Asianet Suvarna News Asianet Suvarna News

ಲಸಿಕೆ ನೀಡಿಕೆ ಭಾರತ ವಿಕ್ರಮ.. ಉಪಕಣದಲ್ಲ ಹಣದ ಅಕ್ರಮ!

* ಕರ್ನಾಟಕಲ್ಲಿ ಕಾವೇರಿದ ಉಪಚುನಾವಣಾ ಅಖಾಡ
* 'ದುಡ್ಡು ಕೊಟ್ರೆ ತಗೊಳಿ... ಬೇಡ ಅನ್ನೋರು ಯಾರು!
* 'ಕೇಸರಿ ಕಂಡ್ರೆ ನನಗೆ ಭಯ ಇಲ್ಲ ಎಂದ ಸಿದ್ದರಾಮಯ್ಯ
* ನೂರು ಕೋಟಿ ಜನರಿಗೆ ಲಸಿಕೆ ಕೊಟ್ಟ ಭಾರತ

ಬೆಂಗಳೂರು(ಅ. 21)  ಹಾನಗಲ್ (Hangal)ಮತ್ತು ಸಿಂಧಗಿ (Sindhagi) ಉಪಚುನಾವಣಾ (Karnataka By Poll)ಅಖಾಡ ರಂಗೇರಿದೆ.  ಬಿಜೆಪಿಯವರು(BJP) ದುಡ್ಡು ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್(Congress) ಆರೋಪಿಸಿದೆ. ಇದಕ್ಕೆ ಬಿಜೆಪಿ ಸಹ ಸರಿಯಾದ ರೀತಿ ಠಕ್ಕರ್ ನೀಡಿದೆ.ಸಿದ್ದರಾಮಯ್ಯ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ. 

ಕೆಲವು ಮಂತ್ರಿಗಳ "ತೆರೆದ ದೃಶ್ಯ"ಗಳು ಶೀಘ್ರದಲ್ಲೇ ರಾರಾಜಿಸಲಿವೆ: ಶರವಣ ಬಾಂಬ್

ಕೊರೋನಾ (Corona Vaccine) ಲಸಿಕೆ ನೀಡಿಕೆಯಲ್ಲಿ ಭಾರತ (India) ದಾಖಲೆ ನಿರ್ಮಿಸಿದೆ. ಒಂದು ಕೋಟಿ ಜನರಿಗೆ ಲಸಿಕೆ ನೀಡಿದ ಭಾರತ ಅತಿ ದೊಡ್ಡ ಲಸಿಕಾ ಅಭಿಯಾನದ ಯಶಸ್ಸಿನ ಹಾದಿಯಲ್ಲಿದೆ. ಭಾರತ ಲಸಿಕೆ ನೀಡಿಕೆಯಲ್ಲಿ ಜಗತ್ತೇ ಮೆಚ್ಚುವ ಸಾಧನೆ ಮಾಡಿದೆ.  ಲಸಿಕೆ ಆರಂಭದ ದಿನಗಳಲ್ಲಿ ಕೆಲ ನಾಯಕರು ನೀಡಿದ್ದ ಹೇಳಿಕೆ ಮಾತ್ರ ಮರೆಯುವಂತೆ ಇಲ್ಲ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..