Asianet Suvarna News Asianet Suvarna News

ಅನುದಾನ ವಿಷಯದಲ್ಲಿ ಅನ್ಯಾಯವಾದ್ರೂ ಸುಮ್ಮನಿದ್ದಾರಾ ಬಿಜೆಪಿ ಸಂಸದರು ? ಎಷ್ಟು ಹಾಲಿ ಸಂಸದರಿಗೆ ಟಿಕೆಟ್ ಸಿಗುತ್ತೆ..?

ಅನುದಾನದ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪ ಸೇರಿದಂತೆ, ಹಲವು ಪ್ರಶ್ನೆಗಳಿಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.

ನಮ್ಮ ಪಕ್ಷ ಹಾಗೂ ಕಾರ್ಯಕರ್ತರು, ನಾವು ಐದು ವರ್ಷನೂ ಜನರ ಮಧ್ಯೆಯೇ ಕೆಲಸ ಮಾಡಿದ್ದೇವೆ. ಹಾಗಾಗಿ ಚುನಾವಣೆ ಬಂದಾಗ ನಮಗೆ ಏನು ವಿಶೇಷ ಅನಿಸಲ್ಲ ಎಂದು ಸಂಸದ ತೇಜಸ್ವಿ ಸೂರ್ಯ(Tejasvi Surya)ಹೇಳಿದ್ದಾರೆ. ಪ್ರಧಾನಿ ಮೋದಿ(Narendra Modi) ನಿರಂತರವಾಗಿ ನಾವು ಜನರ ಮಧ್ಯೆ ಇರುವಂತ ಸಂಪ್ರದಾಯವನ್ನು ಹಾಕಿಕೊಟ್ಟಿದ್ದಾರೆ. ಹಾಗಾಗಿ ನಾವು ಚುನಾವಣೆಗೆಂದು ವಿಶೇಷ ತಯಾರಿ ಮಾಡುತ್ತಿಲ್ಲ. ಹಿಂದೆಗಿಂತ ಹೆಚ್ಚು ಸೀಟ್‌ನನ್ನು ನಮ್ಮ ಪಕ್ಷ ಈ ಬಾರಿ ಪಡೆಯಲಿದೆ. ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕತೆಯ ಸೈಜ್‌ ದೊಡ್ಡಾಗಿದೆ. ಪ್ರತಿ ರಾಜ್ಯಕ್ಕೂ ಹಣ ಮೂರು ವಿಧದಲ್ಲಿ ಬರುತ್ತದೆ. ಸ್ಟೇಟ್‌ ಜಿಎಸ್‌ಟಿಯಲ್ಲಿ ನೂರಕ್ಕೆ ನೂರರಷ್ಟು ಆ ರಾಜ್ಯಕ್ಕೆ ಬರುತ್ತದೆ. ಐಜಿಎಸ್‌ಟಿಯನ್ನು ನಿರ್ಧಾರ ಮಾಡೋದು ಫೈನಾನ್ಸ್‌ ಕಮಿಷನ್‌ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  Dinesh Gundu Rao: ಹಿಂದೂ ದೇವಾಲಯಗಳಿಂದ ಹಣ ಪಡೆಯಬಹುದು ಆದ್ರೆ ಚರ್ಚ್, ಮಸೀದಿಗಳಿಂದ ಬೇಡ್ವಾ?

Video Top Stories