಿಗೆ ಸಂಕಷ್ಟ; ಸಚಿವಾಲಯದ ಎದುರು ತೀವ್ರ ಪ್ರತಿಭಟನೆ
ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (ಜೆಎಸ್ಎಸ್ಸಿ-ಸಿಜಿಎಲ್) ಪರೀಕ್ಷೆಯಲ್ಲಿನ ಅಕ್ರಮದ ಆರೋಪದಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ, ಈಗಾಗಲೇ ಉದ್ಯೋಗದಲ್ಲಿದ್ದ ಸುಮಾರು 2,000 ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸಚಿವಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story 05:36 AM (IST) Aug 19
India Latest News Live 19 August 2026NTA ಸುಧಾರಣೆಗೆ ಕ್ರಮ - 600 ತಜ್ಞರಿಗೆ ಕೊಕ್, 4 ಸ್ತರದ ಪ್ರಶ್ನೆಪತ್ರಿಕೆ ಪರಿಶೀಲನೆ ಜಾರಿ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್ಟಿಎ) ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ. ಪ್ರಶ್ನೆಪತ್ರಿಕೆ ಪರಿಶೀಲನೆಗೆ 4 ಹಂತದ ವ್ಯವಸ್ಥೆ, 600 ಹಳೆಯ ತಜ್ಞರ ಬದಲಾವಣೆ ಮತ್ತು ಎನ್ಟಿಎ ಕಚೇರಿಗಳಿಗೆ ಸಿಐಎಸ್ಎಫ್ ಭದ್ರತೆ ಒದಗಿಸುವಂತಹ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
Read Full Story