ಬಿಜೆಪಿ, ಕಾಂಗ್ರೆಸ್‍ಗೆ ಟಕ್ಕರ್ ಕೊಡ್ತಾರಾ ಈಶ್ವರಪ್ಪ..? ಈ ಬಾರಿ ಯಾರ ಪರ ಮಲೆನಾಡಿನ ಮತದಾರರ ಒಲವು ..?

ಈ ಬಾರಿ ಶಿವಮೊಗ್ಗದಲ್ಲಿ ತ್ರಿಕೋನ ಸ್ಫರ್ಧೆ ಇದ್ದು, ಬಿ.ವೈ.ರಾಘವೇಂದ್ರಗೆ ಮೋದಿ ಗ್ಯಾರಂಟಿ ಇದ್ರೆ, ಗೀತಾ ಶಿವರಾಜ್‌ಕುಮಾರ್‌ಗೆ ಕಾಂಗ್ರೆಸ್‌ ಗ್ಯಾರಂಟಿಯೇ ಪ್ರಮುಖವಾಗಿದೆ.

Share this Video
  • FB
  • Linkdin
  • Whatsapp

ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣಾ (Shivamogga Lok Sabha constituency) ರಣ ಕಣ ಹೇಗಿದೆ? ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ಫೈಟ್ ಹೇಗಿದೆ. ಶಿವಮೊಗ್ಗವನ್ನು ಬಿಜೆಪಿಯ ಭದ್ರಕೋಟೆ ಎಂದೇ ಹೇಳಬಹುದು. ಈ ಬಾರಿ ಮಲೆನಾಡಿನಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶಿವಮೊಗ್ಗದಲ್ಲಿ(Shivamogga) ಈ ಬಾರಿ ತ್ರಿಕೋನ ಸ್ಫರ್ಧೆ ಇದ್ದು, ಬಿ.ವೈ.ರಾಘವೇಂದ್ರಗೆ(BY Raghavendra) ಮೋದಿ ಗ್ಯಾರಂಟಿ ಇದ್ರೆ, ಗೀತಾ ಶಿವರಾಜ್‌ಕುಮಾರ್‌ಗೆ(Geeta Shivarajkumar) ಕಾಂಗ್ರೆಸ್‌ ಗ್ಯಾರಂಟಿಯೇ ಪ್ರಮುಖವಾಗಿದೆ. ಇದರ ನಡುವೆ ಹಿಂದುತ್ವದ ಅಸ್ತ್ರದ ಜೊತೆಗೆ ಕೆ.ಎಸ್‌.ಈಶ್ವರಪ್ಪ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಈಶ್ವರಪ್ಪ ಟಕ್ಕರ್‌ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಮಾನಸಿಕವಾಗಿ ಪೆಟ್ಟು ಬೀಳಲಿದ್ದು, ವ್ಯಾಪಾರಿಗಳಿಗೆ ಲಾಭದಾಯಕ ದಿನ

Related Video