Asianet Suvarna News Asianet Suvarna News

ಬಜೆಟ್‌ ಮಂಡನೆಗೆ ಸಿಎಂ ಸಜ್ಜು: ಸಿದ್ದರಾಮಯ್ಯ ಎದುರು ಪಂಚ ಗ್ಯಾರಂಟಿ ಸವಾಲು !

ಸಿಎಂ ಸಿದ್ದರಾಮಯ್ಯ ಇಂದು ತಮ್ಮ 14ನೇ ಬಜೆಟ್‌ ಮಂಡಿಸಲಿದ್ದಾರೆ. ಗ್ಯಾರಂಟಿಗಳ ನಡುವೆ ಬಜೆಟ್ ಸಿದ್ಧಪಡಿಸುವುದು ಸಿಎಂ ಸಿದ್ದರಾಮ್ಯಯ ಅವರಿಗೆ ಸವಾಲಿನ ಕಾರ್ಯವಾಗಿದೆ.
 

ಇಂದು ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಅವರ 14ನೇ ಬಜೆಟ್‌ ಇದಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ 7ನೇ ಬಾರಿಗೆ ಬಜೆಟ್ (Budget)​ ಮಂಡನೆ ಮಾಡುತ್ತಿದ್ದಾರೆ. ಹೊಸ ಸರ್ಕಾರದ ಬಗ್ಗೆ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದ್ದು, ಈ ಬಾರಿಯ ಬಜೆಟ್‌ ಗಾತ್ರ 3.35 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ. ಮಧ್ಯಾಹ್ನ 12 ಗಂಟೆಗೆ ಸಿಎಂ ಬಜೆಟ್‌ ಮಂಡಿಸಲಿದ್ದಾರೆ. ಇನ್ನೂ ಕಾಂಗ್ರೆಸ್‌ನ( Congress) ಗ್ಯಾರಂಟಿಗಳಿಗೆ (guarantee) ಸುಮಾರು 60 ಸಾವಿರ ಕೋಟಿ ಹಣವನ್ನು ಮೀಸಲಿಡಬೇಕಾಗಿದೆ. ಕಳೆದ ಫೆಬ್ರವರಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ 2023-24ನೇ ವಿತ್ತ ವರ್ಷಕ್ಕೆ ಸಂಬಂಧಿಸಿ 3,09,182 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದರು. 

ಇದನ್ನೂ ವೀಕ್ಷಿಸಿ:  ಕೊಡಗು, ಉಡುಪಿ, ಕಾರವಾರದಲ್ಲಿ ಭಾರಿ ಮಳೆ: ದೇಗುಲ ಜಲಾವೃತ, ಮನೆಗಳಿಗೂ ನುಗ್ಗಿದ ನೀರು

Video Top Stories