Asianet Suvarna News Asianet Suvarna News

ಉಡುಪಿ: ಡಿಕೆಶಿಗೆ 'ಖಡ್ಸಲೆ' ನೀಡಿದ್ದಕ್ಕೆ ಸ್ಥಳೀಯರ ಆಕ್ರೋಶ, ಟ್ರೋಲ್ ಆಯ್ತು ಫೋಟೋ..!

ಡಿಕೆಶಿ ಉಡುಪಿ ಜಿಲ್ಲಾ ಪ್ರವಾಸಕ್ಕೆ ತೆರಳಿದ್ದರು. ಆಗ ಸ್ಥಳೀಯ ನಾಯಕರು 'ಖಡ್ಸಲೆ' ಯನ್ನು ಕಾಣಿಕೆಯಾಗಿ ನೀಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಉಡುಪಿ (ಜು. 09): ಜಿಲ್ಲಾ ಪ್ರವಾಸಕ್ಕೆ ತೆರಳಿದ್ದರು. ಆಗ ಸ್ಥಳೀಯ ನಾಯಕರು 'ಖಡ್ಸಲೆ' ಯನ್ನು ಕಾಣಿಕೆಯಾಗಿ ನೀಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ದೈವಾರಾದನೆಯ ಖಡ್ಸಲೆಯನ್ನು ಕೊಟ್ಟಿದ್ದು ಎಷ್ಟರಮಟ್ಟಿಗೆ ಸರಿ..? ದೈವಾರಾದನೆಯನ್ನು ಅಪಹಾಸ್ಯ ಮಾಡಬೇಡಿ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಡಿಕೆಶಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ, ಟ್ರೋಲ್ ಆಗಿದೆ. ಇದಕ್ಕೆ ಕೈ ನಾಯಕರು ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿ ನಾಯಕರ ಫೋಟೋವನ್ನು ವೈರಲ್ ಮಾಡಿದ್ಧಾರೆ.