Asianet Suvarna News Asianet Suvarna News

ಹೆಚ್‌ಡಿಕೆ ಹಾಸನಕ್ಕೆ ಕೊಟ್ಟ ಕೊಡುಗೆಯಿಂದ ಜನ ಸ್ವರೂಪ್‌ ಗೆಲ್ಲಿಸಿದ್ದಾರೆ: ರೇವಣ್ಣ

ಸ್ವರೂಪ್‌ ಗೆಲುವಿನ ಬಗ್ಗೆ ಹೆಚ್‌.ಡಿ. ರೇವಣ್ಣ ಮಾತನಾಡಿದ್ದು, ದೇವೇಗೌಡ ,ಕುಮಾರಸ್ವಾಮಿ ಹಾಕಿಕೊಟ್ಟ ದಾರಿಯಲ್ಲಿ ನಡೆಯಲಿ ಎಂದು ಸಲಹೆ ನೀಡಿದ್ದಾರೆ.

ಹಾಸನ: ಜಿಲ್ಲೆಯಲ್ಲಿ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಜೆಡಿಎಸ್‌ನ ಸ್ವರೂಪ್‌ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರೀತಂ ಗೌಡ ಸೋತಿದ್ದಾರೆ. ಇನ್ನೂ ಸ್ವರೂಪ್‌ ಗೆಲುವಿನ ಬಗ್ಗೆ ಹೆಚ್‌.ಡಿ. ರೇವಣ್ಣ ಮಾತನಾಡಿದ್ದು, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರ 60 ವರ್ಷದ ರಾಜಕಾರಣ ಹಾಗೂ ಕುಮಾರಸ್ವಾಮಿ ಅವರ ಕೆಲಸದಿಂದ ಇಂದು ಸ್ವರೂಪ್‌ ಗೆದ್ದಿದ್ದಾರೆ. ಹಾಸನ ನಗರಕ್ಕೆ ಕುಮಾರಸ್ವಾಮಿ ಕೊಟ್ಟ ಕೊಡುಗೆಯಿಂದ ಇಂದು ಗೆಲುವು ದೊರೆತಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸಿದ್ದೇವೆ. ಬಡವರ ಕೆಲಸ ಮಾಡಿ, ದೇವೇಗೌಡ, ಕುಮಾರಸ್ವಾಮಿ ಹಾಕಿ ಕೊಟ್ಟ ದಾರಿಯಲ್ಲಿ ನಡೆಯಲಿ ಎಂದು ಹೆಚ್‌.ಡಿ. ರೇವಣ್ಣ ಸ್ವರೂಪ್‌ಗೆ ಸಲಹೆ ನೀಡಿದರು.

ಇದನ್ನೂ ವೀಕ್ಷಿಸಿ: ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ, ಮುಂದೆ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವೆ : ಸಂತೋಷ್‌ ಲಾಡ್‌