Dinesh Gundu Rao: ಹಿಂದೂ ದೇವಾಲಯಗಳಿಂದ ಹಣ ಪಡೆಯಬಹುದು ಆದ್ರೆ ಚರ್ಚ್, ಮಸೀದಿಗಳಿಂದ ಬೇಡ್ವಾ?
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಮನೆಯವರು ಸ್ಫರ್ಧೆ ಮಾಡೋದು ನಿಜನಾ ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದೊಂದು ವದಂತಿ ಎಂದು ಹೇಳಿದರು. ಅಲ್ಲದೇ ನಾನು ಕೂಡ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ತೀರ್ಮಾನ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಈ ಬಾರಿ ಲೋಕಸಭೆಯಲ್ಲಿ ನಾವು 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ಭಯವಿಲ್ಲ ಎಂದರು. ಇರುವ ಆದಾಯ ಸೋರಿಕೆ ಆಗದೇ, ಇರುವುದು ಬರುವುದಕ್ಕೆ ಏನು ಬೇಕೋ ಅದನ್ನು ನಾವು ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಮೋದಿ ಅರಬ್ ದೊರೆಯನ್ನು ಬ್ರದರ್ ಅಂದ್ರೆ ಓಕೆನಾ? ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ನಿಮಗೆ ಏನನಿಸುತ್ತೆ?