ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ಅಣ್ಣ-ತಮ್ಮಂದಿರ ಬಾಂಧವ್ಯದ ಬಗ್ಗೆ ಒಂದು ನೋಟ. ಡಿಕೆ ಸುರೇಶ್ ಅವರ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಅಣ್ಣನ ಮೇಲಿನ ಅಪಾರ ಪ್ರೀತಿಯ ಹಿಂದಿನ ಗುಟ್ಟೇನು? ಡಿಕೆಶಿಗೆ ತಮ್ಮನ ಬೆಂಬಲ ಎಷ್ಟು ಮುಖ್ಯ?

Share this Video
  • FB
  • Linkdin
  • Whatsapp

ಕನಕಪುರದ ಅಣ್ಣ ತಮ್ಮನನ್ನು ಅಪೂರ್ವ ಸಹೋದರರೆಂದು ಲೇವಡಿ ಮಾಡಿದ್ರು ಮಾಜಿ ಪ್ರಧಾನಿ ದೇವೇಗೌಡ್ರು..! ಗೌಡರ ವ್ಯಂಗ್ಯಕ್ಕೆ ಡಿಕೆ ಸಹೋದರನ ಖಡಕ್ ಉತ್ತರ..! "ನಿಮ್ಮ ವಂಶದಂತಲ್ಲ ನಾವು, ನಿಮ್ಮ ಮಕ್ಕಳಂತಲ್ಲ ಈ ಅಣ್ತಮ್ಮ"-ಗೌಡರ ವಿರುದ್ಧ ಸಿಡಿದೆದ್ದ ಡಿಕೆ ಬ್ರದರು. ಅಣ್ಣನನ್ನು ಬಿಟ್ಟುಕೊಡದ ತಮ್ಮ, ತಮ್ಮನನ್ನೇ ಮಗ ಅನ್ನೋ ಅಣ್ಣ..! ಹೌದು ರೀ.. ನಾನು ನಮ್ಮಣ್ಣ.. ಅಪೂರ್ವ ಸಹೋದರರೇ, ಏನಿವಾಗ..? ಸಿಡಿದೆದ್ದ ಸಹೋದರ..! ಅಷ್ಟಕ್ಕೂ ಒಡ ಹುಟ್ಟಿದವನೇ ಕನಕಪುರ ಬಂಡೆಯ ಅಸಲಿ ಶಕ್ತಿಯಾಗಿದ್ದು ಹೇಗೆ..? ಏನೀದು ಡಿಕೆ ಸಹೋದರರ ಜನ್ಮ ಜನ್ಮದ ಅನುಬಂಧ...?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆ ಸುರೇಶ್ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..? 

ರಾಜಕಾರಣ, ರಾಜಕೀಯ ಟೀಕೆ-ಟಿಪ್ಪಣಿಗಳು ಏನೇ ಇರ್ಲಿ... ಅಣ್ಣ-ತಮ್ಮಂದಿರು ಅಂತ ಬಂದ್ರೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವ್ರ ಬಾಂಧವ್ಯ ನಿಜಕ್ಕೂ ಅದ್ಭುತ.. ದೇಹ ಮಣ್ಣಿಗೆ, ಉಸಿರು ನಿನಗೆ ಅನ್ನೋ ತಮ್ಮ ಡಿಕೆ ಸುರೇಶ್.. ಹಾಗಾದ್ರೆ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..?

ಡಿಕೆ ಸುರೇಶ್ ನನ್ನ ತಮ್ಮನಲ್ಲ, ಮಗ.. ಇದು ಸಹೋದರನ ಬಗ್ಗೆ ಡಿಕೆ ಶಿವಕುಮಾರ್ ಆಡಿದ್ದ ಮಾತು.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ತಮ್ಮನ ಅಸಲಿ ಬಲ ಏನು..? ಅಣ್ಣ-ತಮ್ಮಂದಿರು ದಾಯಾದಿಗಳಾಗೋ ಈ ಕಾಲದಲ್ಲಿ ಒಡ ಹುಟ್ಟಿದವರು ಹೇಗಿರ್ಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಡಿಕೆ ಬ್ರದರ್ಸ್. ಅಣ್ಣನಿಗೆ ತಮ್ಮ, ತಮ್ಮನಿಗೆ ಅಣ್ಣ.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ಈ ತಮ್ಮನ ಅಸಲಿ ಬಲ ಇಲ್ಲಿದೆ ನೋಡಿ.

Related Video