ಅಣ್ಣ ಸಿಎಂ ಆದ್ರೆ, ನಾನು ತುಂಬಾ ಸಂತೋಷಪಡುತ್ತೇನೆ: ಡಿಕೆ ಸುರೇಶ್‌

ಇಂದಿನ ಫಲಿತಾಂಶ ನೋಡಿ ತುಂಬಾ ಸಂತೋಷವಾಗಿದೆ. ಡಿಕೆಶಿ ಸಿಎಂ ಆದ್ರೆ ತುಂಬಾ ಸಂತೋಷ ಪಡುತ್ತೇನೆ ಎಂದು ಡಿಕೆ ಸುರೇಶ್‌ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಂದಿದ್ದು, ಈ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಫಲಿತಾಂಶ ನೋಡಿ ಬಹಳ ಸಂತೋಷವಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಕರ್ನಾಟಕ ಜನ ಉಳಿಸಿದ್ದಾರೆ. ನಮ್ಮ ಮೇಲೆ ಜವಬ್ದಾರಿ ಹೆಚ್ಚಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮ ವರಿಷ್ಠರ ಮೇಲಿದೆ. ನಾನು ಈ ಫಲಿತಾಂಶವನ್ನು ನಿರೀಕ್ಷೆ ಮಾಡಿದ್ದೆ, ಅದೇ ರೀತಿ ಸಹ ಬಂದಿದೆ. ಡಿ.ಕೆ. ಶಿವಕುಮಾರ್‌ ಸಿಎಂ ಆದ್ರೆ ನಾನು ತುಂಬಾ ಖುಷಿ ಪಡುತ್ತೇನೆ. ಆದ್ರೆ ಸಿಎಂ ಮಾಡಿ ಎಂದು ಬೇಡಿಕೆ ಇಡುವುದಿಲ್ಲ. ಸಿಎಂ ಯಾರು ಆಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಹೆಚ್‌ಡಿಕೆ ಹಾಸನಕ್ಕೆ ಕೊಟ್ಟ ಕೊಡುಗೆಯಿಂದ ಜನ ಸ್ವರೂಪ್‌ ಗೆಲ್ಲಿಸಿದ್ದಾರೆ: ರೇವಣ್ಣ

Related Video