Asianet Suvarna News Asianet Suvarna News

ಅಲ್ಲಿ ಜೋಡೋ ಯಾತ್ರೆ..ಇಲ್ಲಿ ಛೋಡೋ ಪಾಲಿಟಿಕ್ಸ್:ಸಿದ್ದು ಶಿಷ್ಯರಿಗೆ ಭಾರತ್ ಜೋಡೋದಿಂದ ಗೇಟ್‌ಪಾಸ್..!

ಜೋಡೋ ಛೋಡೋ, ಕೈ ಕೈ ಕಾಳಗ. ಇದು ಕಾಂಗ್ರೆಸ್ ಕೋಟೆಯಲ್ಲಿ ಧಗಧಗಿಸ್ತಿರೋ ಯುದ್ಧ, ಗದಾಯುದ್ಧ, ಮಲ್ಲಯುದ್ಧ. ಸಿದ್ದರಾಮಯ್ಯ ಗರಡಿಯ ಪೈಲ್ವಾನ್'ಗಳ ವಿರುದ್ಧ ಜಿದ್ದಿಗೆ ಬಿದ್ರಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್..? ಹಠಕ್ಕೆ ಬಿದ್ದ ಬಂಡೆಗೆ ಸಿದ್ದು ಗರಡಿಮನೆಯ ಹುಡುಗ್ರು ಕೊಟ್ಟದ್ದೆಂಥಾ ಡಿಚ್ಚಿ...? ಅಸಲಿಗೆ ಕೈ ಕೋಟೆಯೊಳಗೆ ಏನಾಗ್ತಿದೆ..? ನೋಡೋಣ ಬನ್ನಿ.

ಬೆಂಗಳೂರು, (ಸೆಪ್ಟೆಂಬರ್.20): ಕಾಂಗ್ರೆಸ್ ಪಾಳೆಯದಲ್ಲಿ ಜೋಡೋ ಛೋಡೋ ಪಾಲಿಟಿಕ್ಸ್ ಜೋರಾಗಿದೆ. ಇದರ ಮಧ್ಯೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಅಂತರ್‌ಯುದ್ಧ ಶುರುವಾಗಿದೆ.

ಸಿದ್ದರಾಮಯ್ಯ ಬಣದ ಮೇಲೆ ಕಡಿಮೆಯಾಗದ ಸಿಟ್ಟು: ಹಲವು ಶಾಸಕರಿಗೆ ಡಿಕೆಶಿ ಶಾಕ್!

ಭಾರತ್ ಜೋಡೋ ಯಾತ್ರೆಗೆ ಸಿದ್ದರಾಮಯ್ಯ ಬಣದವರು ಸಾಥ್ ಕೊಡ್ತಿಲ್ಲ ಅನ್ನೋದು ಡಿಕೆಶಿ ಅಸಮಾಧಾನಕ್ಕೆ ಕಾರಣ. ಟಿಕೆಟ್ ಆಯ್ಕೆಯಲ್ಲಿ ಫೈನಲ್ ಡಿಸಿಶನ್ ನಂದೇ ಅಂತ ಡಿಕೆಶಿ ರೊಚ್ಚಿಗೆದ್ದು ಅಬ್ಬಿರಿಸಿರೋದು ಇದೇ ಕಾರಣಕ್ಕೆ. ಹಾಗಾದ್ರೆ ನಿಜಕ್ಕೂ ಸಿದ್ದು ಬಣ ಭಾತ್ ಜೋಡೋ ಯಾತ್ರೆಗೆ ಸಾಥ್ ಕೊಡ್ಲಿಲ್ವಾ..? ಡಿಕೆ ವಿರೋಧಿಗಳಿಗೆ ಬಂಡೆ ಬಗ್ಗೆ ಇರೋ ಭಯ ಏನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

Video Top Stories