
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ಮತ್ತು ಹಿಂದುತ್ವದ ಅಲೆ ಬಲಪಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹೊಸ ಕಾರ್ಯತಂತ್ರ ರೂಪಿಸುತ್ತಿದೆ
ನವದೆಹಲಿ (ಡಿ.5): ಭಾರತದ ರಾಜಕೀಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ಮತ್ತು ಹಿಂದುತ್ವದ ಅಲೆಯನ್ನು ಮತ್ತಷ್ಟು ಬಲಪಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮಹತ್ವದ ಕಾರ್ಯತಂತ್ರವನ್ನು ಹೆಣೆಯುತ್ತಿದೆ.
ಭವ್ಯ ರಾಮಮಂದಿರದ ಮೇಲೆ ರಾರಾಜಿಸಿದ ಭಗವಾಧ್ವಜ; ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಹರಿಯಾಣ ಮತ್ತು ಮಹಾರಾಷ್ಟ್ರದ ಗೆಲುವುಗಳ ನಂತರ, RSS ನ ಸಂಪೂರ್ಣ ಗಮನ ಈಗ ಉತ್ತರ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ. ಯೋಗಿ ಆದಿತ್ಯನಾಥ್ ಅವರ ವರ್ಚಸ್ಸು ಮತ್ತು ಹಿಂದುತ್ವದ ಅಜೆಂಡಾಕ್ಕೆ RSS ನ ಸಾಂಸ್ಥಿಕ ಬಲವು ಬೆಂಬಲವಾಗಿ ನಿಂತಿದೆ.
ಉತ್ತರ ಪ್ರದೇಶದ ಪ್ರತಿ ಮೂಲೆಯಲ್ಲಿ ಬಿಜೆಪಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಘವು ಗುಪ್ತಗಾಮಿನಿಯಂತೆ ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ಹೊಸ ವರ್ಷದ ಆರಂಭದಲ್ಲಿಯೇ ಯೋಗಿ ಅವರ ರಾಜಕೀಯ ಬತ್ತಳಿಕೆಗೆ RSS ನಿಂದ ಹೊಸ "ಬ್ರಹ್ಮಾಸ್ತ್ರ" ಸೇರ್ಪಡೆಯಾಗುತ್ತಿದೆ.